ಏರ್ ಟೆಲ್ ತೆಕ್ಕೆಗೆ ಸಾಲಯುಕ್ತ ಟಾಟಾ ಟೆಲಿ ಸರ್ವಿಸಸ್
ಬೆಂಗಳೂರು, ಅಕ್ಟೋಬರ್ 13: ರಿಲಯನ್ಸ್ ಜಿಯೋಗೆ ಸೆಡ್ಡು ಹೊಡೆಯಲು ಮುಂದಾಗಿರುವ ಭಾರ್ತಿ ಏರ್ಟೆಲ್ ಈಗ ಮುಚ್ಚುವ ಹಂತ ತಲುಪಿರುವ ಟಾಟಾ ಟೆಲಿ ಸರ್ವಿಸಸ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಟಾಟಾ ಸಂಸ್ಥೆಯ ಮೊಬೈಲ್ ಸೇವೆ ವಿಭಾಗ(Consumer Mobile Businesses)ವು ಭಾರ್ತಿ ಏರ್ಟೆಲ್ ನಲ್ಲಿ ವಿಲೀನಗೊಳ್ಳಲಿದೆ.
ಟಾಟಾ ಟೆಲಿ ಸರ್ವಿಸಸ್ ಮತ್ತು ಏರ್ಟೆಲ್ ವಿಲೀನದಿಂದ ಟಾಟಾ ಟೆಲಿ ಸರ್ವೀಸ್ ಗೆ ಸೇರಿದ ಸುಮಾರು 4 ಕೋಟಿ ಮೊಬೈಲ್ ಗ್ರಾಹಕರು ಏರ್ಟೆಲ್ ಸಂಸ್ಥೆಯ ಬಳಕೆದಾರರಾಗಲಿದ್ದಾರೆ.

ವೋಡಾಫೋನ್ ಇಂಡಿಯಾ ಹಾಗೂ ಐಡಿಯಾ ಸೆಲ್ಯುಲಾರ್ ವಿಲೀನದ ನಂತರ ಟೆಲಿಕಾಂ ಕ್ಷೇತ್ರದಲ್ಲಿ ಇದು ಬಹುದೊಡ್ಡ ವಿಲೀನ ಎನಿಸಿಕೊಂಡಿದೆ.
ಈ ವಿಲೀನದ ಬಗ್ಗೆ ಸ್ಪಷ್ಟನೆ ನೀಡಿರುವ ಏರ್ ಟೆಲ್, 'ಇದು ಸಾಲ ಮುಕ್ತ, ನಗದು ಮುಕ್ತ ವಿಲೀನ ಪ್ರಕ್ರಿಯೆಯಾಗಿದೆ ಎಂದಿದೆ. 40 ಸಾವಿರ ಕೋಟಿ ರು ಸಾಲ, 10 ಸಾವಿರ ಕೋಟಿ ರು ಸ್ಪೆಕ್ಟ್ರಂ ಸಾಲ ಕೂಡಾ ಟಾಟಾ ಸನ್ಸ್ ಪಾವತಿಸಲಿದೆ. ಇದಕ್ಕೂ ಏರ್ ಟೆಲ್ ಗೂ ಸಂಬಂಧವಿಲ್ಲ' ಎಂದಿದೆ.
ಸುಮಾರು 149 ವರ್ಷ ಇತಿಹಾಸ ಹೊಂದಿರುವ ಟಾಟಾ ಸಮೂಹ ಸಂಸ್ಥೆಯು ತನ್ನ ಅತಿ ದೊಡ್ಡ ಟೆಲಿಕಾಂ ಘಟಕವನ್ನು ಮುಚ್ಚುತ್ತಿದೆ. 1996ರಲ್ಲಿ ಲ್ಯಾಂಡ್ ಲೈನ್ ಮೂಲಕ ಸೇವೆ ನೀಡಲು ಆರಂಭಿಸಿದ ಟಾಟಾ ಸಂಸ್ಥೆ 2002ರಲ್ಲಿ ಸಿಡಿಎಂಎ ತಂತ್ರಜ್ಞಾನವನ್ನು ಅಳವಡಿಸಿಕೊಂಡಿತು. 2008ರಲ್ಲಿ ಜಿಎಸ್ಎಂ ಫೋನ್ ಗಳನ್ನು ಪರಿಚಯಿಸಿದರೂ ಸಂಸ್ಥೆ ಏಳಿಗೆ ಕಂಡಿರಲಿಲ್ಲ.
ವಿಲೀನದ ನಂತರ ಮುಂದೇನು?: ವೀಲಿನದ ನಂತರ ಟಾಟಾದ ಗ್ರಾಹಕರಿಗೆ ಧ್ವನಿ ಹಾಗೂ ಡಾಟಾ ಸರ್ವೀಸ್, ಮೊಬೈಲ್ ಬ್ಯಾಂಕಿಂಗ್, ವಿಎಎಸ್ ಹಾಗೂ ದೇಶಿ / ಅಂತಾರಾಷ್ಟ್ರೀಯ ರೋಮಿಂಗ್ ವ್ಯವಸ್ಥೆಗಳನ್ನು ಸುನಿಲ್ ಮಿತ್ತಲ್ ಏರ್ಟೆಲ್ ಒದಗಿಸಲಿದೆ. Enterprise and Fixed Line and Broadband ವಿಭಾಗಕ್ಕೆ ಸೇರಿರುವ ಟಾಟಾ ಉದ್ಯೋಗಿಗಳ ಭವಿಷ್ಯದ ಮುಂದಿನ ದಿನಗಳಲ್ಲಿ ತಿಳಿಯಲಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications