ವಾರ್ಧಾ ಅಬ್ಬರ: ಆಂಧ್ರ, ಕರ್ನಾಟಕ್ಕೂ ತಟ್ಟಿದ ಬಿಸಿ
ಚೆನ್ನೈ, ಡಿಸೆಂಬರ್ 12: ವಾರ್ಧಾ ಚಂಡಮಾರುತ ತಮಿಳುನಾಡಿಗೆ ಅಪ್ಪಳಿಸಿದ್ದು, ಭೀಕರ ಪರಿಣಾಮವನ್ನು ಬೀರಿದೆ. ಸಾವಿರಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ಆಂಧ್ರದಲ್ಲಿಯೂ ಇದರ ಪರಿಣಾಮ ಬೀರಿದ್ದು ಕರಾವಳಿ ಪ್ರದೇಶದಲ್ಲಿ ರುದ್ರನರ್ತನ ಮಾಡಿದೆ. ಸೋಮವಾರ- ಮಂಗಳವಾರ ಕರ್ನಾಟದಲ್ಲಿ ಮೋಡಕವಿದ ವಾತಾವರಣ, ಜಿಟಿಜಿಟಿ ಮಳೆಯಾಗಿದೆ.
ಹವಾಮಾನ ಇಲಾಖೆ ಬಂಗಾಳ ಕೊಲ್ಲಿಯಲ್ಲಿ ವಾರ್ಧಾ ಚಂಡಮಾರುತ ಎದುರಾಗಿದ್ದು ತಮಿಳುನಾಡಿಗೆ ಸೋಮವಾರ ಮಧ್ಯಾಹ್ನ 1.30 ಬಂದೆರುಗಲಿದೆ ಎಂದು ಹೇಳಿದ್ದರು. ಹಾಗು ಮಧ್ಯಾಹ್ನ 2 ಗಂಟೆ ಯಿಂದ ರಾತ್ರಿ 12ಗಂಟೆ ವರೆಗೆ ಆಂಧ್ರ ಪ್ರದೇಶಕ್ಕೆ ಚಂಡಮಾರುತ ಎದುರಾಗಲಿದೆ ಎಂದಿದ್ದರು. ಅಂತೆಯೆ ಕರ್ನಾಟಕದಲ್ಲಿಯೂ ವಾರ್ಧಾ ಪರಿಣಾಮದಿಂದಾಗಿ ಸೋಮವಾರ ರಾತ್ರಿಯಿಂದಲೂ ಜಿಟಿಜಿಟಿ ಮಳೆಯಾಗುತ್ತಿದೆ ಮಂಗಳವಾರವೂ ಇದು ಮುಂದುವರೆದಿದ್ದು ಮೋಡಕವಿದ ವಾತಾವರಣ ಜನರಲ್ಲಿ ಜಡವನ್ನುಂಟುಮಾಡಿದೆ.
ತಮಿಳುನಾಡಿನಲ್ಲಿ ಚಂಡಮಾರುತದ ಭೀಕರತೆ ಕಡಿಮೆಯಾಗುತ್ತಿದೆ. ಸುಮಾರು 3 ಗಂಟೆಗಳ ಕಾಲ ಮಾಡಿದ ವಾರ್ಧಾ ನರ್ತನ ನಗರವನ್ನು ಮರ್ಧನಗೊಳಿಸಿದೆ. ಸಾರಿಗೆ, ವಿದ್ಯುತ್, ವ್ಯಾಪಾರ ವಹಿವಾಟುಗಳು ಸ್ಥಬ್ಧಗೊಂಡಿದೆ.
