ವೀರಪ್ಪನ್ ನಿಂದ ನಲುಗಿದ್ದ 'ಉಪಕಾರ' ಕಾಲೋನಿಗೆ ಉಪಕಾರ ಮಾಡುವವರ್ಯಾರು?!
Recommended Video

ಚಾಮರಾಜನಗರ, ಅಕ್ಟೋಬರ್ 11: ಸ್ವಾತಂತ್ರ್ಯ ಲಭಿಸಿ ಏಳು ದಶಕವಾಗಿದೆ. ಎಲ್ಲ ಕ್ಷೇತ್ರದಲ್ಲೂ ದೇಶ ಅಭಿವೃದ್ಧಿಯತ್ತ ಸಾಗಿದೆ. ಆದರೆ ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸು ಮಾತ್ರ ನನಸಾಗಿಲ್ಲ ಎಂಬುದಕ್ಕೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ 'ಉಪಕಾರ ಕಾಲೋನಿ' ಸಾಕ್ಷಿ.
ಈ ಕಾಲೋನಿಯ ಹೆಸರು ಉಪಕಾರವಾಗಿದ್ದು, ಇಲ್ಲಿಗೊಮ್ಮೆ ತೆರಳಿದರೆ ಸರ್ಕಾರದ ಕಡೆಯಿಂದ ಯಾವುದೇ ಉಪಕಾರವಾಗಿಲ್ಲ ಎಂಬುದನ್ನು ಇಲ್ಲಿನ ಜನರು ಸಾಗಿಸುತ್ತಿರುವ ಶೋಚನೀಯ ಬದುಕು ಹೇಳುತ್ತದೆ. ಪಟ್ಟಣದ ರಂಗುರಂಗಿನ ಬದುಕಿನಿಂದ ದೂರವಾಗಿ ಕಾಡಂಚಿನಲ್ಲಿ ಬದುಕು ಕಟ್ಟಿಕೊಂಡಿರುವ ಇಲ್ಲಿನ ಜನರು ಸರಿಯಾದ ಸೂರು ಇಲ್ಲದೆ, ಹೊತ್ತಿನ ಕೂಳಿಗೂ ಪರದಾಡುತ್ತ ಜೀವನ ಸಾಗಿಸುವಂತಾಗಿದೆ.
ಕರ್ನಾಟಕ ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಸಂಪರ್ಕ ಹೊಂದಿರುವ ಚಾಮರಾಜನಗರ ಜಿಲ್ಲೆಯ ಕಾಡಂಚಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿರಿಜನರು ವಾಸಿಸುತ್ತಿದ್ದು, ಇವರು ಸಮಾಜದ ಮುಖ್ಯವಾಹಿನಿಗೆ ಬರಲು ಇನ್ನೂ ಕೂಡ ಸಾಧ್ಯವಾಗದೆ ಆದಿ ಮಾನವರಂತೆ ಸೌಲಭ್ಯವಂಚಿತ ಬದುಕು ಬದುಕುತ್ತಿದ್ದಾರೆ. ಸಾಧನೆಗಳ ದೊಡ್ಡ ಪಟ್ಟಿಯನ್ನೇ ನಮ್ಮ ಮುಂದೆ ನೀಡುವ ರಾಜಕಾರಣಿಗಳ ಆಶಸ್ವಾಸನೆಗಳು ಈಡೇರಿವೆಯಾ ಎಂಬುದು ಇಂತಹ ಕಾಲೋನಿಗಳಿಗೆ ಹೋಗಿ ನೋಡಿದರೆ ಗೊತ್ತಾಗಿಬಿಡುತ್ತದೆ!

ಮೂಲಸೌಕರ್ಯವೇ ಇಲ್ಲ!
ರಸ್ತೆ, ಕುಡಿಯುವ ನೀರು, ವಿದ್ಯುತ್, ಉತ್ತಮ ಮನೆಗಳಿಲ್ಲದೆ ಮುರುಕು ಗುಡಿಸಿಲಿನಲ್ಲಿ ಜೀವನ ಸಾಗಿಸುತ್ತಾ ಕಾಯಿಲೆ ಬಂದರೆ ಆಸ್ಪತ್ರೆಗೆ ಹೋಗಲೂ ಸಾಧ್ಯವಾಗದೆ ಮನೆಯಲ್ಲೇ ನರಳುತ್ತಾ ಸಾಯುವ ಇವರ ಬದುಕಿನತ್ತ ಯಾರೂ ಗಮನಹರಿಸದಿರುವುದು ಮಾತ್ರ ದೇಶದ ದುರ್ದೈವವಾಗಿದೆ.

