Get Updates
Get notified of breaking news, exclusive insights, and must-see stories!

MGNREGA; ನರೇಗಾ ಹಂಚಿಕೆಯನ್ನು ಕಡಿತಗೊಳಿಸಿಲ್ಲ; ಹಣಕಾಸು ಕಾರ್ಯದರ್ಶಿ ಸ್ಪಷ್ಟನೆ

ನವದೆಹಲಿ, ಫೆಬ್ರವರಿ 3: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (MGNREGA) ಯೋಜನೆಗೆ ಕೇಂದ್ರ ಸರ್ಕಾರವು ಅನುದಾನ ಹಂಚಿಕೆಯನ್ನು ಕಡಿತಗೊಳಿಸಿಲ್ಲ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಬುಧವಾರ ಸ್ಪಷ್ಟನೆ ನೀಡಿದರು.

ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಟಿ.ವಿ. ಸೋಮನಾಥನ್, "ನಾವು 2021-22ರ ಕೇಂದ್ರ ಬಜೆಟ್ ಮತ್ತು 2022-23ರ ಕೇಂದ್ರ ಬಜೆಟ್‌ನಿಂದ MGNREGA ಯ ಬಜೆಟ್ ಹಂಚಿಕೆಗೆ ಬಜೆಟ್ ಅನ್ನು ಹೋಲಿಸಿದರೆ ನಾವು MGNREGA ಗೆ 73,000 ಕೋಟಿ ರೂ.ಗಳನ್ನೇ ಮೀಸಲಿಟ್ಟಿದ್ದೇವೆ. 2021-22ರ ಆರ್ಥಿಕ ವರ್ಷಕ್ಕೆ ಪರಿಷ್ಕೃತ ಪೂರಕ ಹಂಚಿಕೆಯಲ್ಲಿ ನಾವು ಸಾಂಕ್ರಾಮಿಕ ರೋಗ ಮತ್ತು ರಾಜ್ಯಗಳ ಬೇಡಿಕೆಯಿಂದಾಗಿ 98,000 ಕೋಟಿ ರೂ.ಗೆ ಏರಿಕೆ ಮಾಡಿದೆವು ಎಂದರು.

"2022-23ಕ್ಕೆ ಕೇಂದ್ರ ಬಜೆಟ್‌ನಲ್ಲಿ 73,000 ಕೋಟಿ ರೂ.ಗಳನ್ನು ನಿಗದಿಪಡಿಸಿದ್ದೇವೆ, ಏಕೆಂದರೆ ನಾವು ಏಪ್ರಿಲ್-ಮೇ 2021 ಅನ್ನು ನೋಡಿದಂತೆ ಈ ಬಾರಿ ಪರಿಸ್ಥಿತಿ ತುಂಬಾ ಕೆಟ್ಟದಾಗಿ ಕಾಣುತ್ತಿಲ್ಲ ಎಂದು ನಾವು ಭಾವಿಸುತ್ತೇವೆ. ಆದರೆ ಸಾಂಕ್ರಾಮಿಕ ರೋಗದಂತಹ ಪರಿಸ್ಥಿತಿ ಉದ್ಭವಿಸಿದರೆ ಮತ್ತು ಬೇಡಿಕೆಯಿದ್ದರೆ MGNREGA ಹಂಚಿಕೆಯನ್ನು ಹೆಚ್ಚಿಸಿ, ನಾವು ಪರಿಷ್ಕೃತ ಅಂದಾಜಿನಲ್ಲಿ ಹಂಚಿಕೆಯನ್ನು ಹೆಚ್ಚಿಸಬಹುದು ಎಂದು ಅವರು ಹೇಳಿದರು.

Union Budget 2022: MGNREGA Has Not Cut The Allocation; Financial Secretary Clarified

MGNREGA ಒಂದು ಬೇಡಿಕೆ-ಚಾಲಿತ ಯೋಜನೆಯಾಗಿದ್ದು, ದೇಶದ ಯಾವುದೇ ಗ್ರಾಮೀಣ ಕುಟುಂಬ ಬಯಸುವ 100 ದಿನಗಳ ಕೌಶಲರಹಿತ ಕೆಲಸವನ್ನು ಖಾತರಿಪಡಿಸುತ್ತದೆ ಎಂದು ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್ ತಿಳಿಸಿದರು.

2022-23ರ ಕೇಂದ್ರ ಬಜೆಟ್‌ನಲ್ಲಿ ಬಂಡವಾಳ ವೆಚ್ಚವನ್ನು ಪ್ರಸಕ್ತ ವರ್ಷದಲ್ಲಿ 5.54 ಲಕ್ಷ ಕೋಟಿ ರೂಪಾಯಿಗಳಿಂದ 2022-23ರಲ್ಲಿ 7.50 ಲಕ್ಷ ಕೋಟಿ ರೂಪಾಯಿಗಳಿಗೆ ಅಂದರೆ 2 ಲಕ್ಷ ಕೋಟಿ ರೂ. ಸುಮಾರು ಶೇ.35.4ರಷ್ಟು ತೀವ್ರವಾಗಿ ಹೆಚ್ಚಿಸಲಾಗಿದೆ ಎಂದು ಸೋಮನಾಥನ್ ಗಮನ ಸೆಳೆದರು.

ಈ 2 ಲಕ್ಷ ಕೋಟಿಯಿಂದ ಕೇಂದ್ರ ಸರ್ಕಾರವು ಪ್ರತಿ ಜಿಲ್ಲೆಗೆ ಸಾರ್ವಜನಿಕ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ರಾಜ್ಯಗಳಿಗೆ 1 ಲಕ್ಷ ಕೋಟಿ ರೂಪಾಯಿಗಳನ್ನು ನೀಡಲಿದೆ. ಈ ಬಜೆಟ್ ನಮ್ಮ ಆರ್ಥಿಕತೆಯನ್ನು ಆತ್ಮ ನಿರ್ಭರಗೊಳಿಸುತ್ತದೆ ಎಂದು ಅವರು ಹೇಳಿದರು.

