ಯಳಂದೂರು; ಮಂಡಿ, ಕೀಲು ನೋವಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿದೆ ಮದ್ದು
ಚಾಮರಾಜನಗರ, ಅಕ್ಟೋಬರ್, 07: ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸಿದರೆ ಸೊಂಟ, ಬೆನ್ನು ನೋವು ಬರುವುದು ಸಾಮಾನ್ಯ ಆಗಿರುತ್ತದೆ. ಆದರೆ ಕೀಲು, ಮಂಡಿ ನೋವಿಗೆ ಯಳಂದೂರಿನ ರಾಷ್ಟೀಯ ಹೆದ್ದಾರಿ ಮಧ್ಯದಲ್ಲೇ ಚಿಕಿತ್ಸೆ ಇದೆ ಎಂದು ಇಲ್ಲಿನ ಜನರು ನಂಬಿದ್ದಾರೆ. ಮಂಡಿ, ಕೀಲು ನೋವು ಇದ್ದವರು ಇಲ್ಲಿಗೆ ಬಂದು " ನರಿಕಲ್ಲು" ಎಂಬ ಮಾರಮ್ಮಗೆ ನಮಸ್ಕರಿಸಿ ಹೋಗುತ್ತಿದ್ದಾರೆ. ಮಾರಮ್ಮನಿಗೆ ನಮಸ್ಕಾರ ಮಾಡಿದರೆ ಎಲ್ಲ ನೋವುಗಳು ಮಾಯ ಆಗುತ್ತವೆ ಎನ್ನುವುದು ಇಲ್ಲಿನ ಜನರ ನಂಬಿಕೆ ಆಗಿದೆ.
ಯಳಂದೂರಿನಿಂದ ಮಾಂಬಳ್ಳಿಗೆ ತೆರಳುವಾಗ ರಾಷ್ಟೀಯ ಹೆದ್ದಾರಿ ಮಧ್ಯದಲ್ಲೇ "ನರಿಕಲ್ಲು" ಎಂಬ ಮಾರಮ್ಮವೊಂದು ಹಲವು ದಶಕಗಳಿಂದ ಇದೆ. ಮಂಡಿ, ಕೀಲು ನೋವಿನಿಂದ ಬಳಲುವವರು ಇದಕ್ಕೆ ಒಂದು ನಮಸ್ಕಾರ ಹಾಕಿದರೇ ಸಾಕು, ಎಲ್ಲಾ ನೋವು ಮಾಯ ಆಗುತ್ತದೆಯಂತೆ. ಇದು ರಸ್ತೆಯ ನಡುವೆಯೇ ಇದ್ದು, ಭಾರಿ ವಾಹನಗಳ ಸಂಚಾರದ ನಡುವೆ ನಮಸ್ಕರಿಸಿ ಇಲ್ಲಿನ ಜನರು ಭಕ್ತಿ ಪರಾಕಷ್ಟೆ ಮೆರೆಯುತ್ತಾರೆ.

ಮಾರಮ್ಮನ ಬಗ್ಗೆ ಜನರ ಅಭಿಪ್ರಾಯ ಏನು?
50-60 ವರ್ಷಗಳಿಂದಲೂ ರಸ್ತೆ ಮದ್ಯೆ ಕಲ್ಲು ಒಂದಿದ್ದು, ಕೀಲು, ಮಂಡಿ ನೋವಿನಿಂದ ಬಳಲುವವರು ಇಲ್ಲಿಗೆ ಬಂದು ನಮಸ್ಕರಿಸಿ ಪೂಜೆ ಸಲ್ಲಿಸುತ್ತಾರೆ. ವಾಹನ ಸವಾರರು, ಕೂಲಿ ಕೆಲಸಕ್ಕೆ ತೆರಳುವ ಕಾರ್ಮಿಕರು ರಸ್ತೆಯಲ್ಲಿ ಹಾದು ಹೋಗುವಾಗ, ಇದಕ್ಕೆ ನಮಸ್ಕರಿಸಿ ಹೋಗುವುದು ನಿತ್ಯ ಕಾಣಬಹುದಾಗಿದೆ.
"ನಾವು ಮದುವೆಯಾಗಿ ಬಂದಾಗಿನಿಂದ ಈ ನರಿಕಲ್ಲು ನೋಡುತ್ತಿದ್ದೇವೆ. ಮಂಡಿ, ಕೈ-ಕಾಲು ಸೆಳೆತ ಇದ್ದರೇ ಇಲ್ಲಿಗೆ ಬಂದು ಪೂಜೆ ಮಾಡುತ್ತೇವೆ. ಪೂಜೆ ಮಾಡಿದ ಬಿಳಿಕ ಎಲ್ಲಾ ನೋವುಗಳು ಮಾಯ ಆಗುತ್ತದೆ." ಎಂದು ಸ್ಥಳೀಯರಾದ ಸುಶೀಲಾ, ಜಯಮ್ಮ ಹೇಳುತ್ತಿದ್ದಾರೆ.

ಬಾರಿ ಮಳೆಗೆ ತತ್ತರಿಸಿದ್ದ ಜನ
ಈ ಹಿಂದೆ ಭಾರಿ ಮಳೆ ಸುರಿದಿದ್ದು, ಯಳಂದೂರು ತಾಲೂಕಿನ ಅಂಬಳೆ, ಮದ್ದೂರು, ಅಗರ -ಮಾಂಬಳ್ಳಿ ಸೇರಿದಂತೆ ಹಲವು ಗ್ರಾಮಗಳ ಜನರು ಆತಂಕಗೊಂಡಿದ್ದರು. ಸುವರ್ಣಾವತಿ, ಚಿಕ್ಕಹೊಳೆ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಬಿಡಲಾಗಿತ್ತು, ಕೆರೆ-ಕಟ್ಟೆಗಳು ಉಕ್ಕಿ ಹರಿದ ಕಾರಣ ಜನರ ಕಳವಳವನ್ನು ಮತ್ತಷ್ಟು ಹೆಚ್ಚು ಮಾಡಿತ್ತು. ಅಂಬಳೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿತ್ತು. ಎಲ್ಲೆಡೆ ಮಳೆ ನೀರು ಆವರಿಸಿದ್ದ ಕಾರಣ ಜನರು ಮನೆಗಳನ್ನು ಖಾಲಿ ಮಾಡಿಕೊಂಡು ವಲಸೆ ಹೋಗಿದ್ದರು. ಅಂಬಳೆ, ಕಂದಹಳ್ಳಿ ಮತ್ತು ವೈ.ಕೆ.ಮೋಳೆ ಗ್ರಾಮಗಳು ಜಲಾವೃತವಾಗಿದ್ದವು. ಮತ್ತೊಂದೆಡೆ ಜನರು ಮನೆಯಲ್ಲಿದ್ದ ವಸ್ತುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದರು.
-
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?












Click it and Unblock the Notifications