ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪನ್ನೀರ್ ಸೆಲ್ವಂರ ತಮ್ಮನನ್ನು ಉಚ್ಚಾಟಿಸಿದ ಎಐಎಡಿಎಂಕೆ

|
Google Oneindia Kannada News

ಚೆನ್ನೈ, ಡಿಸೆಂಬರ್ 19: ತಮಿಳುನಾಡಿನ ಉಪ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಅವರ ಸೋದರ ಓ ರಾಜ ಅವರನ್ನು ಆಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಉಚ್ಚಾಟನೆ ಮಾಡಿದೆ.

ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಅವರಿಬ್ಬರ ಅಂಕಿತವಿರುವ ಆದೇಶ ಪತ್ರವನ್ನು ಪ್ರಕಟಿಸಲಾಗಿದೆ.

AIADMK Expels O Panneerselvams Brother O Raja

ಪಕ್ಷದ ಸಿದ್ಧಾಂತಗಳ ವಿರುದ್ಧ ನಡೆದುಕೊಂಡಿರುವುದು, ಪಕ್ಷದ ಘನತೆಗೆ ಕಳಂಕ ತಂದಿರುವುದು ಮುಂತಾದ ಕಾರಣಗಳನ್ನು ನೀಡಲಾಗಿದೆ. ಓ ರಾಜ ಅವರು ಹಾಲಿನ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೆ ಈ ರೀತಿಯ ಆದೇಶ ಬಂದಿದೆ.

Raja

ಥೇಣಿ ಜಿಲ್ಲೆಯ ಪೆರಿಯಕುಲಂ ನಗರದ ಮುಖ್ಯಸ್ಥರಾಗಿದ್ದ ರಾಜ ಅವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ, ಪಿತೂರಿ ಆರೋಪವಿದೆ.

'ಸರ್ಕಾರ್' ಚಿತ್ರದಲ್ಲಿ ಜಯಲಲಿತಾ ವಿಲನ್, ಎಐಎಡಿಎಂಕೆ ಕಿಡಿ'ಸರ್ಕಾರ್' ಚಿತ್ರದಲ್ಲಿ ಜಯಲಲಿತಾ ವಿಲನ್, ಎಐಎಡಿಎಂಕೆ ಕಿಡಿ

ಎಎಂಎಂಕೆ ಮುಖ್ಯಸ್ಥ ಟಿಟಿವಿ ದಿನಕರನ್ ಅವರನ್ನು ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ ಅವರು ಭೇಟಿ ಮಾಡಿದ್ದರು. ಆದರೆ, ರಾಜ ಅವರನ್ನು ಉಚ್ಚಾಟನೆ ಮಾಡಲು ಇದು ಕಾರಣವಲ್ಲ ಎಂದು ಪಕ್ಷದ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ತಮಿಳುನಾಡು ಸಿಎಂ ವಿರುದ್ಧ ದನಿಯೆತ್ತಿದ್ದ ನಟ ಬಂಧನತಮಿಳುನಾಡು ಸಿಎಂ ವಿರುದ್ಧ ದನಿಯೆತ್ತಿದ್ದ ನಟ ಬಂಧನ

ಇತ್ತೀಚೆಗೆ ಮಧುರೈ ಹಾಲು ಒಕ್ಕೂಟಕ್ಕೆ ಅವಿರೋಧವಾಗಿ ಆಯ್ಕೆಯಾದರು. ಆದರೆ, ರಾಜ್ಯ ರಾಜಕೀಯದಲ್ಲಿ ದಿಢೀರ್ ಹೆಸರು ಮಾಡಲು ವಾಮ ಮಾರ್ಗ ಹಿಡಿದ ಕಾರಣ, ಪಕ್ಷದಿಂದ ಉಚ್ಚಾಟಿಸಲಾಗಿದೆ.

English summary
A statement signed by chief minister Edappadi K Palaniswami and Mr Panneerselvam said Mr Raja was removed "for having acted against the party's principles and ideologies, and for bringing disrepute to the party."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X