ನಾನು ಸಮಸ್ಯೆಗೆ ಸ್ಪಂದಿಸಿ, ಪರಿಹರಿಸುವ ಕ್ಯಾಟಗರಿಯವನು: ಯಶ್
ಸಮಾಜದಲ್ಲಿ ಎರಡು ಕ್ಯಾಟಗರಿಗೆ ಸೇರಿದ ಜನರಿದ್ದಾರೆ. ಕೆಲವರು ಸಮಸ್ಯೆಯನ್ನು ಕಣ್ಣಾರೆ ಕಂಡು ಸುಮ್ಮನಾಗುತ್ತಾರೆ. ಮತ್ತೆ ಕೆಲವರು ಸಮಸ್ಯೆಯನ್ನು ಕಂಡು, ಅದಕ್ಕೆ ಸ್ಪಂದಿಸಿ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ. ನಾನು ಎರಡನೇ ಕ್ಯಾಟಗಿರಿ: ಯಶ್
ಹನೂರು, ಏಪ್ರಿಲ್ 18: ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಹನೂರು ತಾಲೂಕಿನ ವಡಕೆಹಳ್ಳ, ಕೂಡ್ಲೂರು, ಮತ್ತು ರಾಮಾಪುರ ಗೋಶಾಲೆಗಳಿಗೆ ಭೇಟಿ ನೀಡಿ, ಬರ ಪರಿಸ್ಥಿತಿ ಪರಿಶೀಲಿಸಿದರು. ಹನೂರು ಸಮೀಪದ ವಡಕೆಹಳ್ಳ ಗ್ರಾಮದಲ್ಲಿ ದೆಹಲಿಯ ಧ್ಯಾನ್ ಚಂದ್ ಫೌಂಡೇಷನ್ ಹಾಗೂ ರಾಮಚಂದ್ರಪುರ ಮಠದ ವತಿಯಿಂದ ಜಾನುವಾರುಗಳಿಗಾಗಿ ತೆರೆದಿರುವ ಗೋಶಾಲೆಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಟ ಯಶ್, ಸರಕಾರವು ಈ ಪರಿಸ್ಥಿತಿಯಲ್ಲಿ ಮೇವು ಸಿಗುತ್ತಿಲ್ಲ ಎಂದು ಹೇಳುವಂತಿಲ್ಲ. ಹೇಗಾದರೂ ಮಾಡಿ ಉತ್ತಮ ಮಳೆ ಆಗುವವರೆಗೆ ಜಾನುವಾರುಗಳಿಗೆ ಮೇವನ್ನು ಒದಗಿಸಬೇಕು. ಈಗಾಗಲೇ ಸರಕಾರದಿಂದ ತೆರೆಯಲಾಗಿರುವ ಗೋಶಾಲೆಯ ನಿರ್ವಹಣೆ ಸರಿಯಾಗಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ಈ ಬಗ್ಗೆ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದರು.[ಕೊಪ್ಪಳ ಜಿಲ್ಲೆಯ ಕೆರೆ ಅಭಿವೃದ್ಧಿಗೆ ಯಶ್ -ರಾಧಿಕಾರಿಂದ ಚಾಲನೆ]

ಈ ಭಾಗದಲ್ಲಿ ದೇಸಿ ತಳಿಯ ಹಸುಗಳು ಹೆಚ್ಚಾಗಿರುವುದರಿಂದ ಅವುಗಳನ್ನು ರಕ್ಷಿಸುವ ಕೆಲಸ ಆಗಬೇಕು. ಅರಣ್ಯದೊಳಗೆ ದೊಡ್ಡಿ ಹಾಕಲು ಅವಕಾಶ ನೀಡದ ಕಾರಣದಿಂದ ಈ ಸಮಸ್ಯೆ ಎದುರಾಗಿದ್ದು, ಮುಂದಿನ ದಿನಗಳಲ್ಲಿ ಜಾನುವಾರುಗಳ ಮೇವಿಗೆ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದರು.
ಸರಕಾರವು ಇನ್ನೂ ಹಲವೆಡೆ ಗೋಶಾಲೆ, ಮೇವು ಬ್ಯಾಂಕ್ ಗಳನ್ನು ತೆರೆಯಬೇಕು. ನಿಜವಾದ ಗೋಪಾಲಕರು ಈ ಭಾಗದಲ್ಲಿ ಸಿಗುತ್ತಾರೆ. ಜಾನುವಾರುಗಳನ್ನೇ ನಂಬಿ ಬದುಕುತ್ತಿರುವ ಇಲ್ಲಿನ ರೈತರ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.[ಯಶ್ ಹುಟ್ಟುಹಬ್ಬಕ್ಕೆ ವೆಬ್ ಲೋಕಕ್ಕೆ ಯಶೋಮಾರ್ಗ ಎಂಟ್ರಿ!]
ಧ್ಯಾನ್ ಚಂದ್ ಫೌಂಡೇಷನ್, ಶ್ರೀ ರಾಮಚಂದ್ರಪುರ ಮಠದ ವತಿಯಿಂದ ಮೇವನ್ನು ಒದಗಿಸಲಾಗುತ್ತಿದ್ದು, ಇವರ ಜೊತೆ ಯಶೋ ಮಾರ್ಗ ಕೈಜೋಡಿಸುತ್ತಿದೆ. ಇದಕ್ಕೆ ಸರಕಾರದ ಸಹಕಾರ ಬೇಕಾಗಿದೆ. ಸರಕಾರಕ್ಕೆ ಮೇವನ್ನು ಒದಗಿಸಲು ಆಗುವುದಿಲ್ಲ ಎಂದರೆ ನಮಗೆ ವಹಿಸಲಿ, ನಾವು ಮೇವನ್ನು ಒದಗಿಸುತ್ತೇವೆ ಎಂದು ಹೇಳಿದರು.
ಇತರೆ ನಟ- ನಟಿಯರ ಬಗ್ಗೆ ಬೆರಳು ತೋರಿಸಲ್ಲ. ನಾನು ರೈತ ಕುಟುಂಬದಿಂದ ಬಂದವನು. ಅದಕ್ಕಿಂತ ಹೆಚ್ಚಾಗಿ ಕನ್ನಡಿಗ. ಸಮಾಜದಲ್ಲಿ ಎರಡು ಕ್ಯಾಟಗರಿಗೆ ಸೇರಿದ ಜನರಿದ್ದಾರೆ. ಕೆಲವರು ಸಮಸ್ಯೆಯನ್ನು ಕಣ್ಣಾರೆ ಕಂಡು ಸುಮ್ಮನಾಗುತ್ತಾರೆ. ಮತ್ತೆ ಕೆಲವರು ಸಮಸ್ಯೆಯನ್ನು ಕಂಡು, ಅದಕ್ಕೆ ಸ್ಪಂದಿಸಿ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ. ನಾನು ಎರಡನೇ ಕ್ಯಾಟಗಿರಿಗೆ ಸೇರಿದವನು ಎಂದು ತಿಳಿಸಿದರು.[ತಡವಾಗಿ ಬಂದ ಯಶ್ ಕಾರಿನ ಗ್ಲಾಸ್ ಪೀಸ್ ಪೀಸ್]
ರಾಧಿಕಾ ಪಂಡಿತ್ ಮಾತನಾಡಿದರು. ಧ್ಯಾನ್ ಚಂದ್ ಫೌಂಡೇಷನ್ ಕೌಶಿಕ್, ಕವಿತಾ ಇನ್ನಿತರರು ಇದ್ದರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications