Warren Buffett: ಮನಿ ಮ್ಯಾಗ್ನೆಟ್ ವಾರೆನ್ ಬಫೆಟ್ ಇಲ್ಲದ ವ್ಯಾಪಾರ ಜಗತ್ತು: 2025ರ ಕೊನೆಯ ದಿನದ ಚರ್ಚೆ
ಟ್ರೇಡಿಂಗ್ ಮಾಂತ್ರಿಕ, ಸ್ಟಾಕ್ ಮಾರ್ಕೆಟ್ ದಿಗ್ಗಜ ಎಂದೇ ಖ್ಯಾತರಾದ ಅಮೇರಿಕನ್ ಉದ್ಯಮಿ ವಾರೆನ್ ಬಫೆಟ್ ಅವರು ಬೆರ್ಕ್ಶೈರ್ ಹ್ಯಾಥವೇ ಕಂಪನಿಯ ನೇತೃತ್ವದಿಂದ ಹಿಂದೆ ಸರಿಯುತ್ತಿರುವುದು ಜಾಗತಿಕ ವ್ಯಾಪಾರ ಜಗತ್ತಿನಲ್ಲಿ ಅಪರೂಪದ ಮತ್ತು ಮಹತ್ವದ ಕ್ಷಣ ಎಂದು ಕರೆಯಲಾಗುತ್ತಿದೆ. ಕಾರ್ಪೊರೇಟ್ ಇತಿಹಾಸದಲ್ಲಿ ಇವರ ನಿರ್ಗಮನಗಳಿಗೆ ಜಾಗತಿಕವಾಗಿ ಗಮನ ಸೆಳೆದಿದೆ.
ಈ ವಾರದ ನಂತರ, ಸುಮಾರು 900 ಬಿಲಿಯನ್ ಡಾಲರ್ ಮೌಲ್ಯದ ಬೆರ್ಕ್ಶೈರ್ ಹ್ಯಾಥವೇ ಸಂಸ್ಥೆಯ ಕಾರ್ಯಾಚರಣಾ ನಿಯಂತ್ರಣವನ್ನು ತಮ್ಮ ದೀರ್ಘಕಾಲದ ಉಪನಾಯಕ ಗ್ರೆಗ್ ಅಬಲ್ ಅವರಿಗೆ ವಾರೆನ್ ಬಫೆಟ್ ಹಸ್ತಾಂತರಿಸಲಿದ್ದಾರೆ. ಇದರಿಂದ, ಒಂದು ಸಂಕಷ್ಟದಲ್ಲಿದ್ದ ಬಟ್ಟೆ ಕಾರ್ಖಾನೆಯನ್ನು ಜಗತ್ತಿನ ಅತ್ಯಂತ ಶಕ್ತಿಶಾಲಿ ಕಾರ್ಪೊರೇಟ್ ಸಾಮ್ರಾಜ್ಯವನ್ನಾಗಿ ರೂಪಿಸಿದ 60 ವರ್ಷಕ್ಕೂ ಹೆಚ್ಚು ಕಾಲದ ಪಯಣಕ್ಕೆ ತೆರೆ ಬೀಳಲಿದೆ.

ಸಣ್ಣ ಹೂಡಿಕೆಯಿಂದ ಭವ್ಯ ಸಾಮ್ರಾಜ್ಯವರೆಗೆ
1962ರಲ್ಲಿ ಬಫೆಟ್ ಅವರು ಪ್ರತಿ ಷೇರಿಗೆ ಸುಮಾರು 7.60 ಡಾಲರ್ ದರದಲ್ಲಿ ಬೆರ್ಕ್ಶೈರ್ ಹ್ಯಾಥವೇ ಷೇರುಗಳನ್ನು ಖರೀದಿಸಲು ಆರಂಭಿಸಿದರು. ಆಗ ಆ ಬಟ್ಟೆ ಕಂಪನಿಗೆ ಭವಿಷ್ಯವಿದೆ ಎಂದು ಯಾರೂ ನಂಬಿರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ನಡೆದದ್ದು ಮಾತ್ರ ಇತಿಹಾಸವಾಯಿತು. ದೀರ್ಘಕಾಲದ ಮೌಲ್ಯಾಧಾರಿತ ಹೂಡಿಕೆ ಮತ್ತು ಶಿಸ್ತುಬದ್ಧ ನಿರ್ಧಾರಗಳ ಮೂಲಕ, ಬಫೆಟ್ ಬೆರ್ಕ್ಶೈರ್ ಅನ್ನು ವಿಮೆ, ರೈಲು ಮಾರ್ಗಗಳು, ಇಂಧನ, ಉತ್ಪಾದನೆ ಹಾಗೂ ಪ್ರಸಿದ್ಧ ಗ್ರಾಹಕ ಬ್ರಾಂಡ್ಗಳನ್ನು ಒಳಗೊಂಡ ವಿಶಾಲ ಸಮೂಹ ಸಂಸ್ಥೆಯನ್ನಾಗಿ ರೂಪಿಸಿದರು. ಇಂದು, ಬೆರ್ಕ್ಶೈರ್ನ ಒಂದು ಷೇರು ಬೆಲೆ 7.5 ಲಕ್ಷ ಡಾಲರ್ಗಿಂತ ಹೆಚ್ಚಾಗಿದೆ. ಇದು ಬಫೆಟ್ ಅವರ ಯಶಸ್ಸಿಗೆ ಹಿಡಿದ ಕನ್ನಡಿಯಾಗಿದೆ.
