ಬಂಡೀಪುರದಿಂದ ರಾಂಪುರಕ್ಕೆ ಸಾಕಾನೆಗಳನ್ನು ಕಳುಹಿಸಿದ್ಯಾಕೆ?
ಗುಂಡ್ಲುಪೇಟೆ ಫೆಬ್ರವರಿ 12: ಬಂಡೀಪುರದ ಆನೆ ಶಿಬಿರದಲ್ಲಿರುವ ಹೆಣ್ಣಾನೆಗಳು ಮರಿಹಾಕಿದ್ದು, ಈಗಾಗಲೇ ಮರಿಗಳು ದಷ್ಠಪುಷ್ಠವಾಗಿ ಬೆಳೆದು ತಮ್ಮದೇ ತುಂಟಾಟದಿಂದ ಎಲ್ಲರ ಗಮನಸೆಳೆಯುತ್ತಿವೆ.
ತಾಯಿಯ ಮಗ್ಗುಲಲ್ಲೇ ಇರುವ ಈ ಮರಿಯಾನೆಗಳು ಹಾಲುಕುಡಿಯುತ್ತಾ, ಮಾವುತರು ನೀಡುವ ಆಹಾರವನ್ನು ಸೇವಿಸುತ್ತಾ ಎಲ್ಲೆಂದರಲ್ಲಿ ಅಡ್ಡಾಡುತ್ತಾ ಖುಷಿಯಾಗಿವೆ. ಆದರೆ ಈ ಮರಿಯಾನೆಗಳು ಇತರೆ ಆಹಾರವನ್ನು ಸೇವಿಸಲು ಕಲಿತಿರುವುದರಿಂದಾಗಿ ಇನ್ನು ಮುಂದೆ ತಾಯಿಯ ಹಾಲಿನ ಅಗತ್ಯವಿಲ್ಲ. ಆದರೆ ತಾಯಿಯ ಹಾಲನ್ನು ಕುಡಿಯುವುದನ್ನು ಬಿಡಿಸಬೇಕಾದರೆ ಮರಿಗಳನ್ನು ತಾಯಿಯಿಂದ ಬೇರ್ಪಡಿಸುವುದು ಅನಿವಾರ್ಯವಾಗಲಿದೆ.
ಮರಿಯಾನೆಗಳು ತಾಯಿಯ ಹಾಲು ಕುಡಿಯುವುದನ್ನು ಮರೆಸುವ ಸಲುವಾಗಿ ಬಂಡೀಪುರ ಆನೆಶಿಬಿರದಲ್ಲಿದ್ದ ಎರಡು ಮರಿಯಾನೆಗಳ ತಾಯಿ ಸೇರಿದಂತೆ ಐದು ಸಾಕಾನೆಗಳನ್ನು ರಾಂಪುರ ಸಾಕಾನೆ ಶಿಬಿರಕ್ಕೆ ಕರೆದೊಯ್ಯಲಾಗಿದೆ. ರಾಂಪುರ ಆನೆ ಶಿಬಿರದಲ್ಲಿ ಮರಿಯಾನೆಗಳನ್ನು ತಾಯಿ ಆನೆಯಿಂದ ಬೇರ್ಪಡಿಸಿ ಹಾಲು ಕುಡಿಯುವುದನ್ನು ಮರೆಯಿಸಲಾಗುತ್ತದೆ.

ಆ ನಂತರ ಮರಿಯಾನೆಗಳಿಗೆ ಹಸಿರು ಮೇವು ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ. ಸುಮಾರು ಒಂದು ವಾರಗಳ ಕಾಲ ತಾಯಿಯಾನೆಗಳು ರಾಂಪುರ ಆನೆ ಶಿಬಿರದಲ್ಲಿದ್ದು, ಆ ನಂತರ ಮತ್ತೆ ಬಂಡೀಪುರಕ್ಕೆ ಕರೆ ತರಲಾಗುತ್ತದೆ ಎಂದು ಹೇಳಲಾಗಿದೆ.

ಅರಣ್ಯ ಮೂಲದ ಪ್ರಕಾರ ತಾಯಿ ಆನೆಗಳು ರಾಂಪುರ ಶಿಬಿರದಿಂದ ಬಂಡೀಪುರ ಆನೆ ಶಿಬಿರಕ್ಕೆ ಹಿಂತಿರುಗಿದ ಬಳಿಕ ಕೆಲ ದಿನಗಳ ಕಾಲ ಅವುಗಳಿಗೆ ತರಬೇತಿ ನೀಡಿ ಆನೆ ಸಫಾರಿಗೆ ಬಳಸಿಕೊಳ್ಳಲಾಗುತ್ತದೆಯಂತೆ. ಎಲ್ಲವೂ ಅಂದುಕೊಂಡಂತೆ ಆದರೆ ಬಂಡೀಪುರಕ್ಕೆ ತೆರಳುವ ಪ್ರವಾಸಿಗರಿಗೆ ಆನೆ ಮೇಲೆ ಸವಾರಿ ಮಾಡುವ ಅವಕಾಶ ದೊರೆಯಲಿದೆ. ಈಗಾಗಲೇ ಹಲವೆಡೆ ಆನೆಸಫಾರಿ ನಡೆಸಲಾಗುತ್ತಿದ್ದು, ಅದರಿಂದ ಆದಾಯವೂ ಬರುತ್ತಿದೆ.

ಬಂಡೀಪುರದಲ್ಲಿ ಪ್ರಾಣಿಗಳ ವೀಕ್ಷಣೆ ಮಾಡಲು ವಾಹನಗಳಲ್ಲಿ ಸಫಾರಿ ವ್ಯವಸ್ಥೆ ಇದೆಯಾದರೂ ಆನೆ ಮೇಲೆ ಸವಾರಿ ಮಾಡಲು ಅವಕಾಶ ಇದುವರೆಗೆ ಇರಲಿಲ್ಲ. ಇದೀಗ ಆ ಸೌಲಭ್ಯ ಮಾಡಿಕೊಟ್ಟಿದ್ದೇ ಆದರೆ ಪ್ರವಾಸಿಗರನ್ನು ಇನ್ನು ಹೆಚ್ಚು ಸೆಳೆಯಲು ಸಾಧ್ಯವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications