ಸುಬ್ರೊತೊ ರಾಯ್ 62,600 ಕೋಟಿ ಠೇವಣಿ ಇಡುವಂತೆ ಸುಪ್ರೀಂ ಕೋರ್ಟ್ಗೆ ಸೆಬಿ ಅರ್ಜಿ
ನವದೆಹಲಿ, ನವೆಂಬರ್ 20: ಕೋಟ್ಯಾಂತರ ರೂಪಾಯಿಗಳನ್ನು ಠೇವಣಿ ಇಡದೇ ದಿನದೂಡುತ್ತಿರುವ ಸಹಾರಾ ವಿರುದ್ಧ ಸೆಬಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಸಹಾರಾ ಸಂಘಟನೆಯ ಮುಖ್ಯಸ್ಥ ಸುಬ್ರೊತೊ ರಾಯ್ ಮತ್ತು ಅವರ ಎರಡು ಕಂಪೆನಿಗಳು 62,600 ಕೋಟಿ ರೂ. (8.4 ಬಿಲಿಯನ್ ಡಾಲರ್) ಠೇವಣಿ ಇಡಲು ನಿರ್ದೇಶಿಸುವಂತೆ ತಿಳಿಸಿದೆ.
ರಾಯಿಟರ್ಸ್ ನೋಡಿದ ಅರ್ಜಿದಾರರ ಪ್ರತಿ ಪ್ರಕಾರ, 2012 ಮತ್ತು 2015 ರ ನ್ಯಾಯಾಲಯದ ಆದೇಶಗಳ ಪ್ರಕಾರ ಹೂಡಿಕೆದಾರರಿಂದ ಸಂಗ್ರಹಿಸಿದ ಸಂಪೂರ್ಣ ಮೊತ್ತವನ್ನು ಶೇ. 15ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಠೇವಣಿ ಇಡಲು ಸಹಾರಾ ವಿಫಲವಾಗಿದೆ ಎಂದು ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಸುಪ್ರೀಂ ಕೋರ್ಟ್ಗೆ ಬುಧವಾರ ತಿಳಿಸಿದೆ.

ಒಂದು ಕಾಲದಲ್ಲಿ ಟೀಮ್ ಇಂಡಿಯಾದ ಪ್ರಾಯೋಜಕರಾಗಿದ್ದ ಸಹಾರಾ
ಹೌದು ಒಂದು ಕಾಲದಲ್ಲಿ ಸಹಾರಾ ಸಮೂಹ ಟೀಮ್ ಇಂಡಿಯಾ ಕ್ರಿಕೆಟ್ ತಂಡದ ಪ್ರಮುಖ ಪ್ರಾಯೋಜಕರಾಗಿತ್ತು. ಆದರೆ ಸೆಬಿ ಜೊತೆಗಿನ ಸಂಘರ್ಷದಲ್ಲಿ ಸಿಲುಕಿಕೊಂಡಿದ್ದು, ತಮ್ಮ ಹಣವನ್ನು ಬಾಂಡ್ ಯೋಜನೆಯಲ್ಲಿ ಇಟ್ಟ ಹೂಡಿಕೆದಾರರಿಗೆ, ಶತಕೋಟಿ ಡಾಲರ್ಗಳನ್ನು ಮರುಪಾವತಿಸುವ ಬಗ್ಗೆ ಕಾನೂನು ಹೋರಾಟ ನಡೆಸುತ್ತಿದೆ.

ಸುಬ್ರೊತೊ ರಾಯ್ ಬಂಧನವಾಗಿತ್ತು
ಶತಕೋಟಿ ಡಾಲರ್ಗಳನ್ನು ಮರುಪಾವತಿಸಲು ವಿಫಲವಾಗಿದ್ದ ಕಾರಣ ಸುಬ್ರೊತೊ ರಾಯ್ ಅವರನ್ನು ಮಾರ್ಚ್ 2014 ರಲ್ಲಿ ಬಂಧಿಸಲಾಯಿತು ಮತ್ತು 2016 ರಿಂದ ಅವರು ಜಾಮೀನಿನಲ್ಲಿದ್ದಾರೆ. ಈಗಲೂ ಅವರು ತಮ್ಮ ಯಾವುದೇ ತಪ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ.

ಎಂಟು ವರ್ಷಗಳಿಂದ ಸೆಬಿಗೆ ದೊಡ್ಡ ಹೊಡೆತ
ಕಳೆದ ಎಂಟು ವರ್ಷಗಳಿಂದ ಸೆಬಿಗೆ ನೀಡಬೇಕಾದ ಹಣವನ್ನು ಸಹಾರಾ ಹಿಂತಿರುಗಿಸದೇ ಇರುವುದು ಸೆಬಿಗೆ ದೊಡ್ಡ ಅನಾನುಕೂಲತೆಯನ್ನು ಸೃಷ್ಟಿಸಿದೆ. ಈ ಮೊತ್ತವನ್ನು ಸಹಾರಾ ಠೇವಣಿ ಮಾಡಲು ವಿಫಲಗೊಂಡರೆ, ಇದಕ್ಕೆ ಸಂಬಂಧಪಟ್ಟವರನ್ನು ವಶಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದೆ.
ಇದರ ಜೊತೆಗೆ ಕೋರ್ಟ್ನ ಆದೇಶ ಮತ್ತು ನಿರ್ದೇಶನಗಳನ್ನು ಅನುಸರಿಸುವ ಯಾವುದೇ ಪ್ರಯತ್ನಗಳನ್ನು ಸಹಾರಾ ಸಮೂಹ ಮಾಡಿಲ್ಲ ಎಂದು ಸೆಬಿ ನ್ಯಾಯಾಲಯಕ್ಕೆ ದೂರಿದೆ. ಅಲ್ಲದೆ ಕಾಲನಂತರದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದ ಜನರು ಹೆಚ್ಚುತ್ತಿದ್ದು ಮತ್ತು ಬಂಧನದಿಂದ ಬಿಡುಗಡೆಯಾಗುತ್ತಿದ್ದಾರೆ ಎಂದು ತಿಳಿಸಿದೆ.

ಬಾಕಿ 626 ಶತಕೋಟಿ ರೂಪಾಯಿಗಳಿಗೆ ಏರಿಕೆ
ಸಹಾರಾ ಈಗಾಗಲೇ ಅಸಲು ಮೊತ್ತದ ಒಂದು ಭಾಗವನ್ನು ಮಾತ್ರ ಠೇವಣಿ ಇಟ್ಟಿದೆ. ಆದರೆ ಬಡ್ಡಿಯೊಂದಿಗೆ ಬಾಕಿಯು 626 ಶತಕೋಟಿ ರೂಪಾಯಿಗಳಿಗೆ ಏರಿದೆ ಎಂದು ಸೆಬಿ ಹೇಳಿದೆ.
ರಾಯಿಟರ್ಸ್ನ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಹಾರಾ ವಕ್ತಾರರು, ಕಂಪನಿಯು ಈಗಾಗಲೇ ಸುಮಾರು 220 ಶತಕೋಟಿ ರೂಪಾಯಿಗಳನ್ನು ಸೆಬಿಗೆ ಜಮಾ ಮಾಡಿದೆ ಎಂದು ಹೇಳಿದೆ. ಸಹಾರಾ ಈ ಹಿಂದೆ ನ್ಯಾಯಾಲಯಕ್ಕೆ ಈ ರೀತಿಯಾಗಿ ತಿಳಿಸಿದ್ದು, ಹೂಡಿಕೆದಾರರಿಂದ ಸಂಗ್ರಹಿಸಿದ ಹೆಚ್ಚಿನ ಹಣವನ್ನು ತಾನು ಮರುಪಾವತಿಸಿದ್ದೇನೆ ಮತ್ತು ಸಂಬಂಧಿತ ದಾಖಲೆಗಳನ್ನು ಸೆಬಿಗೆ ಸಲ್ಲಿಸಿದ್ದೇನೆ, ಆದರೆ ಅವುಗಳನ್ನು ಪರಿಶೀಲಿಸುತ್ತಿಲ್ಲ ಎಂದು ಆರೋಪಿಸಿತ್ತು.
ಸೆಬಿ ಸುಮಾರು 150 ಪತ್ರಿಕೆಗಳಲ್ಲಿ ಜಾಹೀರಾತುಗಳ ಮೂಲಕ ಹಕ್ಕುದಾರರನ್ನು ಆಹ್ವಾನಿಸಿತ್ತು. ಆದರೆ ಹೂಡಿಕೆದಾರರಿಗೆ ಕೇವಲ 1 ಬಿಲಿಯನ್ ರೂಪಾಯಿಗಳನ್ನು ಮರುಪಾವತಿಸಿದೆ ಎಂದು ಸಹಾರಾ ವಕ್ತಾರರು ಇಮೇಲ್ನಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ ಯಾವುದೇ ಹೆಚ್ಚಿನ ಹಕ್ಕುಗಳನ್ನು ಪಡೆಯುವುದಿಲ್ಲ ಎಂದು ಸೆಬಿ ಹೇಳಿದೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video












Click it and Unblock the Notifications