2022-23ರ ಕೇಂದ್ರ ಬಜೆಟ್ ಬೆಳವಣಿಗೆ ಆಧಾರಿತ ಬಜೆಟ್ ಆಗಿದೆ ಎಂದು ಬಣ್ಣಿಸಿದ ಹಣಕಾಸು ಕಾರ್ಯದರ್ಶಿ, 2,000 ಕಿಮೀ ರೈಲು ಜಾಲವನ್ನು ಸ್ಥಳೀಯವಾಗಿ ವಿಶ್ವ ದರ್ಜೆಯ ಮಟ್ಟದ ತಂತ್ರಜ್ಞಾನ ಕವಚ ಅಡಿಯಲ್ಲಿ ಅಳವಡಿಸಲಾಗುವುದು ಎಂದು ಹೇಳಿದರು.

ಈ ತಂತ್ರಜ್ಞಾನ ಕವಚವನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಘರ್ಷಣೆ ನಿವಾರಕ ಸಾಧನವಾಗಿದ್ದು, ರೈಲ್ವೇಯ ಶೂನ್ಯ ಅಪಘಾತಗಳ ಗುರಿಯನ್ನು ಸಾಧಿಸಲು 400 ಹೊಸ ವಂದೇ ಭಾರತ್ ರೈಲುಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಭಾರತೀಯ ತಂತ್ರಜ್ಞಾನವು, ಭದ್ರತೆ ಮತ್ತು ವೇಗವನ್ನು ಒದಗಿಸುವ ಮೂಲಕ ತಯಾರಿಸಲಾಗುವುದು ಎಂದು ಸೋಮನಾಥನ್ ತಿಳಿಸಿದರು.

ನಾವು ಕೆಲವು ವಸ್ತುಗಳ ಮೇಲೆ ಆಮದು ಸುಂಕವನ್ನು ಪ್ರಸ್ತಾಪಿಸಿದ್ದೇವೆ, ಈ ಹಿಂದೆ ವಿನಾಯಿತಿ ನೀಡಿರುವುದು ನಮ್ಮ MSMEಗಳಿಗೆ ಸಹಾಯ ಮಾಡುತ್ತದೆ ಎಂದು ಸೋಮನಾಥನ್ ಅಭಿಪ್ರಾಯಪಟ್ಟರು.

"ನಾವು ಹೆಚ್ಚು ವ್ಯಾಪಾರವನ್ನು ಉತ್ಪಾದಿಸುತ್ತೇವೆ, ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುತ್ತೇವೆ. ನಾವು ರೈಲು ಜಾಲದಲ್ಲಿ ಖರ್ಚು ಮಾಡಿದರೆ ಇದು ತಯಾರಕರಿಗೆ ಮಾತ್ರವಲ್ಲದೆ ತಯಾರಕರಿಗೆ ಕಚ್ಚಾ ವಸ್ತುಗಳನ್ನು ಒದಗಿಸುವ MSMEಗಳಿಗೂ ಪ್ರಯೋಜನವನ್ನು ನೀಡುತ್ತದೆ ಎಂದು ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಹೇಳಿದರು.

ಅನುದಾನ ಕಡಿತ ಖಂಡಿಸಿದ್ದ ಕರ್ನಾಟಕ ಪ್ರಾಂತ ರೈತ ಸಂಘ
ನರೇಗಾ ಯೋಜನೆಯ ಅನುದಾನ ಕಡಿತ ಸಾಂಕ್ರಾಮಿಕ ಪಿಡುಗಿನ ಅವಧಿಯಲ್ಲಿ ಉದ್ಯೋಗದ ಅವಕಾಶಗಳು ತೀವ್ರವಾಗಿ ಕ್ಷೀಣಿಸಿರುವಾಗ ನರೇಗಾ ಯೋಜನೆಯ ಅನುದಾನವನ್ನು ಕಡಿತ ಮಾಡಲಾಗಿದೆ. 2021-22 ರ ಪರಿಷ್ಕೃತ ಅಂದಾಜು 98,000 ಕೋಟಿ ರೂ ಆಗಿದ್ದರೂ ಈ ಬಜೆಟ್ ಕೇವಲ 73000 ಕೋಟಿ ರೂ ಮಾತ್ರ ತೆಗೆದಿರಿಸಿದೆ.

ಇತ್ತೀಚಿನ ಒಂದು ಅಧ್ಯಯನದ ಪ್ರಕಾರ ಕುಟುಂಬಕ್ಕೆ ನೂರು ದಿನ ಉದ್ಯೋಗ ಒದಗಿಸಲು ಹಾಗೂ ಹಿಂದಿನ ಬಾಕಿ ಸುಮಾರು 21,000 ಕೋಟಿ ರೂ.ಗಳನ್ನು ಪಾವತಿಸಲು 2.64 ಲಕ್ಷ ಕೋಟಿ ರೂ ಬೇಕಾಗುತ್ತದೆ. ಸ್ಪಷ್ಟವಾಗಿ ಬಡತನದ ಕೃಷಿ ಕೂಲಿಕಾರರು ಬಿಜೆಪಿ ಸರ್ಕಾರದ ಅಧ್ಯತೆಯಲ್ಲಿ ಇಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘ(KPRS) ಟೀಕಿಸಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+