ಜಲ ಪ್ರಳಯ: ನೀರಿನಲ್ಲಿ ಸಿಲುಕಿ ದ್ವೀಪವಾದ ಚೆನ್ನೈ
ಚೆನ್ನೈ, ಡಿ. 02: ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಲ್ಲಿ ತನಕ ಮಳೆಗೆ ಆಹುತಿಯಾಗಿರುವವರ ಸಂಖ್ಯೆ 188ಕ್ಕೇರಿದೆ. ಕಳೆದ ಎರಡು ದಿನಗಳ ಮಳೆಗೆ ಚೆನ್ನೈ ನಗರದಲ್ಲೇ ಮೂವರು ಅಸುನೀಗಿದ್ದಾರೆ. ಭಾರತೀಯ ಸೇನೆ, ವಿಪತ್ತು ನಿರ್ವಹಣಾ ದಳ ಸೇರಿದಂತೆ ಜನ ಸಾಮಾನ್ಯರು ಕೂಡಾ ತಮ್ಮ ಸಹಾಯ ಹಸ್ತ ಚಾಚಿದ್ದಾರೆ.
ಚೆನ್ನೈನಲ್ಲಿ ಹಲವಾರು ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ನಗರದ ಮೂಲಸೌಕರ್ಯ ವ್ಯವಸ್ಥೆ ತೀರ ಹದಗೆಟ್ಟಿದ್ದು, ಹಲವಾರು ರಸ್ತೆಗಳು ಬಾಯಿ ಬಿಟ್ಟಿವೆ.ರಸ್ತೆ ಸಂಚಾರಕ್ಕೆ ತೀರ ಅಡ್ಡಿಯಾಗಿದ್ದು, ರೈಲುಗಳ ಸಂಚಾರವೂ ವ್ಯತ್ಯಯಗೊಂಡಿದೆ. ಸರಿ ಸುಮಾರು 22ಕ್ಕೂ ಅಧಿಕ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.[ವಿಡಿಯೋ : ಚೆನ್ನೈನಲ್ಲಿ ಮಳೆ ಅವಾಂತರ, ಟ್ರಾಫಿಕ್ ಜಾಮ್]
ಒಂಬತ್ತು ವಿಮಾನಯಾನಗಳಲ್ಲಿ ವಿಳಂಬವುಂಟಾಗಿ, ವಿಮಾನ ನಿಲ್ದಾಣದಲ್ಲಿ ನೀರು ತುಂಬಿದ್ದರಿಂದ ವಿಮಾನಯಾನ ಕೂಡಾ ರದ್ದಾಗಿದೆ. ನೆರೆ ಎಚ್ಚರಿಕೆಯನ್ನು ನೀಡಿರುವ ಚೆನ್ನೈ ಮತ್ತು ಕಾಂಚಿಪುರಂ ಜಿಲ್ಲಾಡಳಿತಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜನರಿಗೆ ಸೂಚಿಸಿವೆ.
ಪ್ರಮುಖ ಐಟಿ ಕಂಪೆನಿಗಳಿರುವ ಚೆನ್ನೈನ ಮಧ್ಯ ಕೈಲಾಷ್ ಪ್ರದೇಶದಲ್ಲಿ ಹಲವಾರು ರಸ್ತೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಐಟಿ ಬಿಟಿ ಕಂಪನಿಗಳು ಹಲವು ಖಾಸಗಿ ಕಂಪನಿಗಳು ಬಂದ್ ಆಗಿವೆ. ಉತ್ತರ ಚೆನ್ನೈ, ಮಂಡವೇಲಿ, ಪಿ.ಎಸ್.ಶಿವಸ್ವಾಮಿ ಸಲೈ, ಮೈಲಾಪುರ, ತಾರಮಣಿ ಲಿಂಕ್ ರೋಡ್, ರಾಜೀವ್ ಗಾಂಧಿ ಸಲೈ ಸೇರಿದಂತೆ ನಗರದ ಇತರ ಹಲವಾರು ಕಡೆಗಳಲ್ಲೂ ರಸ್ತೆಗಳು ಹಾನಿಗೀಡಾಗಿವೆ.

ಟ್ರಾಫಿಕ್ ಜಾಮ್, ರಸ್ತೆ ದುರಸ್ತಿ ಜನತೆ ಕಂಗಾಲು
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳಲ್ಲಿ ತುಂಬಿಕೊಂಡಿರುವ ನೀರು ಮತ್ತು ಬಿರುಕು ವಾಹನ ಸವಾರಿ ಆಡ್ಡಿಯುಂಟು ಮಾಡಿದೆ. ಚೆನ್ನೈ ನಗರದಾದ್ಯಂತ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳ ಚಾಲಕರು ಪರದಾಡುವಂತಾಗಿದೆ.

ಹಾಳಾದ ರಸ್ತೆ, ಕೈಕಟ್ಟಿ ನಿಂತ ಆಡಳಿತ ಮಂಡಳಿ
ಮಹಾನಗರದಲ್ಲಿನ ರಸ್ತೆಗಳ ಕಳಪೆತನ ಈ ಭಾರೀ ಮಳೆಯಿಂದಾಗಿ ಬಯಲಾಗಿದ್ದು, ಅಧಿಕಾರಿಗಳು ಕೆಲವು ಪ್ರದೇಶಗಳಲ್ಲಿ ದುರಸ್ತಿ ಕಾರ್ಯಗಳನ್ನು ಆರಂಭಿಸಿದ್ದಾರೆ. ಅದರೆ, ಎಂದೂ ಎದುರಿಸಿದಂಥ ಜಲಪ್ರಳಯ ಪರಿಸ್ಥಿತಿ ನಿಭಾಯಿಸಲು ತಿಳಿಯದೆ ಕೇಂದ್ರ ಸರ್ಕಾರದ ಮೊರೆ ಹೊಕ್ಕಲಾಗಿದೆ.

ತಮಿಳುನಾಡಿನ ಹಲವೆಡೆ ನಿರಂತರ ಮಳೆ
ಚೆನ್ನೈ, ಕಾಂಚೀಪುರಂ, ತಿರವಲ್ಲೂರು, ವಿಲ್ಲುಪುರಂ, ಕುಡ್ಡಲೂರು, ಪುದುಚೇರಿ ಮತ್ತು ಕಾರೈಕಲ್ಗಳಲ್ಲಿ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಬುಧವಾರದವರೆಗೂ ಮುನ್ಸೂಚನೆ ಇದೆ
ಬುಧವಾರದವರೆಗೂ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಉತ್ತರ ತಮಿಳುನಾಡು ಮತ್ತು ಪುದುಚೇರಿಗಳಲ್ಲಿ ಅತ್ಯಂತ ಭಾರೀ ಮಳೆ ಸುರಿಯಲಿದೆ ಎಂದು ಅದು ಎಚ್ಚರಿಕೆ ನೀಡಿದೆ.
|
ಇನ್ಫೋಸಿಸ್ ನಲ್ಲಿ ಮಳೆ ಹಾವಳಿ
ಇನ್ಫೋಸಿಸ್ ಸೇರಿದಂತೆ ಹಲವು ಐಟಿ ಬಿಟಿ ಕಂಪನಿಗಳಲ್ಲಿ ಮಳೆ ಹಾವಳಿ
|
ಎಲ್ಲರಿಗೂ ವಿಷಯ ತಿಳಿಸಿ
ಎಲ್ಲರಿಗೂ ವಿಷಯ ತಿಳಿಸಿ, ಜನರಿಗೆ ನೆರವು ನೀಡಿ ಎಂದು ಟ್ವೀಟ್
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು












Click it and Unblock the Notifications