ಕೋಡಿ ಮಹದೇಶ್ವರನ ಭೇಟಿಗೆ ಸ್ವತಃ ಬಂದ ನಾಗಪ್ಪ!
ಚಾಮರಾಜನಗರ, ನವೆಂಬರ್ 23 : ನಾಗರಹಾವನ್ನು ಪೂಜ್ಯಭಾವನೆಯಿಂದ ನಾವು ಕಾಣುತ್ತೇವೆ. ಹೀಗಿರುವಾಗ ಅದು ದೇವಸ್ಥಾನಕ್ಕೆ ಬಂದರಂತೂ ಭಕ್ತರ ಖುಷಿಗೆ ಪಾರವೇ ಇರುವುದಿಲ್ಲ. ಇಂತಹ ಘಟನೆ ಗುಂಡ್ಲುಪೇಟೆ ತಾಲೂಕಿನ ಕೂತನೂರು ಗ್ರಾಮದ ಸಮೀಪದ ಕೋಡಿ ಮಹದೇಶ್ವರ ದೇವಸ್ಥಾನದಲ್ಲಿ ನಡೆದಿದೆ.
ದೇವಾಲಯದ ಮುಂಭಾಗ ಇರುವ ಬಸವನಮೂರ್ತಿ ಮೇಲೆ ಕಾಣಿಸಿಕೊಂಡ ನಾಗರ ಹಾವು ಕೆಲ ಕಾಲ ಅಲ್ಲಿಯೇ ಇದ್ದು ಭಕ್ತರಿಗೆ ಅಚ್ಚರಿ ಹುಟ್ಟಿಸಿತು. ಈ ದೃಶ್ಯಕಂಡ ಕೆಲವರು ಈಶ್ವರನ ಭೇಟಿಗೆ ಆತನ ಕೊರಳಲ್ಲಿರುವ ನಾಗಪ್ಪನೇ ಸ್ವತಃ ಬಂದನೆಂದು ಕೈಮುಗಿದು ಭಕ್ತಿಭಾವದಿಂದ ಪ್ರಾರ್ಥಿಸಿದರು. [ಭುಸ್ಸೆಂದ ನಾಗಪ್ಪ, ಮನೆಯೊಡತಿ ಲೀಲಾವತಿ ಉಸ್ಸಪ್ಪ!]

ಕೂತನೂರು ಗ್ರಾಮದ ಹೊರವಲಯದಲ್ಲಿರುವ ಕೋಡಿ ಮಹದೇಶ್ವರ ದೇವಸ್ಥಾನದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಕಡೆಯ ಕಾರ್ತಿಕ ಸೋಮವಾರದಂದು ಜಾತ್ರೆ ನಡೆಸಲಾಗುತ್ತದೆ. ಮುಂದಿನ ಸೋಮವಾರ ಜಾತ್ರೆ ನಡೆಯಲಿದ್ದು ಇದಕ್ಕಾಗಿ ದೇವಾಲಯವನ್ನು ಶುಚಿಗೊಳಿಸುವ, ಬಣ್ಣ ಬಳಿಯುವ ಕೆಲಸವನ್ನು ಮಾಡಲಾಗುತ್ತಿದೆ. [ನಾಗನನ್ನು ಪೂಜಿಸುವುದು ಮೂಢನಂಬಿಕೆಯಾಗಲು ಸಾಧ್ಯವೇ?]
ದೇವಾಲಯದ ಕೆಲಸಕ್ಕೆಂದು ಕಾರ್ಮಿಕರ ಜೊತೆಗೆ ತೆರಳಿದ ಗ್ರಾಮಸ್ಥರಿಗೆ ಅಚ್ಚರಿ ಕಾದಿತ್ತು. ಅದೇನೆಂದರೆ ದೇವಾಲಯದ ಎದುರು ಇರುವ ಬಸವನ ಕಲ್ಲಿನ ಮೂರ್ತಿಯನ್ನು ಸುತ್ತಿಕೊಂಡು ಭಾರೀ ಗಾತ್ರದ ನಾಗರಹಾವೊಂದು ಮಲಗಿತ್ತು. ಅಷ್ಟೇ ಅಲ್ಲದೆ ಗರ್ಭಗುಡಿಯ ಒಳಗೆ ನುಗ್ಗಲು ಪ್ರಯತ್ನಿಸುತ್ತಿತ್ತು. ಇದನ್ನು ಕಂಡು ಭೀತಿಗೊಳಗಾದ ಕಾರ್ಮಿಕರು ಕೂಡಲೇ ಗರ್ಭಗುಡಿಯ ಬಾಗಿಲು ಮುಚ್ಚಿದರು.
ವಿಷಯ ತಿಳಿದ ಜನರು ತಂಡೋಪತಂಡವಾಗಿ ಆಗಮಿಸಿ ತಮ್ಮ ಮೊಬೈಲುಗಳಿಂದ ಫೋಟೋ ತೆಗೆಯತೊಡಗಿದರು. ಕೆಲ ಸಮಯ ಹೆಡೆಬಿಚ್ಚಿ ಸುತ್ತ ನೋಡುತ್ತಾ ಮತ್ತೆ ಅಲ್ಲೆ ಮಲಗುತ್ತಾ ಕಾಲ ಕಳೆದ ಹಾವನ್ನು ಜನ ಧೈರ್ಯ ಮಾಡಿ ಕೋಲಿನಿಂದ ಸರಿಸಿದರು. ಬಳಿಕ ಅದು ಬಸವನ ವಿಗ್ರಹ ಬಿಟ್ಟು ಪೊದೆಯತ್ತ ತೆರಳಿತು. ನೆಮ್ಮದಿಯುಸಿರು ಬಿಟ್ಟ ಜನರಲ್ಲಿ ಬರೀ ನಾಗರಹಾವಿನದ್ದೇ ಮಾತು. [ಕಡಿತಕ್ಕೊಳಗಾದ ಯುವಕ ಪಾರು, ಹಾವು ಸಾವು!]
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications