ರಾಹುಲ್ ಗಾಂಧಿ ಜೊತೆ ಜನಸಾಗರ, ಸೆ. 19ಕ್ಕೆ ಪ್ರಿಯಾಂಕಾ ಗಾಂಧಿ ಕೂಡ ಸಾತ್
ಚೆನ್ನೈ, ಸೆಪ್ಟೆಂಬರ್ 10: ಕಾಂಗ್ರೆಸ್ ಪಕ್ಷದಿಂದ ನಡೆಯುತ್ತಿರುವ 'ಭಾರತ್ ಜೋಡೋ ಯಾತ್ರೆ'ಗೆ ಇಂದು ನಾಲ್ಕನೇ ದಿನವಾದ ಶನಿವಾರ ರಾಹುಲ್ ಗಾಂಧಿ ಅವರಿಂದ ಈ ಪಾದಯಾತ್ರೆ ತಮಿಳುನಾಡಿನ ಕನ್ಯಾಕುಮಾರಿಯ ಮುಳಗುಮುಡಿಯಿಂದ ಆರಂಭವಾಯಿತು. ಈ ಭಾರತ್ ಜೋಡೋ ಯಾತ್ರೆಯ 4ನೇ ದಿನದಂದು, ನಮ್ಮ ದೇಶದಲ್ಲಿ 42% ಯುವಕರು ನಿರುದ್ಯೋಗಿಗಳಾಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ 'ಭಾರತ್ ಜೋಡೋ ಯಾತ್ರೆ'ಯ ನಾಲ್ಕನೇ ದಿನದಂದು ಮಾಜಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಈ ಪ್ರಶ್ನೆಯನ್ನು ಎತ್ತಿದ್ದಾರೆ. "ನಮ್ಮಲ್ಲಿ ಶೇಕಡಾ 42ರಷ್ಟು ಯುವಕರು ನಿರುದ್ಯೋಗಿಗಳಾಗಿದ್ದಾರೆ. ಅವರದ್ದಲ್ಲದಿದ್ದರೆ, ಭಾರತದ ಭವಿಷ್ಯ ಸುಭದ್ರವಾಗಿದೆಯೇ? ಅವರೆಲ್ಲರಿಗಾಗಿ ನಾವು ನಡೆಯುತ್ತೇವೆ. ನಾವು ಉದ್ಯೋಗಕ್ಕಾಗಿ ನಡೆಯುತ್ತೇವೆ ಎಂದು ರಾಹುಲ್ ಗಾಂಧಿ ಯಾತ್ರೆಯ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.
ಇನ್ನು ಯುವಕರೊಂದಿಗೆ ಭಾರಿ ಸಂಖ್ಯೆಯಲ್ಲಿ ಹೆಜ್ಜೆ ಹಾಕಿದ ರಾಹುಲ್ ಈ ವೇಳೆ ಕಾಂಗ್ರೆಸ್ ಮುಖಂಡರ ಜೊತೆ ಜನಸಾಗರವೇ ಹರಿದು ಬಂದಿತ್ತು. ಈ ಭೇಟಿಯ ವೇಳೆ ಹಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು. ಈ ಭೇಟಿಯನ್ನು ಬೃಹತ್ ಜನಸಂಪರ್ಕ ಅಭಿಯಾನ ಎಂದು ಪಕ್ಷ ಬಣ್ಣಿಸಿದೆ. ಸೆಪ್ಟೆಂಬರ್ 19ರಂದು ಪ್ರಿಯಾಂಕಾ ಗಾಂಧಿ ಕೂಡ ಭಾರತ್ ಜೋಡೋ ಯಾತ್ರೆಗೆ ಸೇರುವ ಸಾಧ್ಯತೆಯಿದೆ.
ಶನಿವಾರ ಕಾಂಗ್ರೆಸ್ ನಾಯಕ ಶ್ರೀಪೆರಂಬದೂರಿನಿಂದ ರಾಹುಲ್ ಗಾಂಧಿ 'ಭಾರತ್ ಜೋಡೋ ಯಾತ್ರೆ' ಆರಂಭಿಸಿದರು. ಇಲ್ಲಿನ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸ್ಮಾರಕದಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಅವರು ಭಾಗವಹಿಸಿದ್ದರು. ಮೂರು ದಶಕಗಳ ಹಿಂದೆ ಇಲ್ಲಿಯೇ ಆತ್ಮಾಹುತಿ ದಾಳಿಯಲ್ಲಿ ರಾಜೀವ್ ಗಾಂಧಿ ಹತ್ಯೆಯಾಗಿದ್ದರು. ತಮ್ಮ ತಂದೆಯ ಸ್ಮಾರಕದಲ್ಲಿ ಆಯೋಜಿಸಲಾದ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ ನಂತರ, ಮಾಜಿ ಕಾಂಗ್ರೆಸ್ ಅಧ್ಯಕ್ಷರು ಕನ್ಯಾಕುಮಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಅಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು.

ಯಾತ್ರೆ ನಾಳೆ ಕೇರಳಕ್ಕೆ 'ಭಾರತ್ ಜೋಡೋ ಯಾತ್ರೆ
ಪಾದಯಾತ್ರೆಯು ಸೆಪ್ಟೆಂಬರ್ 11 ರಂದು ಕೇರಳವನ್ನು ತಲುಪುತ್ತದೆ ಮತ್ತು ಮುಂದಿನ 18 ದಿನಗಳ ಕಾಲ ರಾಜ್ಯದಲ್ಲಿ ಸಂಚರಿಸಿ ಸೆಪ್ಟೆಂಬರ್ 30 ರಂದು ಕರ್ನಾಟಕವನ್ನು ತಲುಪುತ್ತದೆ, ನಂತರ ಉತ್ತರಾಭಿಮುಖವಾಗಿ ಇತರ ರಾಜ್ಯಗಳಿಗೆ ತೆರಳಲಿದೆ. ಪಾದಯಾತ್ರೆಯಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪ್ರಯಾಣಿಸಲಿರುವ ರಾಹುಲ್ ಸೇರಿದಂತೆ 119 ನಾಯಕರನ್ನು "ಭಾರತ ಯಾತ್ರಿಗಳು" ಎಂದು ಪಕ್ಷ ಹೆಸರಿಸಿದೆ. ಈ ಜನರು ಒಟ್ಟು 3570 ಕಿ.ಮೀ.

ಇನ್ನು ಮುಗಿದಿಲ್ಲ ರಾಹುಲ್ ಟೀ ಶರ್ಟ್ ಗಲಾಟೆ
ಭಾರತೀಯ ಜನತಾ ಪಕ್ಷ (ಬಿಜೆಪಿ) ಶುಕ್ರವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಗುರಿಯಾಗಿಸಿದೆ. 'ಭಾರತ್ ಜೋಡೋ ಯಾತ್ರೆ' ವೇಳೆ ಅವರು ಧರಿಸಿದ್ದ ಟೀ ಶರ್ಟ್ 41,000 ರೂ.ಗೂ ಹೆಚ್ಚು ಮೌಲ್ಯದ್ದಾಗಿದೆ ಎಂದು ಪಕ್ಷ ಹೇಳಿಕೊಂಡಿದೆ. ಇದಕ್ಕೆ ಕಾಂಗ್ರೆಸ್ ಕೂಡ ಸೆಡ್ಡು ಹೊಡೆದಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ನೆರೆದಿದ್ದ ಜನಸಮೂಹದಿಂದ ಬಿಜೆಪಿಗೆ ಭಯವಾಗಿದೆ ಎಂದು ಕಾಂಗ್ರೆಸ್ ಹೇಳುವ ಮೂಲಕ ಮರಳಿ ಟಾಂಗ್ ನೀಡಿದೆ ಇನ್ನು 'ಭಾರತ್ ಜೋಡೋ ಯಾತ್ರೆ' ಸಕತ್ ಜನರ ಮೆಚ್ಚುಗೆ ಪಡೆಯುತ್ತಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿದೆ.

ಬಿಜೆಪಿಯಿಂದ 'ಭಾರತ್ ದೇಖೋ' ಟ್ವೀಟ್ ಮೂಲಕ ಟೀಕೆ
ಬಿಜೆಪಿ ತನ್ನ ಟ್ವಿಟರ್ ಹ್ಯಾಂಡಲ್ನಿಂದ 'ಭಾರತ್ ದೇಖೋ' ಎಂದು ಟ್ವೀಟ್ ಮಾಡಿ ಎರಡು ಚಿತ್ರಗಳನ್ನು ಪೋಸ್ಟ್ ಮಾಡಿದೆ. ಒಂದು ಚಿತ್ರವು ರಾಹುಲ್ ಗಾಂಧಿಯನ್ನು ತೋರಿಸಿದರೆ ಇನ್ನೊಂದು ಅವರು ಧರಿಸಿರುವ ಶರ್ಟ್ನ ಬೆಲೆಯನ್ನು ತೋರಿಸುತ್ತದೆ. ಬರ್ಬೆರಿ ಟಿ-ಶರ್ಟ್ ಬೆಲೆ 41,257 ರೂಪಾಯಿ ಎಂದು ಹೇಳಲಾಗಿದೆ. ದೆಹಲಿ ಬಿಜೆಪಿ ಉಪಾಧ್ಯಕ್ಷ ಸುನೀಲ್ ಯಾದವ್ ಅವರು ಟ್ವಿಟ್ಟರ್ ಮೂಲಕ ಹೀಗೆ ಬರೆದಿದ್ದಾರೆ, "ಕಾಂಗ್ರೆಸ್ ರಾಜಕುಮಾರ ಈ 42 ಸಾವಿರ ರೂಪಾಯಿಗಳ ಟೀ ಶರ್ಟ್ನಲ್ಲಿ ನಡೆಯುವಾಗ ಕಡಿಮೆ ಶಾಖವನ್ನು ಅನುಭವಿಸಿರಬಹುದು ಅಥವಾ ಹಣದುಬ್ಬರವು ಬಡವನಿಗಿಂತ ಹೆಚ್ಚು ದುಬಾರಿಯಾಗಿದೆ" ಟೀಕೆ ಮಾಡಿದ್ದರು.

‘ಭಾರತ ಯಾತ್ರಿಗಳು’ ಎಂದು ಪಕ್ಷ ಹೆಸರಿಸಿದೆ
ಬುಧವಾರ ರಾಹುಲ್ ಗಾಂಧಿ 118 ಭಾರತ ಯಾತ್ರಿಗಳು ಮತ್ತು ಇತರ ಅನೇಕ ಹಿರಿಯ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಇಲ್ಲಿನ 'ವಿವೇಕಾನಂದ ಪಾಲಿಟೆಕ್ನಿಕ್' ನಿಂದ ಪಾದಯಾತ್ರೆಯನ್ನು ಪ್ರಾರಂಭಿಸಿದರು . ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸಲಿರುವ ರಾಹುಲ್ ಸೇರಿದಂತೆ 119 ನಾಯಕರನ್ನು 'ಭಾರತ ಯಾತ್ರಿಗಳು' ಎಂದು ಪಕ್ಷ ಹೆಸರಿಸಿದೆ. ಈ ಜನರು ಒಟ್ಟು 3570 ಕಿ.ಮೀ. ಕಾಂಗ್ರೆಸ್ ಬುಧವಾರ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆಯನ್ನು ಔಪಚಾರಿಕವಾಗಿ ಆರಂಭಿಸಿದ್ದು, ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಲಿಖಿತ ಸಂದೇಶದ ಮೂಲಕ ಈ ಯಾತ್ರೆಯು ಭಾರತೀಯ ರಾಜಕಾರಣದ ಪರಿವರ್ತಕ ಕ್ಷಣವಾಗಿದ್ದು, ಕಾಂಗ್ರೆಸ್ಗೆ ಸಂಜೀವಿನಿಯಾಗಲಿದೆ ಎಂದು ಕರೆ ನೀಡಿದ್ದರು.












Click it and Unblock the Notifications