* ಆಂಧ್ರದಲ್ಲಿ ವಾರ್ಧಾ ಅಬ್ಬರ ಪ್ರಾಂಭವಾಗಿದೆ. ಆಂಧ್ರದ ಜನತೆಗೆ ಸರಕಾರ ಮುನ್ನೆಚ್ಚರಿಕೆ ನೀಡಿದೆ. ಮನೆಯಿಂದ ಹೊರಬರದಂತೆ ತಿಳಿಸಿದೆ. ಆಂಧ್ರದಲ್ಲಿ 12 ಗಂಟೆ ವರೆಗೂ ಮಳೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
* ವರ್ಧಾ ಆಂಧ್ರ ಪ್ರದೇಶದೆಡೆಗೆ ದಿಕ್ಕು ಬದಲಿಸಿದ್ದು, ಕರ್ನಾಟಕದ ಕೆಲವಡೆ ಮೊಡಕವಿದ ವಾತಾವರಣ ಬೆಳಗ್ಗಿನಿಂದಲು ಇದೆ. ಆದರೆ ಈಗ ಕೋಲಾರದ ಕೆಲವೆಡೆ ಬಿರುಗಾಳಿ ಕಾಣಿಸಿಕೊಂಡಿದೆ ಉಳಿದಂತೆ ಕೆಲವೆಡೆ ಸೊನೆ ಮಳೆ ಬೀಳುತ್ತಿದೆ.
* ವರ್ಧಾ ಚಂಡ ಮಾರುತದ ವೇಗ 120 ಕಿಮೀ ವೇಗಕ್ಕೆ ಇಳಿದೆದೆ, ಬಿರುಗಾಳಿ ಅಬ್ಬರ ಮೊದಲಿನಂತೆಯೇ ಇದ್ದು, ಚೆನ್ನೈನ ರಾಜಭವನಕ್ಕೆ ನೀರುನುಗ್ಗಿದೆ.
* ಚೆನ್ನೈನಲ್ಲಿ ನಗರದಲ್ಲಿ ಇಬ್ಬರು ಸಾವು,ನೆಲಕ್ಕುರುಳಿದ 4000 ಮರಗಳು, 500 ಲೈಟ್ ಕಂಬಗಳು ನಲಕ್ಕಪ್ಪಳಿಸಿವೆ, ಪೆಟ್ರೋಲ್ ಬಂಕ್ ಚಾವಣಿ ಕುಸಿದಿದೆ.
* ಆಂಧ್ರ, ತಮಿಳುನಾಡು ಕರಾವಳಿಯಲ್ಲಿ 11 ನಾಕೆಗಳು ಕಾರ್ಯಾಚರಣೆ, 2 ಅತ್ಯಾದುನಿಕ ನೌಕೆಗಳು, 3 ಡಿವರ್ಸ್ ನೌಕೆಗಳು ಸೇನಾದಳ ರಕ್ಷಣಾ ಕಾರ್ಯಾಚರಣೆಗೆ ಸಿದ್ಧ.
* ತಮಿಳುನಾಡಿನ ಬಂಗಾಳಕೊಲ್ಲಿಯಲ್ಲಿ 8 ಮೀನುಗಾರರನ್ನು ರಕ್ಷಿಸಿದ ಎನ್ ಆರ್ ಡಿಎಫ್ ರಕ್ಷಣಾ ಪಡೆ
* ಅಣ್ಣಾಸೆಲೈ ರೋಡಿನ ಅಂಗಡಿ ಮುಂಗಟ್ಟುಗಳು ಬಂದ್, ಚನ್ನೈನಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು, ವಿರಳವಾದ ವಾಹನ ಸಂಚಾರ,
* ಆಂಧ್ರ ತಮಿಳುನಾಡಿನ ಗಡಿ ಭಾಗಗಳಲ್ಲಿ 8 ಸೇನಾತುಕಡಿಯನ್ನು ನಿಯೋಜನೆ ಮಾಡಲಾಗಿದೆ. ಮತ್ತು ತಮಿಳುನಾಡಿಯನಲ್ಲಿ ಎನ್ ಡಿಎಫ್ ಆರ್ ರಕ್ಷಣಾದಳವನ್ನು ನಿಯೋಜಿಸಲಾಗಿದೆ.
* ವರ್ಧಾ ಚಂಡಮಾರುತ ಹಿನ್ನೆಲೆ ತಮಿಳುನಾಡಿನ ನಗರ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಜನರಿಗೆ ಮನೆಯಿಂದ ಹೊರಬರದಿರಲು ಎಚ್ಚರಿಕೆ ನೀಡಲಾಗಿದೆ.
* ಚಂಡಮಾರತದ ಪರಿಣಾಮ ತಮಿಳುನಾಡಿದ ಹಲವಾರು ಭಾಗಗಳಲ್ಲಿ ಜನರಿಗೆ ಗಾಯಗಳು ಮತ್ತು ಗಂಭೀರ ಸ್ಥಿತಿ ಎದುರಾದರೆ ಅವರಿಗೆ ಸೇವೆ ನೀಡಲು 150 ಹೆಚ್ಚು ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ.
*ಸಮುದ್ರ ತೀರದಲ್ಲಿ ಹಡಗು ಮತ್ತು ದೋಣಿಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಸಂಜೆ 5 ಗಂಟೆ ವರೆಗೆ ಚಂಡಮಾರುತ ಪರಿಣಾಮ ವಾಗಲಿದ್ದು ನಂತರ ವಾತಾವರಣ ಶಾಂತಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
* ಗಂಟೆಗೆ 150 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಮಳೆ ಸುರಿಯುತ್ತಿದ್ದು, ವಿದ್ಯುತ್ ವ್ಯವಸ್ಥೆ, ಜನಸಂಚಾರ ಅಸ್ತವ್ಯಸ್ತಗೊಂಡಿದೆ. ಸಮುದ್ರದ ತೀರ ಭಾಗದಲ್ಲಿ 4-5 ಮೀಟರ್ ರಭಸ ಹೆಚ್ಚಾಗಿದೆ.
*ಚಂಡಮಾರುತದಿಂದ ತಮಿಳುನಾಡಿನಲ್ಲಿ ರೈಲ್ವೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
* ವರ್ಧಾ ಚಂಡ ಮಾರುತ ಪರಿಣಾಮವಾಗಿ ಚೆನ್ನೈ ಮತ್ತು ವೆಲ್ಲೂರು ನಡುವೆ ಕೆಲ ಭಾಗಗಳಲ್ಲಿ ಭೂಕುಸಿತ ಉಂಟಾಗಿದೆ.
* ಬಿರುಗಾಳಿ ಮಳೆಗೆ ಜನ ತತ್ತರಿಸಿದ್ದು, 10 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ.
* ಚೆನ್ನೈ ನಗರದಲ್ಲಿ ಭಾರಿ ಮಳೆ, ಕಡಲೂರು ತಿರುವಣ್ಣಾಮಲೈ ಮುಂತಾದ ಪ್ರದೇಶಗಳಲ್ಲಿ ತೀವ್ರ ಪ್ರಮಾಣದ ಮಳೆ.
* ತಮಿಳುನಾಡಿನಲ್ಲಿ 1 ಸಾವಿರಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ರಾಯಪೇಟೆಯಲ್ಲಿ 59, ಮಾಂಡೇಲಿಯಲ್ಲಿ 23, ನುಂಗಂಬಾಕ್ಕಂನಲ್ಲಿ 29 ಮರಗಳು ನೆಲಕಚ್ಚಿವೆ.
* ತಮಿಳುನಾಡಿಗೆ ಸಂಚರಿಸುವ 25 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
* 10 ಕಿಲೋ ಮೀಟರ್ ವೇಗದಲ್ಲಿ ಮಳೆ ಸುರಿಯುತ್ತಿದ್ದು, ಮನೆಯ ಚಾವಣಿಗಳು ಹಾರಿಹೋಗುತ್ತಿವೆ.
* ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.