ಜಯಾ ಪ್ರಕರಣದ ನ್ಯಾಯಾಧೀಶರ ಬಗ್ಗೆ ಗೊತ್ತಾ?
ಬೆಂಗಳೂರು, ಸೆ. 27 : ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಅಂತಿಮ ತೀರ್ಪು ನೀಡಲಿರುವ ಮೈಕಲ್ ಜಾನ್ ಕುನ್ಹ ಪ್ರಕರಣಕ್ಕೆ ಸಂಬಂಧಿಸಿ ಐದನೇ ನ್ಯಾಯಾಧೀಶರು. ಈ ಹಿಂದೆ ನಾಲ್ಕು ನ್ಯಾಯಾಧೀಶರು ಪ್ರಕರಣದ ವಿವಾರಣೆ ನಡೆಸಿದ್ದರು.
ಪ್ರಕರಣದ ಮೊದಲ ನ್ಯಾಯಾಧೀಶ ಎ. ಎಸ್. ಪಂಚಪುರೆ 2003ರವೆರೆಗೆ ಕೇಸ್ಗೆ ಸಂಬಂಧಿಸಿದ ವಿಚಾರಣೆ ನಡೆಸಿದರು. ಅಲ್ಲದೇ ಸುಪ್ರೀಂ ಕೋರ್ಟ್ ಆದೇಶದಂತೆ ಚೆನೈನಿಂದ ಬೆಂಗಳೂರಿಗೆ ಪ್ರಕರಣ ವರ್ಗಾಯಿಸಿದ್ದು ಪಂಚಪುರೆ ಎನ್ನುವುದು ವಿಶೇಷ.(ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ಸಂಪೂರ್ಣ ವಿವರ)

ನಂತರ 2007ರಲ್ಲಿ ಎ. ಎಸ್. ಪಂಚಪುರೆ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕವಾದ ಕಾರಣ ಹೊಸ ಜಡ್ಜ್ ಆಗಮಿಸುತ್ತಾರೆ. ಪ್ರಕರಣದ ಎರಡನೇ ನ್ಯಾಯಾಧೀಶರಾಗಿ ಎಲ್.ಟಿ. ಮುನೋಳಿ ಕೆಲ ಕಾಲ ಕಾರ್ಯನಿರ್ವಹಿಸುತ್ತಾರೆ. ಇವರ ನಿವೃತ್ತಿ ನಂತರ ಬಿ.ಎಂ.ಮಲ್ಲಿಕಾರ್ಜುನಯ್ಯ ನ್ಯಾಯಾಧೀಶರಾಗಿ ಆಗಮಿಸುತ್ತಾರೆ.
ಮಲ್ಲಿಕಾರ್ಜುನಯ್ಯ ನ್ಯಾಯಾಧೀಶರಾಗಿದ್ದಾಗಲೇ ಪ್ರಕರಣದ ಬಹುಪಾಲು ವಿಚಾರಣೆ ನಡೆಯುತ್ತದೆ. ಸಾಕ್ಷಿಗಳ ವಿಚಾರಣೆ, ಕ್ರಾಸ್ ಎಕ್ಸಾಮಿನೇಶನ್ ನಡೆಯುತ್ತದೆ. ನಂತರ ಮಲ್ಲಿಕಾರ್ಜುನಯ್ಯ 2012 ರ ಆಗಸ್ಟ್ನಲ್ಲಿ ನಿವೃತ್ತಿಯಾಗುತ್ತಾರೆ.(ತೀರ್ಪು ಕೇಳಲು ತವರಿಗೆ ಜಯಾ 'ಅಮ್ಮ' ಬರಲೇಬೇಕು)
2013ರ ನವೆಂಬರ್ನಲ್ಲಿ ಎಂ.ಎಸ್.ಬಾಲಕೃಷ್ಣ ನ್ಯಾಯಾಧೀಶರಾಗಿ ಆಗಮಿಸುತ್ತಾರೆ. ಉಳಿದ ಸಾಕ್ಷಿಗಳ ವಿಚಾರಣೆ ಇವರ ಅವಧಿಯಲ್ಲಿ ಮುಕ್ತಾಯವಾಗುತ್ತದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಅಂತಿಮ ಹಂತದ ವಾದವನ್ನು ಮುಗಿಸುರುತ್ತಾರೆ. ಸುಪ್ರೀಂ ಕೋರ್ಟ್ ಬಾಲಕೃಷ್ಣ ಅವರಿಗೆ ಪ್ರಕರಣದ ವಿಚಾರಣೆ ಮುಂದುವರಿಸಲು ತಿಳಿಸುತ್ತದೆ. ಆದರೆ ತಮ್ಮ ನಿವೃತ್ತಿ (ಸೆ. 30, 2013) ನಂತರ ಪ್ರಕರಣದ ವಿಚಾರಣೆ ನಡೆಸಲು ಬಾಲಕೃಷ್ಣ ನಿರಾಕರಿಸುತ್ತಾರೆ. ನಂತರ ಪ್ರಕರಣ ಮೈಕಲ್ ಜಾನ್ ಕುನ್ಹ ಅವರ ಕೈ ಸೇರುತ್ತದೆ.
ಸೆ. 27 ರಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮೈಕಲ್ ಜಾನ್ ಕುನ್ಹ ಜಯಲಲಿತಾ ಮತ್ತು ಇತರೆ ಆರೋಪಿಗಳಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಮಾನ ನೀಡಿದ್ದಾರೆ.
-
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್












Click it and Unblock the Notifications