'ಅನಂದ' ಕಳೆದುಕೊಂಡ ವಿಪ್ರೋ ಸಂಸ್ಥೆ

ಎನ್ ಆರ್ ನಾರಾಯಣಮೂರ್ತಿ ಅವರ ಪುನರ್ ಆಗಮನದ ನಂತರ ಇನ್ಫೋಸಿಸ್ ನಲ್ಲಿ ಸಾಕಷ್ಟು ಬದಲಾವಣೆ ಕಂಡು ಬಂದಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೇ ರೀತಿ ವಿಪ್ರೋದಲ್ಲಿ ಬದಲಾವಣೆ ಗಾಳಿ ಬೀಸಿದೆ.
ವಿಪ್ರೋದಲ್ಲಿ 2011ರಲ್ಲಿ ಬದಲಾವಣೆಯ ಸುಳಿವು ಸಿಕ್ಕಿತ್ತು. ಸಿಇಒ ಟಿಕೆ ಕುರಿಯನ್ ಪ್ರವೇಶದ ನಂತರ ಈಗ ಹಿರಿಯ ಉಪಾಧ್ಯಕ್ಷ, ಜಾಗತಿಕ ಮೂಲ ಸೌಕರ್ಯ ಸೇವೆ ಹಾಗೂ ವಿಪ್ರೋ ಇನ್ಫೊಟೆಕ್ ನ ಮುಖ್ಯಸ್ಥರಾಗಿದ್ದ ಅನಂದ್ ಶಂಕರನ್ ಅವರು ವಿಪ್ರೋ ತೊರೆದಿದ್ದಾರೆ. ಆನಂದ್ ಶಂಕರನ್ ಅವರ ಸ್ಥಾನಕ್ಕೆ ಸೌಮಿತ್ರೋ ಘೋಷ್ ಅವರನ್ನು ಕೂರಿಸಲಾಗಿದೆ ಎಂದು ವಿಪ್ರೋ ಪ್ರಕಟಿಸಿದೆ.
ಬೆಂಗಳೂರಿನ ಐಟಿ ವಿಭಾಗದ ಕೇಂದ್ರ ಕಚೇರಿ ಹೊಂದಿರುವ ವಿಪ್ರೋ ಸಂಸ್ಥೆ ತನ್ನ ಮುಂದಿನ ಬದಲಾವಣೆಯಲ್ಲಿ ಹಿರಿಯ ಉಪಾಧ್ಯಕ್ಷ ಶಾಜಿ ಫರೂಕ್ ಅವರನ್ನು BFSI ವ್ಯವಹಾರಿಕ ಘಟಕದ ಜಾಗತಿಕ ಮುಖ್ಯಸ್ಥರನ್ನಾಗಿ ನೇಮಕಮಾಡಿದೆ. ಜಾಗತಿಕ ಮೂಲ ಸೌಕರ್ಯ ಸೇವೆ(GIS) ಹಾಗೂ ಹಿರಿಯ ಉಪಾಧ್ಯಕ್ಷರಾಗಿ ಜಿ.ಕೆ ಪ್ರಸನ್ನ ಅವರಿಗೆ ಬಡ್ತಿ ಸಿಕ್ಕಿದೆ. ಇದರ ಜತೆಗೆ ಹಾಲಿ ಪ್ರಾಡೆಕ್ಟ್ ಇಂಜಿನಿಯರಿಂಗ್ ಸಲ್ಯೂಷನ್ಸ್ (PES) ಹಾಗೂ SVP ಜಾಗತಿಕ ಮುಖ್ಯಸ್ಥ ಸ್ಥಾನವೂ ಪ್ರಸನ್ನ ಅವರ ಕೈಲಿದೆ.
ಜನವರಿ 1, 2014ರಿಂದ ಶಾಜಿ, ಸೌಮಿತ್ರೊ, ಪ್ರಸನ್ನ ಹಾಗೂ ಜಲೀಲ್ ಅವರ ಹೊಸ ಅಧಿಕಾರ ಅವಧಿ ಆರಂಭವಾಗಲಿದ್ದು ಎಲ್ಲರೂ ಸಿಇಒ ಹಾಗೂ ಕಾರ್ಯಕಾರಿ ನಿರ್ದೇಶಕ ಟಿಕೆ ಕುರಿಯನ್ ಅವರಿಗೆ ರಿಪೋರ್ಟ್ ಮಾಡಿಕೊಳ್ಳಲಿದ್ದಾರೆ.
2011ರಲ್ಲಿ GIS ವಿಭಾಗ ಮುಖ್ಯಸ್ಥರಾಗಿ ವಿಪ್ರೋದಲ್ಲಿ ಕಾಣಿಸಿಕೊಂಡ ಶಂಕರ್ ಅವರು ವಿಪ್ರೋ ತೊರೆದ ಮೇಲೆ ಯಾವ ಕಂಪನಿ ಸೇರುತ್ತಿದ್ದಾರೆ ಎಂಬುದರ ಬಗ್ಗೆ ಸುಳಿವು ಸಿಕ್ಕಿಲ್ಲ. GIS ವಿಭಾಗ ವಿಪ್ರೋ ಸಂಸ್ಥೆಯ ಶೆ 33ರಷ್ಟು ಆದಾಯಕ್ಕೆ ಕಾರಣವಾಗಿದೆ.
ಆನಂದ್ ಶಂಕರನ್ ಕಾಲದ ಬೆಳವಣಿಗೆಗಳು ಇಂತಿದೆ: ವಿಪ್ರೋ ಅನ್ಫೋಟೆಕ್ ಸ್ಪೆನ್ಸರ್ಸ್ ರಿಟೇಲ್ ಲಿ. ಕಂಪನಿಗೆ ಬಹುಕೋಟಿ ಮೌಲ್ಯದ ಹೊರಗುತ್ತಿಗೆ ಸೇವೆ ಒದಗಿಸುವ ಒಪ್ಪಂದ ಸಹಿ ಹಾಕಿತ್ತ್ತು. ರಿಟೇಲ್ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಭಾರೀ ಅವಕಾಶಗಳಿವೆ ಎಂದು ಆನಂದ್ ಹೇಳಿದ್ದರು.
ಪೊಲೀಸ್ ತಂತ್ರಾಂಶ: ಪೊಲೀಸ್ ಐಟಿ ತಂತ್ರಾಂಶವನ್ನು ವಿಪ್ರೋ ಸಂಸ್ಥೆಯವರು ಅಭಿವೃದ್ಧಿಪಡಿಸಿದ್ದರು. ಪೊಲೀಸ್ ಇಲಾಖೆಯ ಎಲ್ಲಾ ಕಾರ್ಯಚಟುವಟಿಕೆಗಳನ್ನು ಗಣಕೀಕರಣ ಗೊಳಿಸುವ ಸಾಮರ್ಥ್ಯ ಹೊಂದಿದ್ದಿ ಎಲ್ಲಾ ಪೊಲೀಸ್ ಇಲಾಖೆಯ ಪ್ರತಿಯೊಂದು ಘಟಕವನ್ನು ಜಾಲಕ್ಕೆ ಸೇರಿಸಿ ಸುಲಭವಾಗಿ ನಿಯಂತ್ರಣ ಸಾಧಿಸಬಹುದಾಗಿದೆ.
ಇತ್ತೀಚೆಗೆ MIAL ನಿಲ್ದಾಣದಲ್ಲಿ ಐಟಿ ಸೇವೆಯನ್ನು ಸಮಗ್ರವಾಗಿ ಒದಗಿಸುವ ಹೊಣೆ ವಿಪ್ರೋ ಹೆಗಲೇರಿತ್ತು. ಐಟಿ ಉದ್ಯಮಕ್ಕೆ ಇದೊಂದು ಗಣನೀಯ ಅವಕಾಶವಾಗಿ ಪರಿಣಮಿಸಿದೆ. ಜತೆಗೆ ಸವಾಲಿನದ್ದೂ ಆಗಿದೆ. ವಿಶ್ವ ಮಟ್ಟದಲ್ಲಿಯೂ ಇಂತಹ ಸೇವೆಗಳಿಗೆ ವಿಫುಲ ಅವಕಾಶಗಳಿವೆ. ವಿಪ್ರೋ ಈ ಸೇವೆಗೆ ಸಜ್ಜಾಗಿದೆ' ಎಂದು Wipro Infotech ಉಪಾಧ್ಯಕ್ಷ ಆನಂದ್ ಶಂಕರನ್ ಪ್ರತಿಕ್ರಿಯಿಸಿದ್ದರು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications