ನಂದಿ ಬೆಟ್ಟದ ತಪ್ಪಲಿನಲ್ಲಿ ಪವಿತ್ರ ವೃಕ್ಷ ಉತ್ಸವ ಆಯೋಜನೆ

ಚಿಕ್ಕಬಳ್ಳಾಪುರ,

ಅಕ್ಟೋಬರ್
3:
ಭಾರತದಲ್ಲಿ,
ಹಬ್ಬಗಳು
ನಮ್ಮ
ರಾಷ್ಟ್ರದ
ಅಂತರ್ಗತ
ಭಾಗವಾಗಿದ್ದು
ಅದು
ಜನಸಾಮಾನ್ಯರನ್ನು
ಒಟ್ಟಿಗೆ
ಬೆಸೆಯುವ
ಬಂಧವಾಗಿದೆ.
ಇವು
ಶ್ರೀಮಂತ
ಸಂಸ್ಕೃತಿ,
ಸಂಪ್ರದಾಯ,
ವೈವಿಧ್ಯತೆ,
ಧಾರ್ಮಿಕ
ನಂಬಿಕೆಗಳನ್ನು
ಬಿಂಬಿಸುತ್ತದೆ
ಮತ್ತು
ಬಹಳಷ್ಟು
ಬಾರಿ
ಜನಸಾಮಾನ್ಯರಿಗೆ
ಶಿಕ್ಷಣ
ನೀಡುವ
ಮಾಧ್ಯಮವಾಗಿದೆ.
ಇದಕ್ಕೆ
ಅನುಗುಣವಾಗಿ,
ಕರ್ನಾಟಕ
ಪರಿಸರ
ಪ್ರವಾಸೋದ್ಯಮ
ಅಭಿವೃದ್ಧಿ
ಮಂಡಳಿ;
ಡಿಸ್ಕವರಿ
ವಿಲೇಜ್
ಮತ್ತು
7
ಟ್ರೀಸ್
ಫಾರ್
ಲೈಫ್
ವತಿಯಿಂದ
ಪವಿತ್ರ
ಮರ
ಉತ್ಸವವನ್ನು
ಇಂದು
ನಂದಿ
ಬೆಟ್ಟದ
ತಪ್ಪಲಲ್ಲಿ
ಹಮ್ಮಿಕೊಳ್ಳಲಾಗಿತ್ತು.

id="toptextpromo">
id='are-slot-1'
class='oiad
oi-axt
oiadv'>

ಪವಿತ್ರ

ಮರ
ಉತ್ಸವ
(ಸೇಕ್ರೆಡ್
ಟ್ರೀ
ಫೆಸ್ಟಿವಲ್)
ನಮ್ಮ
ಪರಿಸರ
ವ್ಯವಸ್ಥೆಯಲ್ಲಿ
ಮರಗಳ
ಪ್ರಾಮುಖ್ಯತೆ
ಮತ್ತು
ಜನರ
ಭಾವನೆಗಳೊಂದಿಗೆ
ಅದರ
ಆಳವಾದ
ಸಂಬಂಧದ
ಬಗ್ಗೆ
ಜನಸಾಮಾನ್ಯರಿಗೆ
ಅರಿವು
ಮೂಡಿಸುವ
ಗುರಿಯನ್ನು
ಹೊಂದಿದೆ.
ಉತ್ಸವ
ಮರಗಳು
ಹೊಂದಿರುವ
ಅಸಂಖ್ಯಾತ
ಪ್ರಯೋಜನಗಳನ್ನು
ಮನೆಗೆ
ಕೊಂಡೊಯ್ಯುವ
ಗುರಿಯನ್ನು
ಹೊಂದಿದೆ
ಮತ್ತು
ಮರಗಳ
ಸಂರಕ್ಷಣೆಯು
ಮನುಕುಲಕ್ಕೆ
ಮುಂದಿನ
ದಿನಗಳಲ್ಲಿ
ಹೇಗೆ
ಸಹಾಯ
ಮಾಡುತ್ತದೆ
ಎಂಬ
ಸಂದೇಶವನ್ನು
ನೀಡುತ್ತದೆ.

id='are-slot-2'
class='oiad
oi-axt
oiadv'>

 'ಕದಂಬ ವೃಕ್ಷ ಉತ್ಸವ'

'ಕದಂಬ ವೃಕ್ಷ ಉತ್ಸವ'

ಈ ಮರ ಉತ್ಸವವನ್ನು 'ಕದಂಬ ವೃಕ್ಷ ಉತ್ಸವ' ಎಂಬ ವಿಷಯದ ಸುತ್ತ ಹೆಣೆಯಲಾಗಿದೆ. ಏಕೆಂದರೆ ಇದು ರಾಜ್ಯದ ಶ್ರೀಮಂತ ಪರಂಪರೆ ಮತ್ತು ಮರಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಸಂಪರ್ಕ ಎರಡನ್ನೂ ಪ್ರತಿಬಿಂಬಿಸುತ್ತದೆ. ಅಕ್ಟೋಬರ್ ತಿಂಗಳಲ್ಲಿ ಕದಂಬ ಅರಳುತ್ತದೆ. ಈ ಹಬ್ಬದ ಭಾಗವಾಗಿ, ಎಲ್ಲ ವಯೋಮಾನದ ಜನರಿಗೆ ಮರಗಳ ನಡಿಗೆ, ಕಥೆ ಹೇಳುವುದು, ಸಂವಾದ ಮತ್ತು ಇನ್ನೂ ಹೆಚ್ಚಿನ ಸಂಖ್ಯೆಯ ದೃಶ್ಯ ಮತ್ತು ಅನುಭವದ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.

ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ

ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ

ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ (ಕೆಇಡಿಬಿ) ಅಧ್ಯಕ್ಷರಾದ ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಈ ಸಂದರ್ಭದಲ್ಲಿ ಮಾತನಾಡಿ, "ಸಾಂಕ್ರಾಮಿಕ ರೋಗದಿಂದಾಗಿ ನಮ್ಮ ಸಮುದಾಯಕ್ಕೆ 2021 ಅತ್ಯಂತ ಸವಾಲಿನ ವರ್ಷವಾಗಿದೆ. ಆದಾಗ್ಯೂ, ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸುವ ಮೂಲಕ ನಮ್ಮ ಆರೋಗ್ಯವನ್ನು ಸುಧಾರಿಸಲು ಇದು ನಮಗೆ ಪರಿಪೂರ್ಣ ಅವಕಾಶವನ್ನು ಒದಗಿಸುತ್ತದೆ. ಮರಗಳು ನಮ್ಮೆಲ್ಲರನ್ನೂ ಒಂದುಗೂಡಿಸುತ್ತವೆ ಮತ್ತು ನಮ್ಮನ್ನು ಪ್ರಕೃತಿಯೊಂದಿಗೆ ಸಂಪರ್ಕಿಸುತ್ತವೆ. ಆದ್ದರಿಂದ ಕೆಇಡಿಬಿ ಈ ವೃಕ್ಷೋತ್ಸವವನ್ನು ಆಯೋಜಿಸಿದ್ದು, ಇದು ನಮ್ಮ ಸುದೀರ್ಘ ಕಾಲದ ಮಾನವ-ಪ್ರಕೃತಿ ಸಂಬಂಧವನ್ನು ನಮ್ಮ ಯೋಗಕ್ಷೇಮಕ್ಕಾಗಿ ಪೋಷಿಸುವ ನಮ್ಮ ಸಂಪ್ರದಾಯವನ್ನು ಸಂಯೋಜಿಸುತ್ತದೆ. ಕದಂಬವು ಜನರಿಂದ ಪೂಜಿಸಲ್ಪಡುವ ಒಂದು ಮಹತ್ವದ ವೃಕ್ಷವಾಗಿದೆ ಮತ್ತು ಅದರ ಹಣ್ಣುಗಳು ಅಕ್ಟೋಬರ್ / ನವೆಂಬರ್ ವರೆಗೆ ಲಭ್ಯವಿರುತ್ತವೆ, ಮಾಗಿದ ಮತ್ತು ರಾತ್ರಿಯಲ್ಲಿ ಅವು ಸುಗಂಧವನ್ನು ತುಂಬುತ್ತವೆ. ಈ ಉತ್ಸವವನ್ನು ಆಯೋಜಿಸುವ ಮೂಲಕ ನಾವು ಜನಸಾಮಾನ್ಯರ ಪ್ರಜ್ಞೆಯನ್ನು ಜಾಗೃತಗೊಳಿಸುತ್ತೇವೆ ಮತ್ತು ಮರ ಮತ್ತು ಸಸ್ಯ ಜೀವನದ ಬಗ್ಗೆ ಅವರ ಗೌರವವನ್ನು ಪುನರುಜ್ಜೀವನಗೊಳಿಸುತ್ತೇವೆ ಎಂದು ನಾವು ಭಾವಿಸುತ್ತೇವೆ" ಎಂದು ಹೇಳಿದರು.

ಸೆವೆನ್‍ಟ್ರೀಸ್ ಫಾರ್ ಲೈಫ್

ಸೆವೆನ್‍ಟ್ರೀಸ್ ಫಾರ್ ಲೈಫ್

ಈ ಸಂದರ್ಭದಲ್ಲಿ, ಜೀವನಕ್ಕಾಗಿ ಏಳು ಮರಗಳು (ಸೆವೆನ್‍ಟ್ರೀಸ್ ಫಾರ್ ಲೈಫ್) ಅಭಿಯಾನವನ್ನು ಪ್ರಾರಂಭಿಸಲಾಯಿತು. ಈ ಅಭಿಯಾನವು ನಮ್ಮ ಉಳಿವಿಗಾಗಿ ಏನೇನು ಬೇಕೋ ಅದನ್ನು ಪ್ರಕೃತಿಗೆ ಮರಳಿ ನೀಡುವ ಗುರಿಯನ್ನು ಹೊಂದಿದೆ. ಸೆವೆನ್‍ಟ್ರೀಸ್ ಫಾರ್ ಲೈಫ್ ಸಂಸ್ಥಾಪಕ ರಾಮಕೃಷ್ಣ ಗಣೇಶ್ ಅವರ ಪ್ರಕಾರ, "ವರ್ಷಕ್ಕೆ ಏಳು ಮರಗಳನ್ನು ನೆಟ್ಟು, ಕನಿಷ್ಠ 3 ವರ್ಷಗಳ ಕಾಲ ಅವುಗಳನ್ನು ನಿರ್ವಹಿಸುವ ಮೂಲಕ, ನಾವು ನಮ್ಮ ಉಳಿವಿಗಾಗಿ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಆಮ್ಲಜನಕವನ್ನು ಉತ್ಪಾದಿಸಲು ಸಹಾಯ ಮಾಡಬಹುದು. ಈ ಅಭಿಯಾನವು ಎಲ್ಲ ವಯಸ್ಸಿನ ಜನಸಮುದಾಯವನ್ನು ಸಜ್ಜುಗೊಳಿಸುವ, ಹವಾಮಾನ ಬದಲಾವಣೆಯ ಬಗ್ಗೆ ಅರಿವು ಮೂಡಿಸುವ ಮತ್ತು ನಮ್ಮ ಯೋಗಕ್ಷೇಮ ಹಾಗೂ ನಮ್ಮ ಭವಿಷ್ಯದ ಪೀಳಿಗೆಗೆ ಹಸಿರು ಗ್ರಹವನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ"

Recommended Video

    ತಾಲೀಮು ವೇಳೆ ಕುಶಾಲತೋಪಿನ ಸದ್ದಿಗೆ ಗಾಬರಿ ಗೊಂಡ ಆನೆಗಳು! | Oneindia Kannada
    100 ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದರು

    100 ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದರು

    ಡಿಸ್ಕವರಿ ವಿಲೇಜ್ ಆರಂಭಿಸಿದ ಮತ್ತು ಆಯೋಜಿಸಿದ ಈ ಪವಿತ್ರ ವೃಕ್ಷ ಉತ್ಸವದಲ್ಲಿ 100 ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದರು ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ತೆಗೆಯುವ ಮೂಲಕ ನಂದಿ ಬೆಟ್ಟ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಿದರು ಮತ್ತು ಪವಿತ್ರ ಮರಗಳ ನಡಿಗೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಅವರಿಗೆ 'ಕರ್ನಾಟಕದಲ್ಲಿ ಕದಂಬ ಪರಂಪರೆ' ಎಂಬ ವಿಷಯದ ಬಗ್ಗೆ ಇಂಡೂಸ್ ಹಬ್ರ್ಸ್ ವ್ಯವಸ್ಥಾಪಕ ನಿರ್ದೇಶಕ ಟಿ.ಸಿ.ರವೀಂದ್ರ ಅವರಿಂದ ವಿಶೇಷ ಉಪನ್ಯಾಸವನ್ನು ನೀಡಲಾಯಿತು. ಸಂಸ್ಕೃತ ಸಾಹಿತ್ಯದಲ್ಲಿ ಕದಂಬ ಎಂಬ ವಿಷಯದ ಬಗ್ಗೆ ಸಸ್ಯಶಾಸ್ತ್ರಜ್ಞ ಡಾ.ಎಸ್.ಸುಂದರ ರಾಜನ್ ಮಾತನಾಡಿದರು.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+