ಪಿಎಂ ಕೇರ್ಸ್ ಬಗ್ಗೆ ಟ್ವೀಟ್ ಮಾಡಿ ಕೆಲ್ಸ ಕಳೆದುಕೊಂಡ ಡಾಕ್ಟರ್
ಚೆನ್ನೈ, ಜೂನ್ 17: ಭಾರತ ಹಾಗೂ ಚೀನಾ ಗಡಿಭಾಗದಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. 20ಕ್ಕೂ ಅಧಿಕ ಭಾರತೀಯ ಯೋಧರು, 43ಕ್ಕೂ ಅಧಿಕ ಚೀನಿಯರು ಮೃತಪಟ್ಟ ಘಟನೆ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ ಪ್ರಮುಖ ತಂಡ ಚೆನ್ನೈ ಸೂಪರ್ ಕಿಂಗ್ಸ್( ಸಿಎಸ್ ಕೆ) ನ ಟೀಂ ಡಾಕ್ಟರ್ ಮಾಡಿದ ಟ್ವೀಟ್ ವಿವಾದಕ್ಕೆ ಕಾರಣವಾಗಿದೆ.
Recommended Video
ಲಡಾಕ್ ಸಂಘರ್ಷ ಕುರಿತಂತೆ ಸಿಎಸ್ ಕೆ ಟ್ವೀಟ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡ ಡಾಕ್ಟರ್ ಮಧು ಥೊಟ್ಟಪಿಳ್ಳಿಲ್ ರನ್ನು ಅವರ ಹುದ್ದೆಯಿಂದ ತೆಗೆದು ಹಾಕಲಾಗಿದೆ.

ಭೂ ಸೇನೆಯಲ್ಲಿ ಗೌರವಯುತ ಲೆಫ್ಟಿನೆಂಟ್ ಆಗಿರುವ ಎಂಎಸ್ ಧೋನಿ ನಾಯಕತ್ವದ ತಂಡದ ಡಾಕ್ಟರ್ ಮಧು ಅವರು ಮಾಡಿದ ಕೃತ್ಯಕ್ಕೆ ಭಾರಿ ಬೆಲೆ ತೆತ್ತಿದ್ದಾರೆ. ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಒಡೆತನದ ಚೆನ್ನೈ ತಂಡದ ಡಾಕ್ಟರ್ ಅವರು ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರ ಶವಗಳನ್ನು ಹೊತ್ತು ತರುವ ಶವಪೆಟ್ಟಿಗೆ ಮೇಲೆ ಕೂಡಾ ಪಿಎಂ ಕೇರ್ಸ್ ಎಂದು ಬರೆಯಲಾಗಿರುತ್ತದೆಯೇ? ಎಂದು ಪಿಎಂ ಕೇಸ್ ಫಂಡ್ ಬಗ್ಗೆ ಗೇಲಿ ಮಾಡಿದ್ದರು.
ಮೋದಿ ಸರ್ಕಾರದ ವಿರುದ್ಧ ಇದ್ದ ಈ ಟ್ವೀಟ್ ಬಗ್ಗೆ ಆಕ್ಷೇಪಗಳು ಕೇಳಿ ಬಂದಿತ್ತು. ಕೊನೆಗೆ ಟ್ವೀಟ್ ಡಿಲೀಟ್ ಮಾಡಿ ಟ್ವಿಟ್ಟರ್ ಖಾತೆ ಲಾಕ್ ಮಾಡಿಕೊಂಡಿದ್ದ ಡಾ. ಮಧುಗೆ ಸಿಎಸ್ ಕೆ ತಂಡದ ಮ್ಯಾನೇಜ್ಮೆಂಟ್ ನೋಟಿಸ್ ನೀಡಿದ್ದಲ್ಲದೆ, ಟ್ವೀಟ್ ಮೂಲಕವೆ ಅಮಾನತು ಮಾಡಿರುವ ಆದೇಶ ಪ್ರಕಟಿಸಿದೆ.
The Chennai Super Kings Management was not aware of the personal tweet of Dr. Madhu Thottappillil. He has been suspended from his position as the Team Doctor.
— Chennai Super Kings (@ChennaiIPL) June 17, 2020
Chennai Super Kings regrets his tweet which was without the knowledge of the Management and in bad taste.
''ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ರೀತಿಯ ಟ್ವೀಟ್ ಬಗ್ಗೆ ವಿಷಾದ ವ್ಯಕ್ತಪಡಿಸುತ್ತದೆ. ಇಂಥ ಕೆಟ್ಟ ಅಭಿರುಚಿಯ ಟ್ವೀಟ್ ಅವರ ವೈಯಕ್ತಿಕ ಖಾತೆಯಿಂದ ಬಂದಿತ್ತು ಹಾಗೂ ನಮ್ಮ ಗಮನಕ್ಕೆ ಬಂದ ತಕ್ಷಣ ಸೂಕ್ತ ಕ್ರಮ ಕೈಗೊಂಡಿದ್ದೇವೆ" ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮ್ಯಾನೇಜ್ಮೆಂಟ್ ಹೇಳಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications