ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿರುಕುಳಕ್ಕೆ ನೊಂದು, ಆತ್ಮಹತ್ಯೆಗೆ ಶರಣಾದ ನಿರ್ಮಾಪಕ

By Mahesh
|
Google Oneindia Kannada News

ಚೆನ್ನೈ, ನವೆಂಬರ್ 22: ತಮಿಳು ಚಿತ್ರರಂಗ ನಿರ್ಮಾಪಕ, ನಿರ್ದೇಶಕ ಅಶೋಕ್ ಕುಮಾರ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ಫಿಲಂ ಫೈನಾನ್ಶಿಯರ್ ನೀಡುತ್ತಿದ್ದ ಮಾನಸಿಕ ಕಿರುಕುಳವೇ ಕಾರಣ ಎಂದು ಬರೆದಿದ್ದಾರೆ.

ಬಡ್ಡಿ ವ್ಯವಹಾರ ನಡೆಸಸುವ ಅಂಬುಚೆಯಿನ್ ಕಿರುಕುಳದಿಂದ ಅಶೋಕ್ ಕುಮಾರ್ ನೊಂದು ಈ ರೀತಿ ಮಾಡಿಕೊಂಡಿದ್ದಾರೆ ಎಂದು ಅಶೋಕ್ ಅವರ ಆಪ್ತರು ದೂರಿದ್ದಾರೆ. 'ಸಾಲಕ್ಕೆ ಹೆಚ್ಚು ಬಡ್ಡಿ ನೀಡುವಂತೆ ಕಿರುಕುಳ ನೀಡುತ್ತಿದ್ದ ಇದರಿಂದ ನನ್ನ ನೆಮ್ಮದಿ ಹಾಳಾಗಿದೆ' ಎಂದು ಆಪ್ತರಲ್ಲಿ ಅಶೋಕ್ ನೋವು ತೋಡಿಕೊಂಡಿದ್ದರು. ನಿರ್ಮಾಪಕ, ಕಾಲಿವುಡ್ ನಿರ್ದೇಶಕ, ನಟ ಎಂ.ಶಶಿಕುಮಾರ್ ಅವರ ಆಪ್ತ ಸಂಬಂಧಿಯಾಗಿರುವ ಅಶೋಕ್ ಆತ್ಮಹತ್ಯೆ ಪ್ರಕರಣವನ್ನು ವಲಸರವಕ್ಕಂ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಧುರೈ ಮೂಲದ ಅಶೋಕ್ ಅವರು ಆರ್ಕಾಟ್ ರಸ್ತೆಯ ಅಳ್ವಾರ್ ತಿರು ನಗರದಲ್ಲಿದ್ದ ವಸತಿ ಸಮುಚ್ಚಯದಲ್ಲಿ ವಾಸಿಸುತ್ತಿದ್ದರು. ಶಶಿಕುಮಾರ್ ಅಭಿನಯದ ಪೊರಾಲಿ, ಈಸನ್ ಅಲ್ಲದೆ ತೆರೆ ಕಾಣಬೇಕಿರುವ ಕೋಡಿ ವೀರನ್ ಚಿತ್ರದ ಸಹ ನಿರ್ಮಾಪಕರಾಗಿದ್ದ ಅಶೋಕ್ ಸಾವಿಗೆ ಚಿತ್ರರಂಗ ಕಂಬನಿ ಮಿಡಿದಿದೆ.

English summary
Film producer-director B. Ashok Kumar committed suicide in his residence in Alwarthirunagar near Valasaravakkam on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X