ಟಿಸಿಎಸ್ ಹಿರಿಯ ಉದ್ಯೋಗಿ ಈಗ ವಿಪ್ರೋ ಸಿಒಒ
ನವದೆಹಲಿ, ಮಾ.16: ದೇಶದ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನ ಹಿರಿಯ ಉದ್ಯೋಗಿ ಅಬಿದ್ ಅಲಿ ಅವರನ್ನು ವಿಪ್ರೋ ಸಂಸ್ಥೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅಬಿದ್ ಅಲಿ ನೀಮುಚ್ವಾಲ ಅವರು ಈಗ ವಿಪ್ರೋ ಸಿಒಒ ಆಗಿ ನೇಮಕಗೊಂಡಿದ್ದಾರೆ.
ಅಬಿಡ್ ಅಲಿ ನೀಮುಚ್ವಾಲ ಅವರು ಗ್ರೂಪ್ ನಿರ್ದೇಶಕ ಹಾಗೂ ಸಿಒಒ ಆಗಿ ಏಪ್ರಿಲ್ 1, 2015ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ದೇಶದ ಮೂರನೇ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ವಿಪ್ರೋ ಪ್ರಕಟಿಸಿದೆ.
ಸೆಪ್ಟೆಂಬರ್ 2009ರಿಂದ ವಿಪ್ರೋ ಸಂಸ್ಥೆಯಲ್ಲಿ ಸಿಒಒ ಸ್ಥಾನ ಖಾಲಿ ಇತ್ತು. ಎಎಲ್ ರಾವ್ ಅವರು ಜೂನ್ 2005 ರಿಂದ ಸೆಪ್ಟೆಂಬರ್ 2008ರ ತನಕ ವಿಪ್ರೋ ಸಿಒಒ ಆಗಿದ್ದರು. ['ಅನಂದ' ಕಳೆದುಕೊಂಡ ವಿಪ್ರೋ ಸಂಸ್ಥೆ ]

ವಿಪ್ರೋ ಸಂಸ್ಥೆ ಜಾಗತಿಕ ಮೂಲ ಸೌಕರ್ಯ ಸೇವೆ, ವ್ಯವಹಾರಿಕ ಅನ್ವಯ ಸೇವೆ, ಉನ್ನತ ತಂತ್ರಜ್ಞಾನ ಸಂಬಂಧಿತ ವಿಭಾಗಗಳ ಕಾರ್ಯ ನಿರ್ವಹಣೆ ಹೊಣೆ ಅಬಿದ್ ಅಲಿ ಅವರ ಮೇಲಿರುತ್ತದೆ. ಒಟ್ಟಾರೆ ಯುರೋಪ್, ಆಫ್ರಿಕಾ ಹಾಗೂ ಲ್ಯಾಟಿನ್ ಅಮೆರಿಕ ಕೇಂದ್ರಗಳ ಏಳಿಗೆ ಈಗ ಅಬಿದ್ ಕೈಲಿದೆ. ಟಿಸಿಎಸ್ ನಲ್ಲಿ ಸುಮಾರು 23 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಅಬಿದ್ ಅವರು ಟಿಸಿಎಸ್ ನ ಬಿಪಿಒ ವಿಭಾಗದ ಪ್ರಗತಿಗೆ ಕಾರಣರಾಗಿದ್ದರು.
ಅಬಿದ್ ಅಲಿ ಅವರ ನೇಮಕಾತಿಯಿಂದ ವಿಪ್ರೋ ಇನ್ನಷ್ಟು ಬಲಿಷ್ಠಗೊಳ್ಳಲಿದೆ. ಐಟಿ ಹಾಗೂ ಬಿಪಿಎಸ್ ವ್ಯವಹಾರ ಸರಳ ಹಾಗೂ ಸುಲಭಗೊಳ್ಳಲಿದೆ ಎಂದು ವಿಪ್ರೋ ಸಿಇಒ ಟಿಕೆ ಕುರಿಯನ್ ಪ್ರತಿಕ್ರಿಯಿಸಿದ್ದಾರೆ.
ಎನ್ ಐಟಿ ರಾಯ್ ಪುರ್ ನಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಷನ್ ಇಂಜಿನಿಯರ್ ಪದವಿ ಪಡೆದಿರುವ ನಿಮೂಚ್ವಾಲ ಅವರು ಐಐಟಿ ಮುಂಬೈನಿಂದ ಇಂಡಸ್ಟ್ರೀಯಲ್ ಮ್ಯಾನೇಜ್ಮೆಂಟ್ ನಲ್ಲಿ ಮಾಸ್ಟರ್ ಪಡೆದುಕೊಂಡಿದ್ದಾರೆ.
ಅಬಿದ್ ಅಲಿ ಅವರ ನೇಮಕಾತಿ ಸುದ್ದಿ ತಿಳಿಯುತ್ತಿದ್ದಂತೆ ಸೋಮವಾರ ಬಿಎಸ್ ಇ ನಲ್ಲಿ ಬೆಳಗ್ಗೆ ವಿಪ್ರೋ ಸಂಸ್ಥೆ ಷೇರುಗಳು ಶೇ 1.07ರಷ್ಟು ಏರಿಕೆ ಕಂಡಿತ್ತು. (ಪಿಟಿಐ)
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications