ಏಪ್ರಿಲ್ನಲ್ಲಿ 82 ಲಕ್ಷ ಮೊಬೈಲ್ ಚಂದಾದಾರರನ್ನು ಕಳೆದುಕೊಂಡ ಟೆಲಿಕಾಂ ಕಂಪನಿಗಳು
ನವದೆಹಲಿ, ಜುಲೈ 25: ಭಾರತದಲ್ಲಿ ಮೊದಲ ಪೂರ್ಣ ತಿಂಗಳ ಕೊರೊನಾವೈರಸ್ ಲಾಕ್ಡೌನ್ದಿಂದಾಗಿ 8.2 ಮಿಲಿಯನ್ ಮೊಬೈಲ್ ಬಳಕೆದಾರರ ನಿರ್ಗಮನವನ್ನು ಟೆಲಿಕಾಂ ಕಂಪನಿಗಳು ಕಂಡಿವೆ ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ದತ್ತಾಂಶವು ತೋರಿಸಿದೆ.
ಏಪ್ರಿಲ್ನಲ್ಲಿ ನಗರ ಮೊಬೈಲ್ ಬಳಕೆದಾರರ ಸಂಖ್ಯೆ 9 ಮಿಲಿಯನ್ ಕುಸಿದಿದ್ದರೆ, ಭಾರತದ ನಗರಗಗಳಿಂದ ವಲಸೆ ಕಾರ್ಮಿಕರನ್ನು ಹಳ್ಳಿಗಳಿಗೆ ಸ್ಥಳಾಂತರಿಸುವುದನ್ನು ಕಂಡಾಗ, ಗ್ರಾಮೀಣ ಚಂದಾದಾರರ ಪ್ರಮಾಣವು ಸ್ವಲ್ಪಮಟ್ಟಿಗೆ ಏರಿತು ಎಂದು ಟ್ರಾಯ್ ಹಂಚಿಕೊಂಡ ಮಾಹಿತಿ ತಿಳಿಸಿದೆ.
ಉತ್ತರ ಪ್ರದೇಶವು ಏಕೈಕ ಸೇವಾ ಕ್ಷೇತ್ರವಾಗಿದ್ದು, ಬಳಕೆದಾರರು ಶೇ. 1.29 ರಷ್ಟು ಏರಿಕೆಯಾಗಿದ್ದಾರೆ. ಇತರ ಎಲ್ಲ ಸೇವಾ ಪ್ರದೇಶಗಳು ಮೊಬೈಲ್ ಚಂದಾದಾರಿಕೆಯಲ್ಲಿ ಕುಸಿತವನ್ನು ವರದಿ ಮಾಡಿವೆ.

ವೊಡಾಫೋನ್ ಐಡಿಯಾ ಲಿಮಿಟೆಡ್ 4.5 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡರೆ, ಭಾರ್ತಿ ಏರ್ಟೆಲ್ 5.2 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡಿದೆ. ಆದಾಗ್ಯೂ, ಅದೇ ತಿಂಗಳಲ್ಲಿ, ರಿಲಯನ್ಸ್ ಜಿಯೋ 1.6 ಮಿಲಿಯನ್ ಗ್ರಾಹಕರನ್ನು ಸೇರಿಸಿದೆ. ಇದು ಎರಡು ವರ್ಷಗಳಲ್ಲಿ ಅದರ ಕಡಿಮೆ ಮಾಸಿಕ ಸೇರ್ಪಡೆಗಳಲ್ಲಿ ಒಂದಾಗಿದೆ.
ರಿಲಯನ್ಸ್ ಜಿಯೋ ಈಗ ವೈರ್ಲೆಸ್ ಮಾರುಕಟ್ಟೆ ಪಾಲಿನ ಶೇ. 33.85ರಷ್ಟು ವಿಸ್ತಾರವನ್ನು ಹೊಂದಿದೆ, ಭಾರ್ತಿ ಏರ್ಟೆಲ್ ಲಿಮಿಟೆಡ್ ಮತ್ತು ವೊಡಾಫೋನ್ ಐಡಿಯಾ ಕ್ರಮವಾಗಿ ಶೇ. 28.06 ಮತ್ತು ಶೇ. 27.37 ನಷ್ಟು ಮಾರುಕಟ್ಟೆ ಪಾಲನ್ನು ಹೊಂದಿವೆ.
ಭಾರತದಲ್ಲಿ ದೂರವಾಣಿ ಚಂದಾದಾರರ ಸಂಖ್ಯೆ ಮಾರ್ಚ್ ಅಂತ್ಯದ ವೇಳೆಗೆ 1,177.97 ದಶಲಕ್ಷದಿಂದ ಏಪ್ರಿಲ್ ಅಂತ್ಯದ ವೇಳೆಗೆ 1,169.44 ದಶಲಕ್ಷಕ್ಕೆ ಇಳಿದಿದೆ. ಇದು ಶೇ. 0.72ನಷ್ಟು ಕಡಿಮೆಯಾಗಿದೆ.
ನಗರ ದೂರವಾಣಿ ಚಂದಾದಾರಿಕೆ ಮಾರ್ಚ್ ಅಂತ್ಯದ ವೇಳೆಗೆ 656.46 ದಶಲಕ್ಷದಿಂದ ಏಪ್ರಿಲ್ ಅಂತ್ಯದ ವೇಳೆಗೆ 647.19 ದಶಲಕ್ಷಕ್ಕೆ ಇಳಿದಿದೆ. ಆದಾಗ್ಯೂ, ಇದೇ ಅವಧಿಯಲ್ಲಿ ಗ್ರಾಮೀಣ ಚಂದಾದಾರಿಕೆ 521.51 ದಶಲಕ್ಷದಿಂದ 522.24 ದಶಲಕ್ಷಕ್ಕೆ ಏರಿದೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications