ಮಲೆಮಹದೇಶ್ವರ ಕ್ಷೇತ್ರದ ಅಭಿವೃದ್ಧಿಗೆ ನಿರ್ಧಾರ: ಸಿಎಂ ಬಸವರಾಜ ಬೊಮ್ಮಾಯಿ
ಚಾಮರಾಜನಗರ, ಡಿಸೆಂಬರ್, 13: ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಸಮರ್ಪಕವಾಗಿ ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಚಾಮರಾಜನಗರದಲ್ಲಿ ತಿಳಿಸಿದರು.
ಮೂಲಸೌಕರ್ಯಗಳ
ಕೊರತೆ
ಆಗಬಾರದು
ಮಲೆ
ಮಹದೇಶ್ವರ
ಬೆಟ್ಟಕ್ಕೆ
ಭೇಟಿ
ನೀಡಿ
ಪೂಜೆ
ಸಲ್ಲಿಸಿ
ದರ್ಶನ
ಪಡೆದರು.
ಬಳಿಕ
ನಾಗಮಲೆ
ಭವನದಲ್ಲಿ
ಮಲೆಮಹದೇಶ್ವರಸ್ವಾಮಿ
ಕ್ಷೇತ್ರಾಭಿವೃದ್ದಿ
ಪ್ರಾಧಿಕಾರದಿಂದ
ಸಭೆ
ನಡೆಸಿ,
ಮಾತನಾಡಿದ
ಅವರು,
ಮಹದೇಶ್ವರ
ಬೆಟ್ಟಕ್ಕೆ
ಪ್ರತಿನಿತ್ಯವೂ
ಸಾವಿರಾರು
ಸಂಖ್ಯೆಯಲ್ಲಿ
ಭಕ್ತರು
ಬರುತ್ತಿದ್ದಾರೆ.
ಜಾತ್ರೆಗಳ
ಸಮಯದಲ್ಲಿ
ಲಕ್ಷಾಂತರ
ಭಕ್ತರು
ಕ್ಷೇತ್ರಕ್ಕೆ
ಆಗಮಿಸುತ್ತಲೇ
ಇರುತ್ತಾರೆ.
ಎಲ್ಲಾ
ಭಕ್ತರಿಗೆ
ಅನುಕೂಲ
ಆಗುವಂತೆ
ಮೂಲ
ಸೌಕರ್ಯವನ್ನು
ಸಮರ್ಪಕವಾಗಿ
ಕಲ್ಪಿಸಲು
ಸಭೆಯಲ್ಲಿ
ಸೂಚನೆ
ನೀಡಲಾಗಿದೆ
ಎಂದು
ತಿಳಿಸಿದರು.
ಮೌಢ್ಯತೆಗೆ ಸೆಡ್ಡು ಹೊಡೆದ ಬಸವರಾಜ ಬೊಮ್ಮಾಯಿ; ಚಾಮರಾಜನಗರಕ್ಕೆ ಭೇಟಿ ನೀಡಿ ಅಧಿಕಾರ ಕಳೆದುಕೊಂಡವರ ಪಟ್ಟಿ ಇಲ್ಲಿದೆ
ಕಾಮಗಾರಿಯನ್ನು
ತ್ವರಿತವಾಗಿ
ಪೂರ್ಣಗೊಳಿಸಿ
ಭಕ್ತಾಧಿಗಳ
ವಾಸ್ತವ್ಯಕ್ಕಾಗಿ
ಡಾಮಿಟರಿ
ನಿರ್ಮಾಣ
ಮಾಡಬೇಕು.
ಕ್ಷೇತ್ರದಲ್ಲಿ
ಒಳಚರಂಡಿ
ಕಾಮಗಾರಿ
ಆರಂಭವಾಗಿ
ಬಹಳ
ವರ್ಷಗಳಾಗಿವೆ.
ಇದು
ಅಗತ್ಯವಾಗಿ
ಆಗಬೇಕಾದ
ಕೆಲಸವಾಗಿದೆ.
