Get Updates
Get notified of breaking news, exclusive insights, and must-see stories!

ಕುತೂಹಲ ಕೆರಳಿಸಿದ ರಜನಿಕಾಂತ್ - ಕರುಣಾನಿಧಿ ಭೇಟಿ

Recommended Video

      ರಜನಿಕಾಂತ್ - ಕರುಣಾನಿಧಿ ಭೇಟಿ ಹಿಂದಿನ ಕಾರಣ ಏನು ? | Oneindia Kannada

      ಚೆನ್ನೈ, ಜನವರಿ 3: ಇತ್ತೀಚೆಗಷ್ಟೆ ಪಕ್ಷ ಸ್ಥಾಪಿಸುವ ಘೋಷಣೆ ಮಾಡಿರುವ ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಇಂದು ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ.

      ಈ ಸಂಬಂಧ ಪೋಯೆಸ್ ಗಾರ್ಡನ್ ನಿಂದ ಗೋಪಾಪುರಂಗೆ ಹೋಗುವ ದಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಡಿಎಂಕೆ ನಾಯಕ ಕರುಣಾನಿಧಿ ನನ್ನ ಸ್ನೇಹಿತರು. ಹಾಗಾಗಿ ಅವರನ್ನು ಗೌರವದಿಂದ ನಾನು ಭೇಟಿಯಾಗುತ್ತೇನೆ. ನಾನು ಅವರಿಗೆ ಹೊಸ ವರ್ಷದ ಶುಭಾಶಯ ಹೇಳಲು ಹೋಗುತ್ತಿದ್ದೇನೆ," ಎಂದು ಹೇಳಿದ್ದಾರೆ.

      Rajinikanth met DMK chief Karunannidhi in his residence

      ಇದೇ ವೇಳೆ ರಜನಿಕಾಂತ್ ಇತರ ರಾಜಕೀಯ ಪಕ್ಷದ ಮುಖಂಡರನ್ನು ಭೇಟಿಯಾಗಲು ತಾನು ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದ್ದಾರೆ.

      ತಮಿಳುನಾಡಿನಲ್ಲಿ ರಜನಿಕಾಂತ್ ರಾಜಕೀಯ ಪಕ್ಷ ಸ್ಥಾಪಿಸಿದರೆ ಕರುಣಾನಿಧಿಯವರ ಡಿಎಂಕೆ ಬದ್ಧ ಎದುರಾಳಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಹೀಗಿದ್ದೂ ಉಭಯ ನಾಯಕರು ಭೇಟಿಯಾಗುತ್ತಿರುವುದು ಕುತೂಹಲ ಮೂಡಿಸಿದೆ.

      Rajinikanth met DMK chief Karunannidhi in his residence

      ರಜನೀಕಾಂತ್ ಕರುಣಾನಿಧಿಯವರ ಜತೆ ಏನನ್ನು ಚರ್ಚಿಸಬಹುದು, ಭೇಟಿಯ ಉದ್ದೇಶ ಏನಾಗಿರಬಹುದು ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+