ಸಾಮಾನ್ಯ ವ್ಯಕ್ತಿಯಂತೆ ಬದುಕಿದ ಬಿಲಿಯನೇರ್
ಸುಮಾರು 150 ಬಿಲಿಯನ್ ಡಾಲರ್ ವೈಯಕ್ತಿಕ ಸಂಪತ್ತನ್ನು ಹೊಂದಿದ್ದರೂ, ಬಫೆಟ್ ಎಂದಿಗೂ ಶ್ರೀಮಂತರ ಆಡಂಬರದ ಜೀವನಶೈಲಿಯನ್ನು ಅಳವಡಿಸಿಕೊಂಡಿಲ್ಲ. 1958ರಲ್ಲಿ ಖರೀದಿಸಿದ ಒಮಾಹಾದ ಮನೆಯಲ್ಲೇ ಇಂದಿಗೂ ವಾಸವಿದ್ದಾರೆ. ಸರಳ ಆಹಾರವನ್ನು ಇಷ್ಟಪಡುತ್ತಾರೆ. ವ್ಯಾಪಾರ ಅಗತ್ಯವಿದ್ದಾಗ ಮಾತ್ರ ಖಾಸಗಿ ವಿಮಾನವನ್ನು ಬಳಸಲು ಒಪ್ಪಿಕೊಂಡರು. ಸಾಮಾನ್ಯ ಹೂಡಿಕೆದಾರರಿಗೆ ಈ ಸರಳತೆಯೇ ಅವರ ಮಾಯಾಜಾಲವಾಗಿತ್ತು. ಅತಿರೇಕವಿಲ್ಲದೆ, ಯಾವುದೇ ಶಾರ್ಟ್ಕಟ್ಗಳಿಲ್ಲದೆ ಸಂಪತ್ತು ಕಟ್ಟಬಹುದು ಎಂಬುದಕ್ಕೆ ಅವರು ಜೀವಂತ ಉದಾಹರಣೆಯಾದರು.
ಸಂಪತ್ತು ದಾನ ಮಾಡುವ ಪ್ರತಿಜ್ಞೆ
ಬಫೆಟ್ ಅವರು ಸಂಪತ್ತಿನ ಅರ್ಥವನ್ನೇ ಮರು ವ್ಯಾಖ್ಯಾನಿಸಿದರು. ಅವರು ಕಳೆದ ಎರಡು ದಶಕಗಳಲ್ಲಿ 60 ಬಿಲಿಯನ್ ಡಾಲರ್ಗಿಂತ ಹೆಚ್ಚು ಹಣವನ್ನು ದಾನ ಮಾಡಿದ್ದಾರೆ. ತಮ್ಮ ಸಂಪತ್ತಿನ ಬಹುಪಾಲನ್ನು ದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ವೈಯಕ್ತಿಕ ಅಗತ್ಯಗಳನ್ನು ಮೀರಿದ ಹಣವು ಇತರರ ಜೀವನವನ್ನು ಉತ್ತಮಗೊಳಿಸಲು ಬಳಕೆಯಾಗಬೇಕು ಎನ್ನುವುದು ಅವರ ನಂಬಿಕೆ.