ಈ
ಹಿನ್ನೆಲೆಯಲ್ಲಿ
ತ್ವರಿತವಾಗಿ
ಒಳಚರಂಡಿ
ಕಾಮಗಾರಿ
ಪೂರ್ಣಗೊಳಿಸಬೇಕು
ಎಂದು
ಸೂಚಿಸಿದರು.
ಕ್ಷೇತ್ರದಲ್ಲಿ
ನಿರ್ಮಿಸಲಾಗುತ್ತಿರುವ
ಮಹದೇಶ್ವರ
ಬೃಹತ್
ಪ್ರತಿಮೆಯನ್ನು
ಮುಂದಿನ
ತಿಂಗಳ
ವೇಳೆಗೆ
ಪೂರ್ಣಗೊಳಿಸಿ,
ಉದ್ಘಾಟನೆಗೆ
ಸಿದ್ದಪಡಿಸಬೇಕು.
ಇದಕ್ಕೆ
ಹೊಂದಿಕೊಳ್ಳುವಂತೆ
ರಸ್ತೆಯನ್ನು
ನಿರ್ಮಾಣ
ಮಾಡಬೇಕು
ಎಂದು
ನಿರ್ದೇಶನ
ನೀಡಿದರು.
ಭಕ್ತರ
ಆಶ್ರಯಕ್ಕೆ
ಸೂಕ್ತ
ವ್ಯವಸ್ಥೆ
ಕಲ್ಪಿಸಿ
ಕ್ಷೇತ್ರಕ್ಕೆ
ಬರುವ
ಭಕ್ತಾಧಿಗಳಿಗೆ
ಆಶ್ರಯ,
ನೆರಳಿನ
ವ್ಯವಸ್ಥೆ,
ಇನ್ನಿತರ
ಮೂಲ
ಸೌಕರ್ಯಗಳು
ಇರಬೇಕು.
ದೇವಾಲಯ,
ಕ್ಷೇತ್ರದ
ಅಭಿವೃದ್ಧಿ
ಸಂಬಂಧಿಸಿದಂತೆ
ತಜ್ಞರನ್ನು
ಕರೆಯಿಸಲಾಗುವುದು.
ಈ
ಮೂಲಕ
ಮತ್ತಷ್ಟು
ಯೋಜನಾ
ಬದ್ಧವಾಗಿ
ಅಭಿವೃದ್ದಿ
ಮಾಡುವ
ವಿಚಾರವಾಗಿ
ಚರ್ಚೆ
ನಡೆಸಲಾಗಿದೆ.
ಮಲೆ
ಮಹದೇಶ್ವರ
ಹುಲಿ
ಯೋಜನೆ
ಘೋಷಣೆ
ವಿಚಾರ
ವನ್ಯಜೀವಿ
ಮಂಡಳಿ
ಮುಂದಿದೆ.
ಇನ್ನು
ಈ
ಬಗ್ಗೆ
ಯಾವುದೇ
ತೀರ್ಮಾನ
ಕೈಗೊಂಡಿಲ್ಲ.
ಬೆಟ್ಟದ
ವ್ಯಾಪ್ತಿಯಲ್ಲಿರುವ
ಜನವಸತಿ
ಪ್ರದೇಶಗಳಿಗೆ
ಯಾವುದೇ
ತೊಂದರೆ
ಆಗಬಾರದೆ
ಎನ್ನುವ
ದೃಷ್ಟಿಯಿಂದ
ಹಲವು
ಸ್ಪಷ್ಟನೆ
ಕೇಳಿದ್ದೇನೆ
ಎಂದು
ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಸಚಿವ ಆರ್. ಅಶೋಕ, ಸಾಲೂರು ಮಠದ ಶ್ರೀಗಾಳದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕರಾದ ಆರ್. ನರೇಂದ್ರ, ಎನ್. ಮಹೇಶ್, ಸಿ.ಎಸ್. ನಿರಂಜನ್ ಕುಮಾರ್, ಹಿರಿಯ ಅಧಿಕಾರಿಗಳಾದ ಜಯರಾಂ, ಪ್ರಾದೇಶಿಕ ಆಯುಕ್ತರಾದ ಡಾ.ಜಿ.ಸಿ.ಪ್ರಕಾಶ್, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಮಲೆಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ ಶಿವಕುಮಾರ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.