ಅಗಲಿದ ದ್ರಾವಿಡ ನಾಯಕ ಕರುಣಾನಿಧಿಗೆ ಕೈ ಮುಗಿದ ಮೋದಿ
ಚೆನ್ನೈ, ಆಗಸ್ಟ್ 08: ನಿನ್ನೆ ಸಂಜೆ ನಿಧನರಾದ ಡಿಎಂಕೆ ಪಕ್ಷದ ನಾಯಕ ಕರುಣಾನಿಧಿ ಅವರ ಅಂತಿಮದರ್ಶನವನ್ನು ಪ್ರಧಾನಿ ಮೋದಿ ಇಂದು ಪಡೆದರು.
ದೆಹಲಿಯಿಂದ ವಿಮಾನದಲ್ಲಿ ಆಗಮಿಸಿದ ಮೋದಿ, ರಾಜಾಜಿಹಾಲ್ನಲ್ಲಿ ಇರಿಸಿದ್ದ ಕರುಣಾನಿಧಿ ಪಾರ್ಥಿವ ಶರೀರಕ್ಕೆ ಹೂಗುಚ್ಛ ಅರ್ಪಿಸಿ ಕೈಮುಗಿದು, ಅಂತಿಮ ವಿದಾಯ ಹೇಳಿದರು.

ಆ ನಂತರ ದುಖಃದಲ್ಲಿದ್ದ ಕರುಣಾನಿಧಿ ಪುತ್ರ ಸ್ಟಾಲಿನ್ ಹೆಗಲ ಮೇಲೆ ಕೈ ಇರಿಸಿ ಸಾಂತ್ವನ ಹೇಳಿದ ಮೋದಿ ಕರುಣಾನಿಧಿ ಪುತ್ರಿ ಕನಿಮೋಳಿ ಅವರೊಂದಿಗೆ ಮಾತನಾಡಿ ಸಾಂತ್ವಾನ ಹೇಳಿದರು. ಮೋದಿ ಅವರೊಂದಿಗೆ ತಮಿಳುನಾಡು ಬಿಜೆಪಿ ಮುಖಂಡರು ಸ್ಥಳದಲ್ಲಿ ಇದ್ದರು.

ಈ ಮುಂಚೆ ಕರುಣಾನಿಧಿ ಅವರು ಆಸ್ಪತ್ರೆಯಲ್ಲಿದ್ದಾಗ ಸ್ಟಾಲಿನ್ ಅವರಿಗೆ ಕರೆ ಕರುಣಾನಿಧಿ ಆರೋಗ್ಯದ ಬಗ್ಗೆ ಮೋದಿ ಅವರು ಮಾಹಿತಿ ಪಡೆದಿದ್ದರು. ಈ ಮುಂಚೆ ಕರುಣಾನಿಧಿ ಅವರ ಮನೆಗೆ ಹೋಗಿ ಅವರೊಂದಿಗೆ ಮಾತುಕತೆಯನ್ನೂ ಮೋದಿ ಮಾಡಿದ್ದರು.













Click it and Unblock the Notifications