ಉದ್ಯೋಗಿಗಳ ಸಾಮೂಹಿಕ ರಾಜೀನಾಮೆಯಿಂದ ಎಲ್ಲಾ ಕಚೇರಿ ಮುಚ್ಚಿದ ಟ್ವಿಟ್ಟರ್
ನವದೆಹಲಿ, ನವೆಂಬರ್ 18: ಟ್ವಿಟ್ಟರ್ ಸಿಇಒ ಎಲಾನ್ ಮಸ್ಕ್ ಅವರು ಹಾರ್ಡ್ಕೋರ್ ಟ್ವಿಟ್ಟರ್ 2.0 ಎಂದು ವಜಾ ಪ್ರಕ್ರಿಯೆಗಳನ್ನು ಘೋಷಿಸಿದ್ದಾರೆ. ನಂತರ ನೂರಾರು ಟ್ವಿಟ್ಟರ್ ಉದ್ಯೋಗಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆ ಎಲ್ಲೆಡೆ ಟ್ವಿಟ್ಟರ್ ಕಚೇರಿಗಳನ್ನು ಮುಚ್ಚಲಾಗುತ್ತಿದೆ.
ದ ವರ್ಜ್ ಹಾಗೂ ನ್ಯೂಯಾರ್ಕ್ ಟೈಮ್ಸ್ ವರದಿಗಳ ಪ್ರಕಾರ, ಟ್ವಿಟ್ಟರ್ ಉದ್ಯೋಗಿಗಳ ಕಂಪೆನಿಯಲ್ಲಿ ಉಳಿಯಲು ಬಯಸುತ್ತೀರಾ ಎಂಬ ಪ್ರಶ್ನೆಗೆ ಗೂಗಲ್ ಫಾರ್ಮ್ನಲ್ಲಿ ಹೌದು ಎಂಬ ಆಯ್ಕೆಗೆ ಗುರುವಾರ ಮಧ್ಯಾಹ್ನ 2 ಗಂಟೆಯ ವರೆಗೆ ಸಮಯಾವಕಾಶವಿತ್ತು. ಆದರೆ ಉದ್ಯೋಗಿಗಳು ಸೆಲ್ಯೂಟ್ ಎಮೋಜಿಗಳನ್ನು ಕಳುಹಿಸಿ ವಿದಾಯ ಸಂದೇಶಗಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದರು.
ಟ್ವಿಟ್ಟರ್ನಲ್ಲಿ ಉತ್ತೇಜಕ ಪ್ರಯಾಣ ಮುಂದುವರೆಸಲು ಉದ್ಯೋಗಿಗಳು ಸೈನ್ ಇನ್ ಮಾಡಬಹುದು. ಇಲ್ಲವೇ ಕಂಪನಿಯಿಂದ ಬೇರ್ಪಡುವಿಕೆಗೆ ರಾಜೀನಾಮೆ ಮಾಡಬಹುದು ಎಂದು ಉದ್ಯೋಗಿಗಳಿಗೆ ಈ ಹಿಂದೆ ತಿಳಿಸಲಾಗಿತ್ತು. ಈಗ ರಾಜೀನಾಮೆಗಳ ರಾಶಿಯೇ ಬರುತ್ತಿದ್ದಂತೆ ಟ್ವಿಟ್ಟರ್ ಕಂಪೆನಿ ತನ್ನ ಎಲ್ಲಾ ಕಚೇರಿಗಳನ್ನು ಮುಚ್ಚುತ್ತಾ ಬರುತ್ತಿದೆ ಎಂದು ಟೆಕ್ ಪತ್ರಕರ್ತ ಝೋ ಸ್ಕಿಫರ್ ವರದಿ ಮಾಡಿದ್ದಾರೆ.

ಆದರೆ ಕಂಪೆನಿಯನ್ನು ಹಾಳು ಮಾಡಲು ಉದ್ಯೋಗಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಸಿಇಒ ಎಲಾನ್ ಮಸ್ಕ್ ಹಾಗೂ ಅವರ ತಂಡ ಭಯಭೀತರಾಗಿದ್ದಾರೆ. ಎಲಾನ್ ಮಸ್ಕ್ ಮತ್ಯಾವ ಉದ್ಯೋಗಿಗಳನ್ನು ತೆಗೆಯಬಹುದು ಎಂದು ನೋಡುತ್ತಿದ್ದಾರೆ ಎಂದು ಸ್ಕಿಫರ್ ಎಂಬುವವರು ವರದಿ ಮಾಡಿದ್ದಾರೆ.
ಸ್ಕಿಫರ್ ಅವರ ಪ್ರಕಾರ, ನವೆಂಬರ್ 21 ರಂದು ಟ್ವಿಟ್ಟರ್ ಕಚೇರಿಗಳು ಮತ್ತೆ ತೆರೆಯಲ್ಪಡುತ್ತವೆ ಎನ್ನಲಾಗಿದೆ. ಒಂದು ತಿಂಗಳ ಹಿಂದೆ ಮಸ್ಕ್ ಕಂಪನಿಯನ್ನು ಖರೀದಿಸಿದಾಗಿನಿಂದ ಟ್ವಿಟ್ಟರ್ನಲ್ಲಿ ರಾಜೀನಾಮೆ ಮತ್ತು ವಜಾಗೊಳಿಸುವಿಕೆ ನಡೆಯುತ್ತಿದೆ. ಹೊಸ ಟ್ವಿಟ್ಟರ್ನಲ್ಲಿ ಬ್ಲೂ ಟಿಕ್ ಪರಿಶೀಲನೆಗಾಗಿ ಚಂದಾ ಪಾವತಿಸುವ ಕಾರ್ಯತಂತ್ರಕ್ಕಾಗಿ ಇದು ಮಾರಕವಾದ ಹೊಂದಿಕೆಯಾಗಿದೆ.
ಈ ಮಧ್ಯೆ ಟ್ವಿಟರ್ ಫೆಡರಲ್ ಟ್ರೇಡ್ ಕಮಿಷನ್ (ಎಫ್ಟಿಸಿ)ನಿಂದ ಅಪಾಯಕ್ಕೆ ಒಳಗಾಗಬಹುದಾಗಿದೆ. ಏಕೆಂದರೆ ಶುಕ್ರವಾರ ಮುಂಜಾನೆ ಏಳು ಡೆಮಾಕ್ರಟಿಕ್ ಸೆನೆಟರ್ಗಳು ಟ್ವಿಟರ್ ತನ್ನ ಗ್ರಾಹಕ ಗೌಪ್ಯತೆ ಒಪ್ಪಂದವನ್ನು ಉಲ್ಲಂಘಿಸಿದೆಯೇ ಎಂದು ತನಿಖೆ ಮಾಡುವಂತೆ ಏಜೆನ್ಸಿಗೆ ಪತ್ರವನ್ನು ಕಳುಹಿಸಿದ್ದಾರೆ. ಈಗ ಟ್ವಿಟರ್ನ 7,500 ಉದ್ಯೋಗಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ರಾಜೀನಾಮೆ ನೀಡಿ ಹಾಗೂ ವಜಾಗೊಳಿಸಲ್ಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಟ್ವಿಟ್ಟರ್ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications