ಮಧುರೈ ಮೀನಾಕ್ಷಿ ದೇಗುಲ ಗೋಪುರ ಜಖಂ
ಮಧುರೈ,ಡಿ.13: ತಮಿಳುನಾಡಿನ ಜಗತ್ಪ್ರಸಿದ್ದ 12ನೇ ಶತಮಾನದ ಮೀನಾಕ್ಷಿ ಅಮ್ಮ ದೇವಸ್ಥಾನದ ಪ್ರಮುಖ ರಾಜ ಗೋಪುರಕ್ಕೆ ನಿನ್ನೆ ರಾತ್ರಿ ಸಿಡಿಲು ಬಡಿದು ಜಖಂಗೊಂಡಿದೆ ಎಂದು ದೇವಾಲಯದ ಆಡಳಿತ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಕ್ರಿ.ಶ.1216ನೇ ಇಸವಿಯಲ್ಲಿ ನಿರ್ಮಾಣವಾದ ಈ ದೇವಸ್ಥಾನದ ಪೂರ್ವಭಾಗದ ರಾಜಗೋಪುರಕ್ಕೆ ನಿನ್ನೆ ರಾತ್ರಿ ಸಿಡಿಲು ಅಪ್ಪಳಿಸಿದೆ. ಸಿಡಿಲಿನ ಹೊಡೆತಕ್ಕೆ ಗೋಪುರದ ಮೇಲಿನ ಯಾಳಿಮುಖಂ (ಯಾಳಿ ಎಂಬುದು ಒಂದು ಪೌರಾಣಿಕ ಪ್ರಾಣಿ) ಜಖಂ ಆಗಿದೆ ಎಂದು ದೇವಾಲಯದ ಜಂಟಿ ಆಯುಕ್ತ ಜಯರಾಮನ್ ಹೇಳಿದ್ದಾರೆ. [ಶ್ರೀಶೈಲಂ ಶಿವಲಿಂಗ ಭಿನ್ನ, ಭಕ್ತರಲ್ಲಿ ಆತಂಕ]
ದೇವಸ್ಥಾನದ
ಮೇಲಿರುವ
ಇತಿಹಾಸ
ಪ್ರಸಿದ್ಧ
ನಾಲ್ಕು
ಟವರ್(ಗೋಪುರ)ಗಳಿಗೂ
ಸಿಡಿಲು
ಪ್ರತಿರೋಧಕ
ಕವಚಗಳನ್ನು
ಅಳವಡಿಸಲಾಗಿದೆ.
ಈ
ಕವಚ
ಅಳವಡಿಕೆ
ಮಾಡಿ
ಎರಡು
ವರ್ಷಗಳಾಗಿದ್ದು,
ಈ
ಅವಧಿಯಲ್ಲಿಯೇ
ನಾಲ್ಕು
ಬಾರಿ
ಸಿಡಿಲು
ಬಡಿದಿದೆ.
ಅಲ್ಲದೆ
ಗೋಪುರಗಳು
ಜಖಂಗೊಂಡಿವೆ
ಎಂಬುದು
ವಿಶೇಷ
ಎಂದು
ಅಧಿಕಾರಿ
ಜಯರಾಮನ್
ತಿಳಿಸಿದ್ದಾರೆ.
ಸುಮಾರು 150 ಅಡಿಗಳಷ್ಟು ಎತ್ತರದ ಈ ಇತಿಹಾಸ ಪ್ರಸಿದ್ಧ ಗೋಪುರದ ಮೇಲೆ ನಾನಾ ಬಗೆಯ ಅಪರೂಪದ ಶಿಲ್ಪಗಳನ್ನು ಕೆತ್ತಲಾಗಿದೆ. ಯಾಳಿ(ಮೃಗ)ಯ ಕೊಂಬು ಮುರಿದುಬಿದ್ದಿದೆ. ಇದೇನೂ ದೊಡ್ಡ ಹಾನಿಯಲ್ಲ. ದುರಸ್ತಿಪಡಿಸಬಹುದು. ಆದರೆ ಈ ರೀತಿ ಜಖಂ ಆದರೆ ಭಕ್ತರಲ್ಲಿ ಆತಂಕಗಳು ಸೃಷ್ಟಿಯಾಗುತ್ತವೆ ಎಂದು ಜಯರಾಮನ್ ಹೇಳಿದ್ದಾರೆ. [ಕೇದಾರನಾಥ ದೇಗುಲ ಅಚ್ಚಳಿಯದೆ ಉಳಿದಿದ್ದು ಹೇಗೆ?]
ಮಧುರೈ ನಗರದಲ್ಲಿ ಗುರುವಾರದಿಂದ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿಯುತ್ತಿದ್ದು, ನಗರದ ವಿವಿಧೆಡೆ ರಸ್ತೆ, ವಿದ್ಯುತ್ ಸಂಪರ್ಕ ಕಡಿದು ಹೋಗಿವೆ. ಹಲವಾರು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಅನೇಕ ಟ್ರಾನ್ಸ್ ಫಾರ್ಮರ್ ಗಳು ಸುಟ್ಟು ಹೋಗಿವೆ. ಈ ನಡುವೆ ಮೀನಾಕ್ಷಿ ದೇಗುಲದ ಗೋಪುರ ಜಖಂಗೊಂಡ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿ ಸ್ಥಳೀಯರು ಅಕ್ಕ ಪಕ್ಕ ಊರಿನ ಜನತು ದೇಗುಲದತ್ತ ಧಾವಿಸಿ ಬಂದಿದ್ದಾರೆ. ಜನರು ಆತಂಕ ಪಡಬೇಕಾಗಿಲ್ಲ ಎಂದು ಆಡಳಿತ ಮಂಡಳಿ ಸಮಾಧಾನ ಪಡಿಸಿ ಕಳಿಸಿದ್ದಾರೆ. (ಪಿಟಿಐ)