ರಿಸರ್ವ್ ಬ್ಯಾಂಕ್ ರೆಪೋ ದರ 6.5% ಯಥಾ ಸ್ಥಿತಿ ಮುಂದುವರಿಕೆ
ನವದೆಹಲಿ, ಡಿಸೆಂಬರ್ 5: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ರೆಪೋ ದರದಲ್ಲಿ (ಸಾಲ ನೀಡಿಕೆ ದರ) ಯಾವುದೇ ಬದಲಾವಣೆ ಮಾಡಿಲ್ಲ. ಆದ್ದರಿಂದ 6.5% ನಲ್ಲೇ ಮುಂದುವರಿಯಲಿದೆ. ಡಿಸೆಂಬರ್ ತಿಂಗಳ ಆರ್ ಬಿಐ ನೀತಿ ಪರಿಶೀಲನಾ ಸಭೆಯು ಬುಧವಾರ ಇತ್ತು. ರಿವರ್ಸ್ ರೆಪೋ ದರ (ಸಾಲ ಪಡೆಯುವ ದರ) ಕೂಡ ಅದೇ ಸ್ಥಿತಿ ಅಂದರೆ 6.25%ನಲ್ಲೇ ಮುಂದುವರಿಯಲಿದೆ.
ರೆಪೋ ದರ ಅಂದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಬ್ಯಾಂಕ್ ಗಳಿಗೆ ನೀಡುವ ಅಲ್ಪಾವಧಿ ಸಾಲದ ಮೇಲೆ ವಿಧಿಸುವ ದರ ಮತ್ತು ರಿವರ್ಸ್ ರೆಪೋ ದರ ಅಂದರೆ ವಾಣಿಜ್ಯ ಬ್ಯಾಂಕ್ ಗಳಿಂದ ರಿಸರ್ವ್ ಬ್ಯಾಂಕ್ ಹಣ ಪಡೆದುಕೊಳ್ಳುವ ದರ. ಮಧ್ಯಮಾವಧಿಯಲ್ಲಿ ಗ್ರಾಹಕ ದರ ಸೂಚ್ಯಂಕ (ಸಿಪಿಐ) ಹಣದುಬ್ಬರವನ್ನು ನಾಲ್ಕು ಪರ್ಸೆಂಟ್ ಗುರಿ ಇಟ್ಟುಕೊಂಡು, ಪ್ಲಸ್ ಅಥವಾ ಮೈನಸ್ ಎರಡು ಪರ್ಸೆಂಟ್ ಜತೆಗೆ ಅಭಿವೃದ್ಧಿಗೆ ಪೂರಕವಾದ ನಿರ್ಧಾರ ಕೈಗೊಳ್ಳುವುದು ಉದ್ದೇಶ ಎಂದು ಬ್ಯಾಂಕ್ ಹೇಳಿದೆ.
ಜೂನ್ ನಂತರ ಆರ್ ಬಿಐ ಮೇಲಿಂದ ಮೇಲೆ ಬಡ್ಡಿ ದರ ಏರಿಕೆ ಮಾಡಿತ್ತು. ಆದರೆ ಅಕ್ಟೋಬರ್ ನಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ರುಪಾಯಿ ಮೌಲ್ಯ ಕುಸಿತ, ಹೆಚ್ಚುತ್ತಿರುವ ತೈಲ ಬೆಲೆಯಿಂದ ಹಣದುಬ್ಬರದ ಒತ್ತಡದ ಕಾರಣಕ್ಕೆ ಬಡ್ಡಿ ದರ ಏರಿಕೆ ಮಾಡಬಹುದು ಎಂದು ತಜ್ಞರು ಊಹಿಸಿದ್ದ ಅಕ್ಟೋಬರ್ ನಲ್ಲಿ ಏರಿಕೆ ಮಾಡಿರಲಿಲ್ಲ.

ಮುಂದಿನ ಮಾರ್ಚ್ ತನಕ ಬಡ್ಡಿ ದರವು ಇದೇ ಪ್ರಮಾಣದಲ್ಲಿ ಇರುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆರ್ ಬಿಐ ನ ಆರ್ಥಿಕ ನೀತಿ ಪರಿಶೀಲನಾ ಸಭೆಯು ಮುಂದಿನ ವರ್ಷದ ಫೆಬ್ರವರಿ ಐದರಿಂದ ಏಳನೇ ತಾರೀಕಿನ ತನಕ ನಡೆಯಲಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications