Get Updates
Get notified of breaking news, exclusive insights, and must-see stories!

ಬಲವಂತದ ಮತಾಂತರ: ಪಂಜಾಬ್ ಪಾದ್ರಿಯ ಕಾರಿಗೆ ಬೆಂಕಿ, ಚರ್ಚ್‌ನಲ್ಲಿನ ಪ್ರತಿಮೆ ಧ್ವಂಸ

ಚಂಡೀಗಢ, ಆಗಸ್ಟ್ 31: ಪಂಜಾಬ್‌ನ ತರ್ನ್ ತರನ್ ಜಿಲ್ಲೆಯ ಜನರ ಗುಂಪೊಂದು ನಿನ್ನೆ ರಾತ್ರಿ ಸ್ಥಳೀಯ ಚರ್ಚ್‌ಗೆ ನುಗ್ಗಿ ಯೇಸು ಮತ್ತು ಮೇರಿಯ ಪ್ರತಿಮೆಯನ್ನು ಧ್ವಂಸಗೊಳಿಸಿದೆ. ಪಾದ್ರಿಯ ಕಾರಿಗೂ ಬೆಂಕಿ ಹಚ್ಚಲಾಗಿದೆ. ಸಿಸಿಟಿವಿ ದೃಶ್ಯದಲ್ಲಿ ಈ ಘಟನೆ ಸೆರೆಯಾಗಿದೆ. ದೃಶ್ಯಗಳಲ್ಲಿ ಕಾರಿಗೆ ಬೆಂಕಿ ಹೊತ್ತಿ ಉರಿಯುತ್ತಿರುವ ಮತ್ತು ಚರ್ಚ್‌ನೊಳಗೆ ಮುರಿದ ಪ್ರತಿಮೆ ಕಂಡುಬಂದಿದೆ.

ಚರ್ಚ್‌ನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕೆಂಪು ಹೆಲ್ಮಟ್ ಧರಿಸಿದ ವ್ಯಕ್ತಿಯೊಬ್ಬರು ವಿಗ್ರಹವನ್ನು ಕೊಡಲಿಯಿಂದ ಪದೇ ಪದೇ ಹೊಡೆಯುವುದು ಕಂಡು ಬಂದಿದೆ. ಶಿರಚ್ಛೇದನ ಮಾಡುವುದು ಮತ್ತು ತಲೆಯನ್ನು ನೆಲದ ಮೇಲೆ ಉರುಳಿಸುವುದನ್ನು ತೋರಿಸುತ್ತದೆ. ದಾಳಿಕೋರರು ಪ್ರತಿಮೆಯ ಹಿಂದೆ ಅಡಗಿಕೊಳ್ಳುವಂತೆ ತೋರುತ್ತದೆ. ಬಹುಶಃ ತಮ್ಮನ್ನು ಪತ್ತೆಹಚ್ಚುವಿಕೆಯನ್ನು ತಪ್ಪಿಸಲು ಪ್ರಯತ್ನಿಸುತ್ತಾರೆಂದು ಭಾವಿಸಲಾಗಿದೆ. ಸಿಖ್ಖರ ಅತ್ಯುನ್ನತ ತಾತ್ಕಾಲಿಕ ಸ್ಥಾನದ ಮುಖ್ಯಸ್ಥ ಅಕಲ್ ತಖ್ತ್ ಜಥೇದಾರ್ ಅವರು ಕ್ರಿಶ್ಚಿಯನ್ ಮಿಷನರಿಗಳ "ಬಲವಂತದ ಮತಾಂತರಗಳ" ವಿರುದ್ಧ ಹೇಳಿಕೆಯನ್ನು ನೀಡಿದ ದಿನದಂದು ಈ ಘಟನೆ ನಡೆದಿದೆ.

