ಚಾಮರಾಜನಗರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ: ಬಿಎಸ್ವೈ ಫೋಟೋ ಇಲ್ಲದಿದ್ದಕ್ಕೆ ಅಭಿಮಾನಿಗಳ ಆಕ್ರೋಶ
ಚಾಮರಾಜನಗರ, ಡಿಸೆಂಬರ್, 13: ಚಾಮರಾಜನಗರದಲ್ಲಿ ಸಾವಿರಾರು ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ (ಡಿಸೆಂಬರ್ 13) ಉದ್ಘಾಟನೆ, ಶಂಕುಸ್ಥಾಪನೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದು, ಈ ವೇಳೆ ಬಿ.ಎಸ್.ಯಡಿಯೂರಪ್ಪನವರ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.
ವೇದಿಕೆಯಲ್ಲಿ ಅಳವಡಿಸಿದ್ದ ಎಲ್ಸಿಡಿ ಪರದೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಫೋಟೋ ಇಲ್ಲದಿದ್ದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕ್ರೋಶಗೊಂಡ ಅಭಿಮಾನಿಗಳು ಯಡಿಯೂರಪ್ಪಗೆ ಜೈಕಾರ ಹಾಕಿ ಫೋಟೋ ಹಾಕುವಂತೆ ಒತ್ತಾಯಿಸಿದರು. ಕೆಲಹೊತ್ತು ಇದು ಗೊಂದಲಕ್ಕೂ ಕಾರಣವಾಯಿತು. ಬಳಿಕ ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನಕುಮಾರ್ ವೇದಿಕೆ ಏರಿ 'ಇದು ಸರ್ಕಾರದ ಕಾರ್ಯಕ್ರಮವಾದ್ದರಿಂದ ಯಡಿಯೂರಪ್ಪ ಅವರ ಫೋಟೋ ಹಾಕಲಾಗಲ್ಲ. ಅವರ ಬಗ್ಗೆ ನಮಗೆ ಅಪಾರ ಗೌರವ-ಪ್ರೀತಿ ಇದೆ. ಅಭಿಮಾನಿಗಳು ಅಸಮಾಧಾನಗೊಳ್ಳಬಾರದು ಎಂದು ಮನವಿ ಮಾಡಿಕೊಂಡರು. ಇದಾದ ನಂತರ ಬಿಎಸ್ವೈ ಅಭಿಮಾನಿಗಳು ಶಾಂತವಾಗಿದ್ದಾರೆ.
ಮೌಢ್ಯತೆಗೆ ಸೆಡ್ಡು ಹೊಡೆದ ಬಸವರಾಜ ಬೊಮ್ಮಾಯಿ; ಚಾಮರಾಜನಗರಕ್ಕೆ ಭೇಟಿ ನೀಡಿ ಅಧಿಕಾರ ಕಳೆದುಕೊಂಡವರ ಪಟ್ಟಿ ಇಲ್ಲಿದೆ
ವೇದಿಕೆಯಲ್ಲಿ ಗೊಂದಲದ ವಾತಾರಣ ನಿರ್ಮಾಣ
ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಸಿ.ಎಂ.ಬಸವರಾಜ ಬೊಮ್ಮಾಯಿ ಕಾರ್ಯಕ್ರಮದ ವೇದಿಕೆಯಲ್ಲಿ ಬಿಜೆಪಿಗರು ಪಾರಮ್ಯ ಮೆರೆದ ಘಟನೆ ನಡೆಯಿತು. ಸರ್ಕಾರಿ ಕಾರ್ಯಕ್ರಮವಾದ್ದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳಷ್ಟೇ ವೇದಿಕೆಯಲ್ಲಿರುವುದು ಶಿಷ್ಟಾಚಾರವಾಗಿದೆ. ಬಿಜೆಪಿ ಮುಖಂಡರಾದ ಮಾಜಿ ಶಾಸಕ ಪ್ರೊ.ಮಲ್ಲಿಕಾರ್ಜುನಪ್ಪ, ಅಮ್ಮನಪುರ ಮಲ್ಲೇಶ್ ಸಿಎಂ ಸಾಲಿನ ಕುರ್ಚಿಗಳಲ್ಲೇ ಕುಳಿತುಕೊಂಡರು. ಇನ್ನು ಹಿಂಬದಿ ಕುರ್ಚಿಗಳಲ್ಲಿ ಸಚಿವ ಸೋಮಣ್ಣ ಬೆಂಬಲಿಗರು ಕುಳಿತಿದ್ದರು. ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗುತ್ತಿದ್ದರೂ ಪೊಲೀಸರು, ಅಧಿಕಾರಿಗಳು ಜಾಣಮೌನ ವಹಿಸಿದ್ದರು. ಇದು ಸಾರ್ವಜನಿಕ ವಲಯದಲ್ಲೂ ಸಾಕಷ್ಟು ಚರ್ಚೆ ಆಗುತ್ತಿದೆ.
ಮೌಢ್ಯತೆ
ಬದಿಗೊತ್ತಿದ್ದ
ಹಾಲಿ
ಸಿಎಂ
ಚಾಮರಾಜನಗರಕ್ಕೆ
ಹೋದರೆ
ಅಧಿಕಾರ
ಹೋಗಲಿದೆ
ಎಂಬ
ಪದ್ಧತಿ
ಹಿಂದಿನಿಂದಲೂ
ಬಿಜೆಪಿಯಲ್ಲಿ
ಇತ್ತು.
ಆದರೆ
ಇದೀಗ
ಮೌಢ್ಯವನ್ನು
ಬದಿಗೊತ್ತಿ
ಎರಡನೇ
ಬಾರಿ
ಸಿಎಂ
ಬಸವರಾಜ
ಬೊಮ್ಮಾಯಿ
ನಗರಕ್ಕೆ
ಭೇಟಿ
ನೀಡಿದ್ದಾರೆ.
ಸಮಾಜವಾದಿ
ರಾಜಕಾರಣಿ
ಸಿದ್ದರಾಮಯ್ಯ
ಅವರಿಂದ
ಚಾಮರಾಜನಗರಕ್ಕೆ
ಅಂಟಿದ್ದ
ಮೌಢ್ಯ
ಅಳಿದರೂ
ಸಹ
ತದನಂತರ
ಬಂದ
ಬಿ.ಎಸ್.ಯಡಿಯೂರಪ್ಪ
ಕೂಡ
ಗಡಿಜಿಲ್ಲೆಗೆ
ಕಾಲಿಡಲೇ
ಇಲ್ಲ.
ಆದರೆ
ಬಸವರಾಜ
ಬೊಮ್ಮಾಯಿ
ಇದೀಗ
2ನೇ
ಬಾರಿಗೆ
ಗಡಿಜಿಲ್ಲೆಗೆ
ಆಗಮಿಸುತ್ತಿದ್ದು,
ನೂರಾರು
ಕೋಟಿ
ವೆಚ್ಚದ
ಯೋಜನೆಗಳ
ಉದ್ಘಾಟನೆ,
ಶಂಕುಸ್ಥಾಪನೆ
ನೆರವೇರಿಸಲಿದ್ದಾರೆ.
ಅಂದು
ಮೌಢ್ಯ
ಪ್ರಾರಂಭವಾಗುವ
ಹೊತ್ತಿನಲ್ಲಿ
ತಂದೆ
ಭೇಟಿ
ಕೊಟ್ಟಿದ್ದರೆ,
ಮೌಢ್ಯ
ಮಾಯವಾಗಿರುವ
ಈ
ಕಾಲದಲ್ಲಿ
ಮಗ
ಸಿಎಂ
ಆಗಿ
ಚಾಮರಾಜನಗರ
ಜಿಲ್ಲಾ
ಕೇಂದ್ರಕ್ಕೆ
ಭೇಟಿ
ನೀಡಿದ್ದಾರೆ.
1988ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಆರ್. ಬೊಮ್ಮಾಯಿ ಚಾಮರಾಜನಗರಕ್ಕೆ ಭೇಟಿ ಕೊಟ್ಟು ತಾಲೂಕು ಕಚೇರಿ ಸಂಕೀರ್ಣ ಮತ್ತು ತಾಲೂಕು ಆಸ್ಪತ್ರೆಉನ್ನು ಉದ್ಘಾಟಿಸಿದ್ದರು. ಅದರಂತೆಯೇ ಇದೀಗ ಎಸ್.ಆರ್. ಬೊಮ್ಮಾಯಿ ಅವರ ಪುತ್ರ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ.