ಜಾತಿ, ಧರ್ಮವಿಲ್ಲದ ಪ್ರಮಾಣ ಪತ್ರ ಪಡೆದ ಭಾರತದ ಮೊದಲ ಪ್ರಜೆ ಸ್ನೇಹಾ
ಚೆನ್ನೈ, ಫೆಬ್ರವರಿ 26: ನಮಗೆಲ್ಲರಿಗೂ ತಿಳಿದಿರುವ ಹಾಗೆ ಎಲ್ಲಿಗೆ ಹೋದರೂ, ಕೆಲವು ಸರ್ಟಿಫಿಕೇಟ್ ಪಡೆಯುವಾಗ ಅಥವಾ ಅರ್ಜಿ ಸಲ್ಲಿಸುವಾಗ ಖಡ್ಡಾಯವಾಗಿ ಒಂದು ಕಾಲಂ ಭರ್ತಿ ಮಾಡಬೇಕಾಗುತ್ತದೆ ಅದೇ ಜಾತಿ.
ಆ ಕಾಲಂನಲ್ಲಿ ನಾವು ಜಾತಿಯ ಜೊತೆ ಧರ್ಮವನ್ನೂ ನಮೂದಿಸಬೇಕಾಗುತ್ತದೆ. ಕೆಲವು ಕಾನೂನಿನ ಕಾರಣಗಳಿಗಾಗಿ ನಾವು ಈ ಕಾಲಂ ಅನ್ನು ಭರ್ತಿ ಮಾಡಲೇಬೇಕಾಗುತ್ತದೆ. ಆದರೆ ತಮಿಳುನಾಡಿನ ತಿರುಪತುರ್ ಮಹಿಳೆಯೊಬ್ಬರು ಚಿಕ್ಕವರಿದ್ದಾಗಿನಿಂದಲೂ ಜಾತಿಯ ಕಾಲಂನಲ್ಲಿ ತಮ್ಮ ಜಾತಿಯನ್ನೇ ನಮೂದಿಸಿಲ್ಲ.
ಇನ್ನೊಂದು ಸ್ವಾರಸ್ಯವೆಂದರೆ ಇದೀಗ ಈ ಮಹಿಳೆ ತಹಶೀಲ್ದಾರ್ ಬಳಿ "ನನಗೆ ಯಾವುದೇ ಜಾತಿ, ಧರ್ಮವಿಲ್ಲ' ಎಂಬ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ. ಹೌದು. ಈ ಮಹಿಳೆಯ ಹೆಸರು ಎಂ.ಎ.ಸ್ನೇಹಾ ( 35). ವೃತ್ತಿಯಲ್ಲಿ ವಕೀಲೆ.

ಬಹಳ ಸಮಯದಿಂದ ಈ ರೀತಿ ಪ್ರಮಾಣಪತ್ರ ಪಡೆಯಬೇಕೆಂದುಕೊಂಡಿದ್ದ ಸ್ನೇಹಾಗೆ ಕೊನೆಗೂ ತಿರುಪಟ್ಟೂರಿನ ತಹಶೀಲ್ದಾರ್ ಟಿ.ಎಸ್.ಸತ್ಯಮೂರ್ತಿ ಬಳಿ ಪ್ರಮಾಣ ಪತ್ರ ಸಿಕ್ಕಿದೆ. ಈ ಮೂಲಕ ಇಂತಹದೊಂದು ಪ್ರಮಾಣ ಪತ್ರ ಪಡೆದುಕೊಂಡ ದೇಶದ ಮೊದಲ ಪ್ರಜೆ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ ಸ್ನೇಹಾ.
ಸ್ನೇಹಾ ಯಾಕೆ ಇಂತಹದೊಂದು ಪ್ರಮಾಣ ಪತ್ರ ಪಡೆದರು? ಅವರ ಉದ್ದೇಶವೇನು? ಮುಂತಾದ ವಿವರಗಳಿಗಾಗಿ ಈ ಲೇಖನ ಓದಿ...
ಸ್ನೇಹಾ ಕುಟುಂಬದವರು ಮೊದಲಿನಿಂದಲೂ ಜಾತಿ ಮತ್ತು ಧರ್ಮದ ವಿರೋಧಿಗಳು. ಅವರು ಬೆಳೆದು ಬಂದ ಮನೆಯ ವಾತವರಣವೂ ಹಾಗೆಯೇ ಇತ್ತು. "ಅತ್ತೆ, ಮಾವ ಕೂಡ ವಕೀಲ ವೃತ್ತಿ ಮಾಡುತ್ತಿದ್ದಾರೆ. ಮತ್ತೆ ಅವರಿಬ್ಬರೂ ಬೇರೆಬೇರೆ ಜಾತಿಯವರು. ಎಲ್ಲಕ್ಕಿಂತ ಹೆಚ್ಚಾಗಿ ವಿಚಾರವಾದಿಗಳು ಮತ್ತು ಎಡಪಂಥೀಯರು" ಎಂದು ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ ಸ್ನೇಹಾ.
"ಯಾವುದೇ ಪ್ರಮಾಣಪತ್ರ ಕೊಟ್ಟಾಗಲೂ ನಾನು ಜಾತಿ, ಧರ್ಮದ ಜಾಗವನ್ನು ಭರ್ತಿ ಮಾಡುತ್ತಿರಲಿಲ್ಲ. ಶಾಲೆಯ ಪ್ರಮಾಣ ಪತ್ರಗಳಲ್ಲೂ ಕೂಡ. ಜಾತಿ, ಧರ್ಮವನ್ನು ಹೊರತುಪಡಿಸಿ ನನಗೊಂದು ಗುರುತು ಬೇಕಿತ್ತು 2010ರಿಂದಲೂ ಜಾತಿ, ಧರ್ಮವಿಲ್ಲದ ಗುರುತು ಪಡೆಯಲು ಯತ್ನಿಸಿದ್ದೇನೆ. ಆದರೆ, ಅಧಿಕಾರಿಗಳು ಇದಕ್ಕೆ ಕೆಲವು ಕಾರಣಗಳನ್ನು ನೀಡಿ ತಿರಸ್ಕರಿಸುತ್ತಿದ್ದರು. ಕೆಲವರಂತೂ ಭಾರತದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದರು. 2017ರಲ್ಲಿ ''ನಾನು ಯಾವುದೇ ಸರಕಾರಿ ಯೋಜನೆಗಳು ಅಥವಾ ಮೀಸಲಾತಿಯನ್ನು ಪಡೆದುಕೊಂಡಿಲ್ಲ. ಆದ್ದರಿಂದ ಮನವಿಯನ್ನು ಸ್ವೀಕರಿಸಿ" ಎಂದು ಹೇಳಿದ್ದೆ ಎಂದು ಸ್ನೇಹಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸ್ನೇಹಾ ಮತ್ತು ಅವರ ಪತಿ ಕೆ.ಪ್ರತಿಭಾ ರಾಜ್ ಸಮಾನ ಮನಸ್ಕರಾಗಿದ್ದು, ತಮ್ಮ ಮೂರು ಜನ ಮಕ್ಕಳಿಗೂ ಕೂಡ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಧರ್ಮದ ಹೆಸರಿಟ್ಟಿದ್ದಾರೆ. (ಆಧಿರೈ ನಾಸ್ರೀನ್, ಆದಿಲಾ ಐರೀನ್ ಮತ್ತು ಆರಿಫಾ ಜೆಸ್ಸಿ) ಅಷ್ಟೇ ಅಲ್ಲ, ಮಕ್ಕಳ ಶಾಲಾ ಪ್ರಮಾಣ ಪತ್ರಗಳಲ್ಲೂ ಜಾತಿ, ಧರ್ಮದ ಜಾಗವನ್ನು ಭರ್ತಿ ಮಾಡಿಲ್ಲ ಎಂದು ಆಕೆಯ ಪತಿ ತಿಳಿಸಿದ್ದಾರೆ.
"ಇನ್ನು ಕೆಲವೇ ದಿನಗಳಲ್ಲಿ ತಮ್ಮ ಮೂರು ಜನ ಮಕ್ಕಳು ಹಾಗೂ ನನ್ನ ಸಹೋದರಿಯರು ಯಾವುದೇ ಜಾತಿ, ಧರ್ಮವಿಲ್ಲ ಎಂಬ ಪ್ರಮಾಣ ಪತ್ರವನ್ನು ಪಡೆಯಲಿದ್ದಾರೆ" ಎಂದು ಸಂತಸದಿಂದ ನುಡಿಯುತ್ತಾರೆ ಸ್ನೇಹಾ.
-
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ












Click it and Unblock the Notifications