"ಕ್ರೈಸ್ತ ಮಿಷನರಿಗಳು ಮೋಸದ ಆಚರಣೆಗಳ ಮೂಲಕ ಸಿಖ್ಖರನ್ನು ಬಲವಂತವಾಗಿ ಮತಾಂತರಿಸುತ್ತಿದ್ದಾರೆ. ಪಂಜಾಬ್‌ನ ಸಿಖ್ ಮತ್ತು ಹಿಂದೂಗಳನ್ನು ದಾರಿ ತಪ್ಪಿಸಿ ಮತಾಂತರಗೊಳಿಸಲಾಗುತ್ತಿದೆ. ಇದು ಸರ್ಕಾರದ ಮೂಗಿನ ನೇರಕ್ಕೆ ನಡೆಯುತ್ತಿದೆ. ಕಾನೂನಿನಲ್ಲಿ ಮೂಢನಂಬಿಕೆ ಆಚರಣೆಗಳ ಹೆಸರಿನಲ್ಲಿ ಬುಕ್ ಮಾಡಲು ಅವಕಾಶಗಳಿವೆ. ಮತಬ್ಯಾಂಕ್ ರಾಜಕೀಯದಿಂದಾಗಿ ಮತಾಂತರ ನಡೆಯುತ್ತಿದೆ. ಯಾವುದೇ ಸರ್ಕಾರವು ಅವರ (ಮಿಷನರಿಗಳು) ವಿರುದ್ಧ ಕ್ರಮ ಕೈಗೊಳ್ಳಲು ಸಿದ್ಧವಿಲ್ಲ ಎಂದು ಗಿಯಾನಿ ಹರ್‌ಪ್ರೀತ್ ಸಿಂಗ್ ನಿನ್ನೆ ಫೇಸ್‌ಬುಕ್ ಲೈವ್ ವಿಡಿಯೊ ಹೇಳಿಕೆಯಲ್ಲಿ ಹೇಳಿದ್ದರು. ಈ ಹೇಳಿಕೆಯ ಪ್ರತಿಫಲವಾಗಿ ದಾಳಿಯನ್ನು ಮಾಡಲಾಗಿದೆ ಎಂದು ಶಂಕಿಸಲಾಗಿದೆ.

Forced conversions: Punjab pastors car on fire, church statue vandalized

ರಾಜ್ಯದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ನಡೆಸುತ್ತಿರುವ ಮತಾಂತರ ಪ್ರಯತ್ನಗಳ ವಿರುದ್ಧ ಸಿಖ್ ಮುಖಂಡರು ಧ್ವನಿಯೆತ್ತಿದ್ದಾರೆ. ಪಂಜಾಬ್ ಗಡಿ ರಾಜ್ಯವಾಗಿದ್ದು, ಈ ಧಾರ್ಮಿಕ ಅಭಿಯಾನಗಳನ್ನು ನಡೆಸಲು ವಿದೇಶಿ ಧನಸಹಾಯವು ಇಲ್ಲಿಗೆ ಬರುತ್ತಿದೆ ಎಂದು ನಮಗೆ ತಿಳಿದು ಬಂದಿದೆ ಎಂದು ಗಿಯಾನಿ ಹರ್‌ಪ್ರೀತ್ ಸಿಂಗ್, "ತಕ್ಷಣ ಇದನ್ನು ನಿಯಂತ್ರಿಸಿ" ಎಂದು ಕೇಂದ್ರಕ್ಕೆ ಮನವಿ ಮಾಡಿದರು.

ತರ್ನ್ ತರನ್ ಜಿಲ್ಲೆಯ ಪಟ್ಟಿ ವಿಧಾನಸಭಾ ಕ್ಷೇತ್ರದ ಥಕರ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗೆ ಈ ವಿಷಯದ ವಿರುದ್ಧ ಪ್ರತಿಭಟನೆ ನಡೆದಿದ್ದವು. ಅಕಾಲ್ ತಖ್ತ್, ನಿಹಾಂಗ್‌ಗಳನ್ನು ಬೆಂಬಲಿಸುತ್ತಾ, "ನಕಲಿ ಪಾದ್ರಿಗಳು" ಸಿಖ್ಖರನ್ನು ದಾರಿ ತಪ್ಪಿಸುತ್ತಿದ್ದಾರೆ ಮತ್ತು ಅವರನ್ನು ಮತಾಂತರ ಮಾಡುತ್ತಿದ್ದಾರೆ ಎಂದು ಹೇಳಿದರು. "ಈ ನಕಲಿ ಪಾದ್ರಿಗಳ ವಿರುದ್ಧ ಬ್ಲ್ಯಾಕ್ ಮ್ಯಾಜಿಕ್ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು" ಎಂದು ಸಿಖ್ ಸಂಸ್ಥೆ ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+