ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಲಲಿತಾ ಸಾವಿನ ತನಿಖೆ: ತಮಿಳುನಾಡು ಸರ್ಕಾರಕ್ಕೆ ವರದಿ ಸಲ್ಲಿಕೆ

|
Google Oneindia Kannada News

ಚೆನ್ನೈ, ಆಗಸ್ಟ್‌ 27: ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ತನಿಖೆಗೆ ನೇಮಕಗೊಂಡ ನಿವೃತ್ತ ನ್ಯಾಯಮೂರ್ತಿ ಆರ್ಮುಗಸ್ವಾಮಿ ಅವರ ಏಕಸದಸ್ಯ ಆಯೋಗವು ಐದು ವರ್ಷಗಳ ನಂತರ ಶನಿವಾರ ತನ್ನ ವರದಿಯನ್ನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಸಲ್ಲಿಸಿದೆ.

ಡಿಸೆಂಬರ್ 2016 ರಲ್ಲಿ ಜಯಲಲಿತಾ ಅವರ ನಿಧನದ ನಂತರ, ಅವರ ಸಾವಿನ ಕಾರಣ ಮತ್ತು ಅವರು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಅನುಸರಿಸಿದ ವೈದ್ಯಕೀಯ ವಿಧಾನಗಳ ಬಗ್ಗೆ ರಾಜಕೀಯ ಕದನ ಆರಂಭವಾಗಿತ್ತು. ಇದು ಹಲವು ಗಲಾಟೆ, ರಾಜಕೀಯ ದ್ವೇಷದ ಜಗಳಗಳಿಗೂ ಕಾರಣವಾಗಿತ್ತು.

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಟನ್ ಗಟ್ಟಲೆ ಚಿನ್ನ, ಬೆಳ್ಳಿ ವಜ್ರ ಏನಾದವು?ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಟನ್ ಗಟ್ಟಲೆ ಚಿನ್ನ, ಬೆಳ್ಳಿ ವಜ್ರ ಏನಾದವು?

ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ಕುರಿತು ತನಿಖೆ ನಡೆಸುವಂತೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಮನವಿ ಮಾಡಿದ್ದರು. ಇದರಿಂದ ಇದು ಅರ್ಮುಗಸ್ವಾಮಿ ಆಯೋಗ ರಚನೆಗೆ ಕಾರಣವಾಯಿತು. 22 ಸೆಪ್ಟೆಂಬರ್ 2016 ರಂದು ದಿವಂಗತ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾದ ಸಂದರ್ಭಗಳು, ಆರೋಗ್ಯ ಸ್ಥಿತಿ ಮತ್ತು ಪರಿಸ್ಥಿತಿ ಮತ್ತು ನಂತರದ ಚಿಕಿತ್ಸೆಯು 5 ಡಿಸೆಂಬರ್ 2016 ರಂದು ಅವರ ನಿಧನದವರೆಗೆ ಒದಗಿಸಿದ ಸಂದರ್ಭಗಳ ಕುರಿತು ವಿಚಾರಣೆ ನಡೆಸಲು ಆಯೋಗವನ್ನು ನಿಯೋಜಿಸಲಾಗಿತ್ತು.

ಆರ್ಮುಗಸ್ವಾಮಿ ಅವರು ತಮ್ಮ 608 ಪುಟಗಳ ಅಂತಿಮ ವರದಿಯನ್ನು ತಮಿಳಿನಲ್ಲಿ ಮತ್ತು 500 ಪುಟಗಳ ವರದಿಯನ್ನು ಇಂಗ್ಲಿಷ್‌ನಲ್ಲಿ ಸಲ್ಲಿಸಿದ್ದಾರೆ. ಜಯಲಲಿತಾಗೆ ಸಂಬಂಧಿಸಿದಂತೆ 159 ಕ್ಕೂ ಹೆಚ್ಚು ಸಾಕ್ಷಿಗಳು ಆರ್ಮುಗಸ್ವಾಮಿ ಅವರ ಏಕ ಸದಸ್ಯ ಆಯೋಗದ ಮುಂದೆ ಹಾಜರಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ.

ದಿ.ಜಯಲಲಿತಾ ಅವರ 11,344 ಸೀರೆ ಮತ್ತು ಚಪ್ಪಲಿ ಹರಾಜಿಗೆ ನಿರ್ದೇಶನ ಕೋರಿ ಸುಪ್ರೀಂಗೆ ಮನವಿದಿ.ಜಯಲಲಿತಾ ಅವರ 11,344 ಸೀರೆ ಮತ್ತು ಚಪ್ಪಲಿ ಹರಾಜಿಗೆ ನಿರ್ದೇಶನ ಕೋರಿ ಸುಪ್ರೀಂಗೆ ಮನವಿ

 ವರದಿ ಬಿಡುಗಡೆಯ ಬಗ್ಗೆ ಸರ್ಕಾರದ ನಿರ್ಧಾರ

ವರದಿ ಬಿಡುಗಡೆಯ ಬಗ್ಗೆ ಸರ್ಕಾರದ ನಿರ್ಧಾರ

ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ಕುರಿತು ಕಡತ ವರದಿ ಮಾಡುವಾಗ 159 ಸಾಕ್ಷಿಗಳು ಮತ್ತು ಅರ್ಜಿದಾರರನ್ನು ವಿಚಾರಣೆಗೆ ಒಳಪಡಿಸಿ ವರದಿಯನ್ನು ಸಲ್ಲಿಸಲಾಗಿದೆ. ಈಗ ಅದನ್ನು ಬಿಡುಗಡೆ ಮಾಡಬೇಕೇ ಅಥವಾ ಬೇಡವೇ ಎಂಬ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಆರ್ಮುಗಸ್ವಾಮಿ ಹೇಳಿದರು.

 13 ತಿಂಗಳೊಳಗೆ ನನ್ನ ಕೆಲಸ ಪೂರ್ಣ

13 ತಿಂಗಳೊಳಗೆ ನನ್ನ ಕೆಲಸ ಪೂರ್ಣ

ಮೊದಲನೆಯದಾಗಿ, ಆಯೋಗದ ಮೇಲೆ ವಿಶ್ವಾಸವಿಟ್ಟು ನನಗೆ ಮುಂದುವರೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ನಾನು ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳುತ್ತೇನೆ. ಎರಡನೆಯದಾಗಿ, ಆಯೋಗದ ಮುಂದೆ ನಂಬಿಕೆ ಇಟ್ಟಿರುವುದಾಗಿ ಸುಪ್ರೀಂ ಕೋರ್ಟ್‌ ಮುಂದೆ ಹೇಳಿದ ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ. ನಾನು 13 ತಿಂಗಳೊಳಗೆ ನನ್ನ ಕೆಲಸವನ್ನು ಮಾಡಿರುವುದರಿಂದ ನನ್ನ ಕಡೆಯಿಂದ ಯಾವುದೇ ವಿಳಂಬವಾಗಿಲ್ಲ ಎಂದು ಅವರು ಹೇಳಿದರು.

 ಎರಡೂ ಸರ್ಕಾರದಿಂದಲೂ ಸಹಕಾರ

ಎರಡೂ ಸರ್ಕಾರದಿಂದಲೂ ಸಹಕಾರ

ಪ್ರಕರಣದಲ್ಲಿ ಎಲ್ಲರಿಗೂ ಧನ್ಯವಾದ ಹೇಳಿದ ಅವರು, ತನಿಖೆಗೆ ಅಪೋಲೋ ಆಸ್ಪತ್ರೆ ಮತ್ತು ಶಶಿಕಲಾ ಉತ್ತಮ ಸಹಕಾರ ನೀಡಿದ್ದಾರೆ. ಪತ್ರಿಕೆ, ಇನ್ನಿತರ ಮಾಧ್ಯಮ ಸೇರಿದಂತೆ ನನ್ನ ತನಿಖೆಗೆ ಸಹಕರಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ಎಐಎಡಿಎಂಕೆ ಮತ್ತು ಡಿಎಂಕೆ ಎರಡೂ ಸರ್ಕಾರಗಳು ಉತ್ತಮವಾಗಿ ಸಹಕರಿಸಿದವು ಎಂದು ಅವರು ಹೇಳಿದರು.

 ನವೆಂಬರ್ 2017 ರಲ್ಲಿ ಪನ್ನೀರ್‌ಸೆಲಂ ಅವರ ತನಿಖೆ

ನವೆಂಬರ್ 2017 ರಲ್ಲಿ ಪನ್ನೀರ್‌ಸೆಲಂ ಅವರ ತನಿಖೆ

ತಮಿಳುನಾಡು ರಾಜ್ಯ ಸಚಿವ ಸಂಪುಟ ಸಭೆ ಸೋಮವಾರ ತಮಿಳುನಾಡು ಸಚಿವಾಲಯದಲ್ಲಿ ನಡೆಯಲಿದ್ದು, ಜಯಲಲಿತಾ ಸಾವಿನ ಪ್ರಕರಣದ ತನಿಖೆ ಕುರಿತು ಚರ್ಚೆ ನಡೆಸುವ ನಿರೀಕ್ಷೆಯಿದೆ. ಗಮನಾರ್ಹವೆಂದರೆ, ಆರ್ಮುಗಸ್ವಾಮಿ ಆಯೋಗವು ನವೆಂಬರ್ 2017 ರಲ್ಲಿ ಜಯಲಲಿತಾ ಅವರ ಆಪ್ತ ಸಹಾಯಕರು ಮತ್ತು ಚಿಕಿತ್ಸೆ ನೀಡಿದ ವೈದ್ಯರು, ತಮಿಳುನಾಡು ಆರೋಗ್ಯ ಸಚಿವ ವಿಜಯಭಾಸ್ಕರ್, ನಂತರ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್, ತಮಿಳುನಾಡು ಹಣಕಾಸು ಸಚಿವ ಮತ್ತು ಎಐಎಡಿಎಂಕೆ ಹಿರಿಯ ನಾಯಕ ಒ. ಪನ್ನೀರ್‌ಸೆಲ್ವಂ ಅವರನ್ನೂ ತನಿಖೆಗೆ ಒಳಪಡಿಸಲಾಗಿತ್ತು.

English summary
A one-member commission headed by retired Justice Arumugaswamy appointed to probe the death of former chief minister Jayalalithaa on Saturday submitted its report to Tamil Nadu Chief Minister MK Stalin at the ministry after five years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X