ಅಪಘಾತ ಸಂತ್ರಸ್ತರಿಗೆ ಸಹಾಯ ಮಾಡಿ, ನಗದು ಬಹುಮಾನ ಪಡೆಯಿರಿ: ಸಿಎಂ ಸ್ಟಾಲಿನ್
ಚೆನ್ನೈ ಮಾರ್ಚ್ 22: ರಸ್ತೆ ಅಪಘಾತವಾದಾಗ ಸಹಾಯ ಮಾಡುವವರಿಗಿಂತ ದೂರ ಓಡಿ ಹೋಗುವವರೇ ಹೆಚ್ಚು. ಯಾಕೆಂದರೆ ಇದರ ಹಿಂದೆ ಕೇಸ್ ಕಚೇರಿ ಅಲೆದಾಡುವ ಪ್ರಸಂಗ ಬರಬಹುದು ಎನ್ನುವ ಆತಂಕ ಜನರಿಗಿದೆ. ಆದರೆ ಅಪಘಾತ ಸಂದರ್ಭದಲ್ಲಿ ಸಹಾಯ ಮಾಡುವ ಜನರಿಗೆ ತಮಿಳುನಾಡು ಸರ್ಕಾರ ಬಹುಮಾನ ನೀಡಲು ಮುಂದಾಗಿದೆ. ಹೀಗೊಂದು ಯೋಜನೆಯನ್ನು ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಜಾರಿಗೆ ತಂದಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸೋಮವಾರ ರಾಜ್ಯದಲ್ಲಿ ರಸ್ತೆ ಅಪಘಾತದಲ್ಲಿ ಬಲಿಯಾದವರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಸಹಾಯ ಮಾಡುವ ಜನರಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸ್ಟಾಲಿನ್, ರಸ್ತೆ ಅಪಘಾತದಲ್ಲಿ ಸಿಲುಕಿದವರಿಗೆ ಸಹಾಯ ಮಾಡುವವರು ಮತ್ತು ಗೋಲ್ಡನ್ ಅವರ್ ಅವಧಿಯಲ್ಲಿ ಅವರನ್ನು ವೈದ್ಯಕೀಯ ಆರೈಕೆ ಸೌಲಭ್ಯಕ್ಕೆ ಕರೆದೊಯ್ಯುವವರಿಗೆ ಪ್ರಶಂಸಾ ಪತ್ರ ಮತ್ತು 5,000 ರೂಪಾಯಿ ನಗದು ಬಹುಮಾನವನ್ನು ನೀಡಲಾಗುತ್ತದೆ ಎಂದಿದ್ದಾರೆ.

ಗಾಯಾಳುಗಳಿಗೆ ಮೊದಲ 48 ಗಂಟೆಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವ 'ಇನ್ನುಯಿರ್ ಕಾಪ್ಪೋನ್' ಯೋಜನೆಗೆ ಮುಖ್ಯಮಂತ್ರಿಗಳು ಈ ಹಿಂದೆ ಚಾಲನೆ ನೀಡಿದ್ದರು. ರಾಜ್ಯದಾದ್ಯಂತ 609 ಆಸ್ಪತ್ರೆಗಳು 408 ಖಾಸಗಿ ಆಸ್ಪತ್ರೆಗಳು ಮತ್ತು 201 ಸರ್ಕಾರಿ ಆಸ್ಪತ್ರೆಗಳು ಗೋಲ್ಡನ್ ಅವರ್ನಲ್ಲಿ ವೈದ್ಯಕೀಯ ಸೇವೆಯನ್ನು ಒದಗಿಸಲು ಮತ್ತು ಜೀವಗಳನ್ನು ಉಳಿಸಲು ಜಾಲಬಂಧ ಹೊಂದಿವೆ.
ಈ ಯೋಜನೆಯು ಸುಮಾರು 81 ಮಾನ್ಯತೆ ಪಡೆದ ಸಂತ್ರಸ್ತರಿಗೆ ಗರಿಷ್ಠ ಒಂದು ಲಕ್ಷ ರೂ.ವರೆಗಿನ ರಕ್ಷಣೆಯನ್ನು ನೀಡುತ್ತದೆ ಮತ್ತು ಈ ಸೂಚಕವು ಮುಖ್ಯಮಂತ್ರಿಗಳ ಸಮಗ್ರ ಆರೋಗ್ಯ ವಿಮಾ ಯೋಜನೆಯ (CMCHIS) ಫಲಾನುಭವಿಗಳು ಮತ್ತು ಸದಸ್ಯರಲ್ಲದವರನ್ನು ಒಳಗೊಂಡಿರುತ್ತದೆ. ಮೊದಲ 48 ಗಂಟೆಗಳ ಅವಧಿಯಲ್ಲಿ ತಮಿಳುನಾಡಿನ ಅಪಘಾತ ಸಂತ್ರಸ್ತರಿಗೆ ಮತ್ತು ರಾಜ್ಯಕ್ಕೆ ಭೇಟಿ ನೀಡುವ ಇತರರಿಗೆ ಉಚಿತ ವೈದ್ಯಕೀಯ ಸೇವೆಯನ್ನು ಒದಗಿಸಲಾಗುತ್ತದೆ.

CMCHIS ನ ಫಲಾನುಭವಿಗಳಿಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಮುಂದುವರಿಸಲು ಅನುಮತಿಸಲಾಗುವುದು ಮತ್ತು ಈ ಯೋಜನೆ ಅಥವಾ ಯಾವುದೇ ವಿಮಾ ಯೋಜನೆಯ ಅಡಿಯಲ್ಲಿ ಒಳಪಡದವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ.












Click it and Unblock the Notifications