ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುಂಡ್ಲುಪೇಟೆ: ಕೃಷಿ ಹೊಂಡದಲ್ಲಿ ಮುಳುಗಿ ಯುವಕ ಸಾವು

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಗುಂಡ್ಲುಪೇಟೆ, ಸೆಪ್ಟೆಂಬರ್ 04 : ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ಮುಳುಗಿ ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಮಲ್ಲಯ್ಯನಪುರ ಗ್ರಾಮದ ನಿವಾಸಿ ದಿವಂಗತ ದೊಡ್ಡಮಾದೇಗೌಡ ಎಂಬುವರ ಪುತ್ರ ಸುರೇಶ್(21) ಎಂಬಾತನೇ ಈಜಾಡಲು ಹೋಗಿ ಮೃತಪಟ್ಟ ದುರ್ದೈವಿ.

A 21-year boy drowned in krushi honda at Gundlupet taluk

ಮಲ್ಲಯ್ಯನಪುರ ಗ್ರಾಮದ ನಿವಾಸಿ ರಮೇಶ್ ಎಂಬುವರ ಜಮೀನಿನಲ್ಲಿರುವ ಕೃಷಿ ಹೊಂಡದಲ್ಲಿ ಸುರೇಶ್ ಈಜಾಡುವ ವೇಳೆ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದಾನೆ.

ಈ ವೇಳೆ ಅಲ್ಲಿ ಯಾರೂ ಇಲ್ಲದ ಕಾರಣದಿಂದ ಈ ವಿಚಾರ ಯಾರಿಗೂ ಗೊತ್ತಾಗಲಿಲ್ಲ. ಆದರೆ, ಈಜಲೆಂದು ಸುರೇಶ್ ಹೋಗಿದ್ದನ್ನು ನೋಡಿದ ಕೆಲವರು ಬಹಳ ಹೊತ್ತಾದರೂ ಬಾರದೆ ಇರುವುದರಿಂದ ಸಂಶಯಗೊಂಡು ಕೃಷಿ ಹೊಂಡದತ್ತ ಹೋಗಿ ನೋಡಿದಾಗ ಅಲ್ಲಿ ಸುರೇಶ್‍ನ ಶವ ತೇಲುವುದು ಕಂಡು ಬಂದಿದೆ.

English summary
A 21-year boy (Suresh) drowned in krushi honda in Mallayyanapur village, Gundlupet taluk on Sep 04.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X