Get Updates
Get notified of breaking news, exclusive insights, and must-see stories!

ಡಿಎಂಕೆ ತೊರೆದು ಬಿಜೆಪಿ ಸೇರ್ಪಡೆಯಾದ ಮಧುರೈ ಹಾಲಿ ಶಾಸಕ

ಚೆನ್ನೈ, ಮಾರ್ಚ್ 14: ಐತಿಹಾಸಿಕ ನಗರಿ ಮಧುರೈ ಕ್ಷೇತ್ರದ ಜನಪ್ರಿಯ ಶಾಸಕ ಡಾ ಪಿ ಸರವಣನ್ ಅವರು ಭಾನುವಾರದಂದು ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರ್ಪಡೆಗೊಂಡಿದ್ದಾರೆ. ಮಧುರೈನ ತಿರುಪರಂಕುಂಡ್ರಾಂ ವಿಧಾನಸಭಾ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದರು. ಆದರೆ, ಈ ಬಾರಿ ಡಿಎಂಕೆ ಟಿಕೆಟ್ ನಿರಾಕರಿಸಿತ್ತು.

ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. ತಿರುಪರಂಕುಂಡ್ರಾಂ ಕ್ಷೇತ್ರವನ್ನು ಮಿತ್ರಪಕ್ಷ ಸಿಪಿಐ (ಎಂ) ಗೆ ಡಿಎಂಕೆ ಈ ಬಾರಿ ಬಿಟ್ಟು ಕೊಟ್ಟಿದೆ. 2019ರಲ್ಲಿ ಈ ಕ್ಷೇತ್ರದಿಂದ ಸರವಣನ್ ಅವರು ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು.

ಜನಪ್ರಿಯ ವೈದ್ಯ ಕಮ್ ರಾಜಕಾರಣಿ:
ಸರವಣನ್ ಅವರ ಕುಟುಂಬದಲ್ಲಿ ಅನೇಕ ಮಂದಿ ವೈದ್ಯವೃತ್ತಿಯಲ್ಲಿದ್ದು, ಸರವಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪ್ರೈ ಲಿಮಿಟೆಡ್ , ಸೂರ್ಯ ಟ್ರಸ್ಟ್ ಮೂಲಕ ವೈದ್ಯಕೀಯ ನೆರವು ನೀಡುತ್ತಾ ಬಂದಿದ್ದಾರೆ. ಡಿಎಂಕೆ ವೈದ್ಯರ ವಿಭಾಗದ ಉಪ ನಾಯಕರಾಗಿದ್ದರು.

Tamil Nadu: DMK MLA Dr P Saravanan joins BJP

ಸಿಪಿಐ, ಸಿಪಿಐ (ಎಂ), ವಿಡುಥಲೈ ಚಿರುತೈಗಳ್ ಕಚ್ಚಿ(ವಿಸಿಕೆ), ವೈಕೋ ಅವರ ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ(ಎಂಡಿಎಂಕೆ) ಜೊತೆ ಡಿಎಂಕೆ ಮೈತ್ರಿ ಸಾಧಿಸಿದೆ.

ಏಪ್ರಿಲ್ 6ರಂದು ಒಂದೇ ಹಂತದಲ್ಲಿ ತಮಿಳುನಾಡಿನಲ್ಲಿ ಮತದಾನ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರ ಬರಲಿದೆ. ಹಾಲಿ 15ನೇ ವಿಧಾನಸಭೆ ಅವಧಿ ಮೇ 2, 2021ರಂದು ಮುಕ್ತಾಯವಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+