ಎಲ್ಐಸಿ ಐಪಿಒ ಆರಂಭಕ್ಕೆ ವಿರೋಧ: ನೌಕರರ ಪ್ರತಿಭಟನೆ
ಚೆನ್ನೈ, ಫೆಬ್ರವರಿ 03: ಎಲ್ಐಸಿಯಲ್ಲಿ ಖಾಸಗಿ ಹೂಡಿಕೆ ವಿರೋಧಿಸಿ ಕೊಯಮತ್ತೂರಿನಲ್ಲಿ ಎಲ್ಐಸಿ ನೌಕರರು ಮಂಗಳವಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೇಂದ್ರ ಬಜೆಟ್ 2021-22 ಮಂಡನೆ ವೇಳೆ ಎಲ್ಐಸಿ ಐಪಿಒ ಪರಿಚಯಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಈ ಕುರಿತು ಶಾಸಕಾಂಗ ತಿದ್ದುಪಡಿಗಳನ್ನು ಬಜೆಟ್ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಪ್ರಾರಂಭಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು.
LIC ಒಂದು ಬಾರಿ ಪಾವತಿ ಮಾಡಿ: ಕನಿಷ್ಠ 12,000 ರೂ. ಪಿಂಚಣಿ ಪಡೆಯುವುದು ಹೇಗೆ?
ಆದರೆ ಇದಕ್ಕೆ ವಿರೋಧಿಸಿರುವ ಎಲ್ಐಸಿ ನಿಗಮದ ನೌಕರರು "ಅಖಿಲ ಭಾರತ ವಿಮಾ ನೌಕರರ ಪರವಾಗಿ ನಾವು ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸುತ್ತೇವೆ. ಎಲ್ಐಸಿಯನ್ನು ಸ್ವಾಯತ್ತಗೊಳಿಸಬೇಕು ಎಂದು ನಾವು ಕೇಳುತ್ತೆವೆ, ಇದು ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಕೊಡುಗೆ ನೀಡುತ್ತದೆ" ಎಂದು ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆ.
ವಿಮಾ ಕ್ಷೇತ್ರದ ಬಜೆಟ್ನಲ್ಲಿ ಹಲವಾರು ಪ್ರಸ್ತಾಪಗಳು ದೇಶದ ಹಿತಾಸಕ್ತಿಗೆ ವಿರುದ್ಧವಾಗಿವೆ ಮತ್ತು ಇದು ವಿಮಾ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ವಿಮಾ ಕಂಪನಿಗಳಲ್ಲಿ ವಿದೇಶಿ ನೇರ ಹೂಡಿಕೆಗಳನ್ನು ಶೇಕಡಾ 49 ರಿಂದ 74ಕ್ಕೆ ಹೆಚ್ಚಿಸಲಾಗಿದೆ. ಹಲವಾರು ಸಂಸ್ಥೆಗಳು ಈ ಹಿಂದಿನ ನಿಬಂಧನೆಯನ್ನು ಸಹ ಸಂಪೂರ್ಣವಾಗಿ ಬಳಸಿಕೊಂಡಿಲ್ಲ ಮತ್ತು ಇದು ದೇಶದ ಆರ್ಥಿಕ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಲ್ಐಸಿಯಲ್ಲಿನ ಷೇರುಗಳನ್ನು ಹೂಡಿಕೆ ಮಾಡಲು ಕೇಂದ್ರವು ನಡೆಸಿದ ಕ್ರಮವು ಅದರ 'ಆತ್ಮನಿರ್ಭಾರ ಭಾರತ್' ಗುರಿಯ ವಿರುದ್ಧವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಎಲ್ಐಸಿ ತನ್ನ ಲಾಭಾಂಶವನ್ನು ಸರ್ಕಾರ ಮತ್ತು ಪಾಲಿಸಿದಾರರಿಗೆ ಪಾವತಿಸಿತು ಮತ್ತು ಈ ಕ್ರಮವು ದೇಶದ ಜನರಿಗೆ ದ್ರೋಹ ಮಾಡಿದಂತಿದೆ. ಸಾಮಾನ್ಯ ವಿಮಾ ಕಂಪನಿ ಮತ್ತು ಎರಡು ರಾಷ್ಟ್ರೀಕೃತ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಪ್ರಸ್ತಾಪವನ್ನು ಪ್ರತಿಭಟನಾಕಾರರು ವಿರೋಧಿಸಿದರು ಮತ್ತು ಈ ಕ್ರಮವನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಎಲ್ಐಸಿ ದೇಶದ ಅತಿದೊಡ್ಡ ವಿಮಾ ಕಂಪನಿಯಾಗಿದ್ದು, ಇದು 77.61 ಪರ್ಸೆಂಟ್ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಇದು ಒಟ್ಟು ಪ್ರೀಮಿಯಂ ಆದಾಯದ 70 ಪರ್ಸೆಂಟ್ಕ್ಕಿಂತ ಹೆಚ್ಚು. ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಿದ ನಂತರ, ಮಾರುಕಟ್ಟೆ ಮೌಲ್ಯಮಾಪನದಿಂದ ಎಲ್ಐಸಿ ದೇಶದ ಅತಿದೊಡ್ಡ ಕಂಪನಿಯಾಗಬಹುದು. ಇದರ ಮಾರುಕಟ್ಟೆ 8 ರಿಂದ 10 ಲಕ್ಷ ಕೋಟಿ ರೂಪಾಯಿಗಳಾಗಿರಬಹುದು.