ಪಂಜಾಬ್ 3 ಲಕ್ಷ ಕೋಟಿ ಸಾಲದಿಂದ ಮುಕ್ತಿ; ಆಪ್ ಚುನಾವಣಾ ಭರವಸೆ

ಚಂಡೀಗಢ, ಜನವರಿ 15: "ಆಮ್ ಆದ್ಮಿ ಪಕ್ಷವು ಪಂಜಾಬ್ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ, ಪಂಜಾಬ್‌ನಲ್ಲಿ ಭ್ರಷ್ಟಾಚಾರ, ಗೂಂಡಾಗಿರಿ ಮತ್ತು ಸರ್ವಾಧಿಕಾರವನ್ನು ತಮ್ಮ ಸರ್ಕಾರ ಸಹಿಸುವುದಿಲ್ಲ," ಎಂದು ಪಂಜಾಬ್ ಎಎಪಿ ಅಧ್ಯಕ್ಷ ಭಗವಂತ್ ಮಾನ್ ಶುಕ್ರವಾರ ಹೇಳಿದ್ದಾರೆ.

ಪಂಜಾಬ್‌ನ ಚಂಡಿಗ್ರಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭಗವಂತ್ ಮಾನ್, "ಪಂಜಾಬ್‌ನಲ್ಲಿ ಭ್ರಷ್ಟಾಚಾರ, ಗೂಂಡಾಗಿರಿ ಮತ್ತು ಸರ್ವಾಧಿಕಾರವನ್ನು ಎಎಪಿ ಸರ್ಕಾರ ಸಹಿಸುವುದಿಲ್ಲ. ಸೇಡು ಮತ್ತು ಉದ್ದೇಶಪೂರ್ವಕವಾಗಿ ಎದುರಾಳಿಗಳಿಗೆ ಕಿರುಕುಳ ನೀಡುವುದು ಪಕ್ಷದ ಸಿದ್ಧಾಂತದ ಭಾಗವಲ್ಲ ಮತ್ತು ಪಂಜಾಬ್ ಅನ್ನು ಸಮೃದ್ಧ, ಅಭಿವೃದ್ಧಿ ಮತ್ತು ಶಾಂತಿಯುತ ರಾಜ್ಯ ಹೊಂದಲು ಎಎಪಿ ಬದ್ಧವಾಗಿದೆ," ಎಂದು ಅವರು ಹೇಳಿದರು.

ರಾಜ್ಯದ ಮೇಲೆ 3 ಲಕ್ಷ ಕೋಟಿ ಸಾಲ ಇರುವುದರಿಂದ ರಾಜ್ಯದ ಪ್ರತಿ ಮಗುವೂ 1 ಲಕ್ಷ ರೂಪಾಯಿ ಸಾಲದೊಂದಿಗೆ ಹುಟ್ಟುತ್ತದೆ ಎಂದು ಭಗವಂತ್ ಮಾನ್ ಹೇಳಿದರು.

Punjab Will Get Rid of Rs 3 Lakh Crore Debt; AAP Leader Bhagwant Mann Election Promise

"ಇಂದು ಪಂಜಾಬ್ ಮೂರು ಲಕ್ಷ ಕೋಟಿಗೂ ಹೆಚ್ಚು ಸಾಲವನ್ನು ಹೊಂದಿದೆ ಮತ್ತು ಪಂಜಾಬ್ ಮೂರು ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಹೀಗೆ ಪ್ರತಿಯೊಬ್ಬ ಪಂಜಾಬಿಯ ತಲೆಯ ಮೇಲೆ ಒಂದು ಲಕ್ಷ ಸಾಲವಿದೆ, ಅಂದರೆ ಪಂಜಾಬ್‌ನಲ್ಲಿ ಹುಟ್ಟುವ ಪ್ರತಿ ಮಗು ಸಾಲದ ಅಡಿಯಲ್ಲಿ ಹುಟ್ಟುತ್ತಿದೆ. ಪಂಜಾಬ್‌ನ ಶ್ರೀಮಂತ ಕುಟುಂಬಗಳು ಮತ್ತು ಕಾಂಗ್ರೆಸ್, ಬಿಜೆಪಿ ಮತ್ತು ಎಸ್‌ಎಡಿ ನಾಯಕರ ಸಂಪತ್ತು ಸ್ಥಿರವಾಗಿ ಹೆಚ್ಚುತ್ತಿದೆ,'' ಎಂದು ಅವರು ಆರೋಪಿಸಿದರು.

ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ರಚನೆಯಾದ ನಂತರ ಸರ್ಕಾರದ ಖಜಾನೆ ತುಂಬಲಿದೆ ಎಂದು ಹೇಳಿದ ಭಗವಂತ್ ಮಾನ್, ಪಂಜಾಬ್‌ನಲ್ಲಿ ತಮ್ಮ ಪಕ್ಷಸ ಸರ್ಕಾರ ರಚನೆಯಾದ ನಂತರ ಸರ್ಕಾರದ ಖಜಾನೆ ಭರ್ತಿಯಾಗಲಿದ್ದು, ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನೀಡಿರುವ ಭರವಸೆಗಳನ್ನು ಈಡೇರಿಸುವುದರೊಂದಿಗೆ 3 ಲಕ್ಷ ಕೋಟಿಗೂ ಅಧಿಕ ಸಾಲದಿಂದ ಪಂಜಾಬ್ ಮುಕ್ತವಾಗಲಿದೆ ಎಂದು ಭರವಸೆ ನೀಡಿದರು.

Recommended Video

      ಭಾರತೀಯ ಸೇನೆಯಿಂದ ಸ್ಪೆಷಲ್ ವಿಡಿಯೋ ಬಿಡುಗಡೆ | Oneindia Kannada

      "ಆಮ್ ಆದ್ಮಿ ಪಕ್ಷವು ಪಂಜಾಬ್‌ನ ಸಮಗ್ರ ಅಭಿವೃದ್ಧಿಗೆ ಸಮಗ್ರ ಯೋಜನೆಯನ್ನು ಹೊಂದಿದೆ, ಇದರ ಅಡಿಯಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಚಿಕಿತ್ಸೆಯನ್ನು ಒದಗಿಸುವುದು, ಕೃಷಿ ಅಭಿವೃದ್ಧಿ, ಕೈಗಾರಿಕೆಗಳ ಅಭಿವೃದ್ಧಿಯಂತಹ ಜನಪರ ನೀತಿಗಳನ್ನು ರೂಪಿಸಲಾಗಿದೆ. 3 ಲಕ್ಷ ಕೋಟಿ ರೂ.ಗೂ ಹೆಚ್ಚು ಸಾಲಕ್ಕೆ ಪರಿಹಾರವನ್ನು ಒದಗಿಸುತ್ತದೆ," ಎಂದರು.

      "ಆಮ್ ಆದ್ಮಿ ಪಕ್ಷದ ಸರ್ಕಾರವು ಪಂಜಾಬ್‌ನ ಪ್ರಗತಿ ಮತ್ತು ಏಳಿಗೆಗಾಗಿ ಕೇಂದ್ರ ಸರ್ಕಾರ ಮತ್ತು ಇತರ ಭಾರತೀಯ ಸಂಸ್ಥೆಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡುತ್ತದೆ. ಪಂಜಾಬ್‌ನ ಕಲ್ಯಾಣಕ್ಕಾಗಿ ಅಗತ್ಯವಿರುವ ಯಾವುದೇ ನೀತಿಗೆ ಕೇಂದ್ರ ಸರ್ಕಾರದಿಂದ ಸಹಕಾರವನ್ನು ಪಡೆಯಲಾಗುವುದು," ಎಂದು ಅವರು ಹೇಳಿದರು.

      ಫೆಬ್ರವರಿ 14ರಂದು ಮತದಾನ
      ಪಂಜಾಬ್ ಸೇರಿದಂತೆ ಗೋವಾ, ಮಣಿಪುರ್, ಉತ್ತರಾಖಂಡ ಹಾಗೂ ಉತ್ತರ ಪ್ರದೇಶ ರಾಜ್ಯಗಳಿಗೆ ಚುನಾವಣಾ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದ್ದು, ಪಂಜಾಬ್ ವಿಧಾನಸಭಾ ಚುನಾವಣೆಯು ಫೆಬ್ರವರಿ 14ರಂದು ಸೋಮವಾರ ನಡೆಯಲಿದೆ.

      ಪಂಜಾಬ್‌ನಲ್ಲಿ ಜನವರಿ 21ರಂದು ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಸಲು ಜನವರಿ 28 ಕೊನೆಯ ದಿನಾಂಕವಾಗಿರುತ್ತದೆ. ಜನವರಿ 29ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಜನವರಿ 31 ಕೊನೆಯ ದಿನಾಂಕವಾಗಿರುತ್ತದೆ. ಮಾರ್ಚ್ 10 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+