ತಮಿಳುನಾಡಿನಲ್ಲಿ ಅಮ್ಮನ ಆಡಳಿತ ಮತ್ತೆ ಆರಂಭ
ಚೆನ್ನೈ, ಮೇ 22 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ದೋಷಮುಕ್ತವಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ವೇದಿಕೆ ಸಿದ್ಧವಾಗಿದೆ. ಶುಕ್ರವಾರ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಶುಕ್ರವಾರ
ಬೆಳಗ್ಗೆ
ಚೆನ್ನೈನಲ್ಲಿರುವ
ಎಐಎಡಿಎಂಕೆ
ಪಕ್ಷದ
ಕಚೇರಿಯಲ್ಲಿ
ನಡೆದ
ಶಾಸಕಾಂಗ
ಪಕ್ಷದ
ಸಭೆಯಲ್ಲಿ
ಜಯಲಲಿತಾ
ಅವರನ್ನು
ಶಾಸಕಾಂಗ
ಪಕ್ಷದ
ನಾಯಕಿಯಾಗಿ
ಆಯ್ಕೆ
ಮಾಡಲಾಗಿದೆ.
ಮಧ್ಯಾಹ್ನ
1.30ಕ್ಕೆ
ಜಯಲಲಿತಾ
ಅವರು
ರಾಜ್ಯಪಾಲ
ರೋಸಯ್ಯ
ಅವರನ್ನು
ಭೇಟಿ
ಮಾಡಿ
ಸರ್ಕಾರ
ರಚನೆಗೆ
ಅವಕಾಶ
ನೀಡುವಂತೆ
ಮನವಿ
ಮಾಡಲಿದ್ದಾರೆ.
[23ಕ್ಕೆ
ಜಯಲಲಿತಾ
ಪ್ರಮಾಣ
ವಚನ]
ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಯಲಲಿತಾ ಅವರನ್ನು ಅವಿರೋಧವಾಗಿ ಶಾಸಕರು ನಾಯಕಿಯನ್ನಾಗಿ ಆಯ್ಕೆ ಮಾಡಿದ್ದಾರೆ. ರಾಜ್ಯಪಾಲ ರೋಸಯ್ಯ ಅವರನ್ನು ಭೇಟಿ ಮಾಡಿರುವ ಪನ್ನೀರ್ ಸೆಲ್ವಂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಜಯಲಲಿತಾ ಅವರನ್ನು ಆಯ್ಕೆ ಮಾಡಿರುವ ಪತ್ರವನ್ನು ಅವರಿಗೆ ನೀಡಿದ್ದಾರೆ. [ಅಕ್ರಮ ಆಸ್ತಿಗಳಿಕೆ ಪ್ರಕರಣ Timeline]
ಇಂದು ಜಯಾ ಹೊರಗೆ ಬರ್ತಾರೆ : ಅಕ್ರಮ ಆಸ್ತಿಗಳಿಕೆ ಪ್ರಕರಣದ ಮೇಲ್ಮನವಿ ತೀರ್ಪು ಹೊರಬಂದ ಬಳಿಕ ಬಹಿರಂಗವಾಗಿ ಕಾಣಿಸಿಕೊಳ್ಳದ ಜಯಲಲಿತಾ ಅವರು ಇಂದು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದು, ಪಕ್ಷದ ಕಚೇರಿ, ಫೋಯಸ್ ಗಾರ್ಡ್ನ್ನಲ್ಲಿರುವ ಜಯಲಲಿತಾ ನಿವಾಸದ ಮುಂದೆ ಸಾವಿರಾರು ಅಭಿಮಾನಿಗಳು ಅವರಿಗಾಗಿ ಕಾದು ಕುಳಿತಿದ್ದಾರೆ.