ಏಸಿಯಿಂದ ವಿಷಾನಿಲ ಹೊರಸೂಸಿ ಒಂದೇ ಕುಟುಂಬದ ಮೂವರು ಸಾವು
ಚೆನ್ನೈ, ಅಕ್ಟೋಬರ್ 2: ಏರ್ ಕಂಡೀಷನರ್ ನಿಂದ ಹೊರಬಂದ ವಿಷಾನಿಲ ಒಂದೇ ಕುಟುಂಬದ ಮೂವರನ್ನು ಬಲಿ ತೆಗೆದುಕೊಂಡಿದೆ. ಈ ಘಟನೆ ಕೊಯಂಬೀಡುವಿನ ತಿರುವಳ್ಳುವರ್ ನಗರದಲ್ಲಿ ಸೋಮವಾರ ಸಂಭವಿಸಿದೆ ಎಂದು ಪೊಲೀಸರು ಮಂಗಳವಾರದಂದು ಮಾಹಿತಿ ನೀಡಿದ್ದಾರೆ.
ಚಿತ್ರ ನಿರ್ದೇಶಕ ಮಣಿರತ್ನಂ ಕಚೇರಿ, ನಿವಾಸಕ್ಕೆ ಬಾಂಬ್ ಬೆದರಿಕೆ
ಮೂವತ್ತೈದು ವರ್ಷದ ಪುರುಷ, ಅವರ ಪತ್ನಿ ಹಾಗೂ ಮಗ ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಬಹಳ ಸಮಯ ಈ ಕುಟುಂಬ ಮನೆಯಿಂದ ಹೊರಗೆ ಬಾರದಿದ್ದಾಗ ನೆರೆ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಈ ವರ್ಷದ ಮೇ ತಿಂಗಳಲ್ಲಿ ವಾಯವ್ಯ ದೆಹಲಿಯ ಆದರ್ಶ್ ನಗರ ಪ್ರದೇಶದಲ್ಲಿ ಏರ್ ಕಂಡೀಷನರ್ ಸ್ಫೋಟವಾಗಿ ಹತ್ತು ವರ್ಷದ ಬಾಲಕ ಹಾಗೂ ಆತನ ಸೋದರಿ ಮೃತಪಟ್ಟಿದ್ದರು. ಆ ಘಟನೆ ಸಂಭವಿಸಿದಾಗ ಅಜ್ಜಿಯೊಂದಿಗೆ ಈ ಮಕ್ಕಳು ಮನೆಯಲ್ಲಿದ್ದರು. ಪೋಷಕರು ಹೊರಗೆ ಹೋಗಿದ್ದರು. ಆ ಘಟನೆ ಸಂಭವಿಸಿದಾಗ ಅಜ್ಜಿ ಬದುಕಿಕೊಂಡಿದ್ದರು. ಆದರೆ ಬೆಂಕಿ ಅವಘಡದಲ್ಲಿ ಸಿಲುಕಿ ಮಕ್ಕಳು ಸಾವನ್ನಪ್ಪಿದ್ದರು.