ಬೆರ್ಕ್ಶೈರ್ ವಿಸ್ತಾರವಾದಂತೆ, ಮೊದಲಿನಂತಹ ವೇಗದ ಬೆಳವಣಿಗೆಯನ್ನು ಸಾಧಿಸುವುದು ಕಷ್ಟವಾಯಿತು. ನೂರಾರು ಬಿಲಿಯನ್ ಡಾಲರ್ ನಗದು ಸಂಗ್ರಹವಿದ್ದರೂ, ಲಾಭದಲ್ಲಿ ಮಹತ್ವದ ಬದಲಾವಣೆ ತರುವಷ್ಟು ದೊಡ್ಡ ಹೂಡಿಕೆ ಅವಕಾಶಗಳು ಸಿಗುವುದು ದೊಡ್ಡ ಸವಾಲಾಗಿತ್ತು. ಸ್ವತಃ ಬಫೆಟ್ ಕೂಡ ಇದನ್ನು ಒಪ್ಪಿಕೊಂಡು, ಸಂಸ್ಥೆಯ ಗಾತ್ರವೇ ಈಗ ಅದರ ದೊಡ್ಡ ಶತ್ರು ಎಂದು ಹೇಳುತ್ತಿದ್ದರು.
ನೇತೃತ್ವ ಹಸ್ತಾಂತರ
2018ರಿಂದ ವಿಮೆ ಹೊರಗಿನ ವ್ಯವಹಾರಗಳನ್ನು ನೋಡಿಕೊಂಡಿದ್ದ ಗ್ರೆಗ್ ಅಬಲ್, ಯಾವುದೇ ಸಂಕಷ್ಟವಿಲ್ಲದ ಸ್ಥಿರ ಪರಿಸ್ಥಿತಿಯಲ್ಲಿ ಈಗ ನೇತೃತ್ವ ವಹಿಸುತ್ತಿದ್ದಾರೆ. ಬಫೆಟ್ ಅವರು ಅಧ್ಯಕ್ಷರಾಗಿ ಮುಂದುವರಿದರೂ, ದಿನನಿತ್ಯದ ನಿರ್ವಹಣೆ ಈಗ ಅಬಲ್ ಅವರ ಹೊಣೆ. ಬಫೆಟ್ ಕಚೇರಿಗೆ ಬರುತ್ತಾ ಮಾರ್ಗದರ್ಶನ ನೀಡಲಿದ್ದರೂ, ಭವಿಷ್ಯದ ದಿಕ್ಕನ್ನು ನಿರ್ಧರಿಸುವ ಜವಾಬ್ದಾರಿ ಮುಂದಿನ ಪೀಳಿಗೆಯ ಕೈಯಲ್ಲಿದೆ.
ಇದು ಅಂತ್ಯವಲ್ಲ, ಒಂದು ಆದರ್ಶ
ವಾರೆನ್ ಬಫೆಟ್ ಅವರ ಈ ಹಿಂದೆ ಸರಿಯುವಿಕೆ ಕೇವಲ ಕಾರ್ಪೊರೇಟ್ ಬದಲಾವಣೆ ಅಲ್ಲ, ಅದು ಒಂದು ಸಾಂಸ್ಕೃತಿಕ ಕ್ಷಣ. ದಶಕಗಳ ಕಾಲ ಅವರು ಊಹಾಪೋಹಕ್ಕಿಂತ ದೀರ್ಘಕಾಲದ ಚಿಂತನೆ ಶ್ರೇಷ್ಠ, ಪ್ರಾಮಾಣಿಕತೆ ಮುಖ್ಯ, ಮತ್ತು ಸಾಮಾನ್ಯ ಜನರೂ ಮಾರುಕಟ್ಟೆಯಲ್ಲಿ ಯಶಸ್ವಿಯಾಗಬಹುದು ಎಂಬುದನ್ನು ತೋರಿಸಿದರು. ಅವರು ಹಿಂದೆ ಬಿಟ್ಟಿದ್ದು ಕೇವಲ ಒಂದು ಕಂಪನಿಯಲ್ಲ, ಜೀವನ ಮತ್ತು ಹೂಡಿಕೆಯ ಒಂದು ಪಾಠಪುಸ್ತಕ. ಸಹನೆ, ನಂಬಿಕೆ ಮತ್ತು ಕಾಲದ ಮೇಲೆ ಕಟ್ಟಿದ ಒಂದು ಆದರ್ಶ ಪಥ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications