ಎಂ ಕರುಣಾನಿಧಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ರಾಹುಲ್
ಚೆನ್ನೈ, ಡಿಸೆಂಬರ್ 16: ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ನಾಯಕ, ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆಗಮಿಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರೋಧಿ ಬಣಗಳನ್ನು ಒಗ್ಗೂಡಿಸಿ ಮಹಾಘಟಬಂಧನ್ ನಿರ್ಮಿಸಿರುವ ಕಾಂಗ್ರೆಸ್ ಗೆ ಡಿಎಂಕೆ ಕೂಡಾ ಬೆಂಬಲ ವ್ಯಕ್ತಪಡಿಸಿದೆ.

2014ಕ್ಕೂ ಮೊದಲು ಯುಪಿಎ ಜತೆ ಕೈ ಜೋಡಿಸಿದ್ದ ಡಿಎಂಕೆ ನಂತರ ಯುಪಿಎ ಸರ್ಕಾರದಿಂದ ಹೊರ ಬಂದಿತ್ತು. 2004ರಲ್ಲಿ ಸೋನಿಯಾ ಗಾಂಧಿ ಅವರು ಪ್ರಧಾನಿಯಾಗಲಿ ಎಂದು ಹೆಸರು ಶಿಫಾರಸು ಮಾಡಿದವರಲ್ಲಿ ಕಲೈಂಗರ್ ಅವರು ಮೊದಲಿಗರು












Click it and Unblock the Notifications