ಆಸ್ಪತ್ರೆಗೆ ತೆರಳಲೂ ಹಣವಿಲ್ಲ!
ಇವತ್ತು ಉಪಕಾರ ಕಾಲೋನಿಯಲ್ಲಿ ಹಲವರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇವರ ಬಳಿ ಆಸ್ಪತ್ರೆಗೆ ತೆರಳಲು ಹಣವಿಲ್ಲ. ಹೀಗಾಗಿ ತಮಗೆ ತೋಚಿದ ಮನೆ ಔಷಧಿ ಮಾಡುತ್ತಾ ನರಳುತ್ತಿದ್ದಾರೆ. ಅದೃಷ್ಟ ವಶಾತ್ ಕಾಯಿಲೆ ವಾಸಿಯಾದರೆ ಬದುಕಿ ಉಳಿಯುತ್ತಾರೆ ಇಲ್ಲಾಂದ್ರೆ ಸಾವು ಗ್ಯಾರಂಟಿ!

ವಿರಪ್ಪನ್ ನಿಂದ ನಲುಗಿದ್ದ ಕಾಲೋನಿ
ಈ ಕಾಲೋನಿ ಹಿಂದೆ ವೀರಪ್ಪನ್ ಕಾರ್ಯಾಚರಣೆಯಿಂದ ನಲುಗಿತ್ತು. ಆಗ ಹೆಚ್ಚಿನ ಜನರು ಹೆದರಿ ಊರನ್ನೇ ಬಿಟ್ಟು ಹೋಗಿದ್ದರು. ಆಗಿನ ಸಂಕಷ್ಟದ ದಿನಗಳನ್ನು ಮೆಲುಕು ಹಾಕುವ ಹಿರಿಯರು ಸರ್ಕಾರ ತಮಗೇನು ಸೌಲಭ್ಯ ಕಲ್ಪಿಸಿಲ್ಲ ಎಂದು ದೂರುತ್ತಾರೆ. ಚುನಾವಣೆ ಬಂದಾಗ ಕಾಲೋನಿಗೆ ಬಂದು ಆಶ್ವಾಸನೆ ನೀಡಿ ಒಂದಷ್ಟು ಹಣ ನೀಡಿ ಹೋಗುವ ರಾಜಕಾರಣಿಗಳು ಮತ್ತೆ ಇತ್ತ ಮುಖ ಹಾಕದ ಕಾರಣದಿಂದಾಗಿ ಇಲ್ಲಿ ಅಭಿವೃದ್ಧಿ ಶೂನ್ಯವಾಗಿದೆ.

ಊರತುಂಬಾ ಅನಕ್ಷರಸ್ಥರು!
ಕೂಲಿ ಮಾಡಿಕೊಂಡು ಜೀವನ ಸಾಗಿಸುವ ಕಾಲೋನಿ ಜನಕ್ಕೆ ಮೂಲಭೂತ ಸೌಲಭ್ಯವೇ ಇಲ್ಲದಾಗಿದೆ. ಹೆಚ್ಚಿನವರು ಓದುಬರಹ ಇಲ್ಲದ ಅನಕ್ಷರಸ್ಥರಾಗಿರುವುದರಿಂದ ಹೋರಾಟ ಮಾಡಿ ಸೌಲಭ್ಯಗಳನ್ನು ಪಡೆಯುವ ಶಕ್ತಿಯೂ ಇವರಿಗಿಲ್ಲವಾಗಿದೆ. ಹೀಗಾಗಿ ಕಷ್ಟವೋ ಸುಖವೋ ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಬಡವರ ಸೇವೆಗೆ ತಮ್ಮ ಜೀವವನ್ನೇ ಮುಡಿಪಾಗಿಟ್ಟಿದ್ದೇವೆ ಎಂದು ಭಾಷಣ ಬಿಗಿಯುವ ಮಂದಿ ಇಂತಹ ಕಾಲೋನಿಗಳಿಗೊಮ್ಮೆ ಭೇಟಿ ನೀಡಿ ಅವರ ಸಂಕಷ್ಟವನ್ನು ಹತ್ತಿರದಿಂದ ನೋಡಿಬರಲಿ ಎಂಬುದು ನಮ್ಮ ಆಶಯ.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications