ಸರಕಾರಿ ಡಿಜಿಟಲ್ ಕರೆನ್ಸಿ: ಅಳೆದು ತೂಗುತ್ತಿರುವ ಆರ್ಬಿಐ
ಮುಂಬೈ, ಮೇ 27: ಈ ಬಾರಿಯ ಬಜೆಟ್ನಲ್ಲಿ ಘೋಷಣೆ ಆದಂತೆ ಆರ್ಬಿಐನಿಂದ ಡಿಜಿಟಲ್ ಕರೆನ್ಸಿ (CBDC- Central Bank Digital Currency) ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ಡಿಜಿಟಲ್ ಕರೆನ್ಸಿಯ ಭವಿಷ್ಯವೇನು, ಅದರ ಸಾಧಕ ಬಾಧಕಗಳೇನು ಎಂಬುದು ಇನ್ನೂ ನಿಖರವಾಗಿ ಗೊತ್ತಿಲ್ಲದೇ ಇರುವುದರಿಂದ ಎಚ್ಚರಿಕೆಯಿಂದ ಆರ್ಬಿಐ ಹೆಜ್ಜೆ ಇಡಲಿದೆ ಎಂಬ ವಿಚಾರ ತಿಳಿದುಬಂದಿದೆ. ಮೂಲಗಳ ಪ್ರಕಾರ, ಡಿಜಿಟಲ್ ಕರೆನ್ಸಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಚಾಲನೆಗೆ ಕಾನೂನು ಚೌಕಟ್ಟು (Legal Framework) ಒದಗಿಸಲು ಅನುವಾಗುವಂತೆ ಹಣಕಾಸು ಮಸೂದೆಗೆ ರೂಪಿಸಲಾಗಿದೆ. 1934ರ ಆರ್ಬಿಐ ಕಾಯ್ದೆಗೆ ಸೂಕ್ತ ತಿದ್ದುಪಡಿ ಕೂಡ ಮಾಡಿ ಅದನ್ನು 2022ರ ಹಣಕಾಸು ಮಸೂದೆಗಯಲ್ಲಿ ಒಳಗೊಳ್ಳಲಾಗಿದೆ. ಈಗ ಈ ಮಸೂದೆಗೆ ಅಂಗೀಕಾರ ಸಿಕ್ಕಿದ್ದು, ಅದನ್ನು ಜಾರಿಗೆ ತರಲಾಗಿದೆ. ಇದರೊಂದಿಗೆ ಸಿಬಿಡಿಸಿಯನ್ನು ಕಾನೂನಿನ ಚೌಕಟ್ಟಿನೊಳಗೆಯೇ ಬಿಡುಗಡೆ ಮಾಡಬಹುದಾಗಿದೆ.
"ಭಾರತದಲ್ಲಿ ಡಿಜಿಟಲ್ ಕರೆನ್ಸಿ ತರಲು ರಿಸರ್ವ್ ಬ್ಯಾಂಕ್ ನಿರತವಾಗಿದೆ. ಹಣಕಾಸು ನೀತಿಯ ಉದ್ದೇಶ, ಹಣಕಾಸು ಸ್ಥಿರತೆ ಮತ್ತು ಕರೆನ್ಸಿ ಹಾಗು ಪಾವತಿ ವ್ಯವಸ್ಥೆಯ ಸಮರ್ಪಕ ಕಾರ್ಯಾಚರಣೆಗೆ ಹೊಂದಿಕೆಯಾಗುವಂತೆ ಸಿಬಿಡಿಸಿಯ ಸ್ವರೂಪ ಇರಬೇಕಾಗುತ್ತದೆ" ಎಂದು ಆರ್ಬಿಐ ಶುಕ್ರವಾರ ಬಿಡುಗಡೆ ಮಾಡಿದ ತನ್ನ 2021-22ರ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಸಾಧಕ ಬಾಧಕಗಳು:
ಭಾರತೀಯ ಡಿಜಿಟಲ್ ಕರೆನ್ಸಿಯನ್ನು ತರುವಲ್ಲಿನ ಸಾಧಕ ಮತ್ತು ಬಾಧಕಗಳೇನು ಎಂಬುದರತ್ತ ಆರ್ಬಿಐ ಗಮನ ನೆಟ್ಟಿದೆ. ಹಂತ ಹಂತವಾಗಿ ಪರೀಕ್ಷಿಸಿ, ಪ್ರತೀ ಹಂತದಲ್ಲೂ ಸಾಧಕ ಬಾಧಕಗಳನ್ನು ಅವಲೋಕಿಸಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಲು ಆರ್ಬಿಐ ನಿರ್ಧರಿಸಿದೆ.
ಡಿಜಿಟಲ್ ಕರೆನ್ಸಿಯನ್ನು ವಾಸ್ತವವಾಗಿ ಆಚರಣೆಗೆ ತರಬಹುದಾ, ತಂದರೆ ಅದು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿರುತ್ತದೆ, ಹೆಚ್ಚಿನ ತೊಂದರೆ ಆಗದ ರೀತಿಯಲ್ಲಿ ಡಿಜಿಟಲ್ ಕರೆನ್ಸಿಯನ್ನು ಹೇಗೆ ಜಾರಿಗೆ ತರಬಹುದು ಎಂಬಿತ್ಯಾದಿ ಅಂಶಗಳ ಬಗ್ಗೆ ಆರ್ಬಿಐ ಗಮನ ನೆಟ್ಟಿದೆ.
ಫೆಬ್ರವರಿ 1ರಂದು ಬಜೆಟ್ನಲ್ಲಿ ಡಿಜಿಟಲ್ ಕರೆನ್ಸಿ ಪ್ರಸ್ತಾವ ಆಯಿತಾದರೂ ನಂತರ ನಡೆದ ಆರ್ಬಿಐ ಸುದ್ದಿಗೋಷ್ಠಿಯಲ್ಲಿ ಗವರ್ನರ್ ಶಕ್ತಿಕಾಂತ್ ದಾಸ್ ಮಾತನಾಡಿ, ಡಿಜಿಟಲ್ ಕರೆನ್ಸಿಯನ್ನು ಆತುರಾತುರವಾಗಿ ಜಾರಿಗೆ ತರಲಾಗದು. ಎಲ್ಲಾ ದೃಷ್ಟಿಯಿಂದಲೂ ಎಲ್ಲಾ ಅಂಶಗಳನ್ನೂ ಅವಲೋಕಿಸಿದ ಬಳಿಕವಷ್ಟೇ ಅದನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು.

ಬಿಟ್ಕಾಯಿನ್ ಇತ್ಯಾದಿಯಂತೆ ಅಲ್ಲ:
"ಸಿಬಿಡಿಸಿ ಎಂಬುದು ಡಿಜಿಟಲ್ ಕರೆನ್ಸಿಯಾದರೂ ಈಗ ಎಲ್ಲೆಡೆ ಇರುವ ಬಿಟ್ ಕಾಯಿನ್ ಇತ್ಯಾದಿ ಕ್ರಿಪ್ಟೋಕರೆನ್ಸಿಯೊಂದಿಗೆ ಇದನ್ನು ಹೋಲಿಸಲು ಸಾಧ್ಯವಿಲ್ಲ" ಎಂಬುದು ಆರ್ಬಿಐನ ವಾದ. ಈಗ ಇರುವ ರೂಪಾಯಿ ಕರೆನ್ಸಿಯ ಡಿಜಿಟಲ್ ರೂಪವೇ ಸಿಬಿಡಿಸಿ ಆಗಿರಲಿದೆ. ಎರಡನ್ನೂ ಪರಸ್ಪರ ಅದಲುಬದಲು ಮಾಡಿಕೊಳ್ಳಬಹುದು. ಆದರೂ ಹಲವು ಗೊಂದಲಗಳು ಆರ್ಬಿಐನ ಪ್ರಸ್ತಾವಿತ ಡಿಜಿಟಲ್ ಕರೆನ್ಸಿಯ ಬಗ್ಗೆ ಇದ್ದು, ಮುಂದಿನ ದಿನಗಳಲ್ಲಿ ಒಂದು ಸ್ಪಷ್ಟತೆ ಸಿಗುವ ನಿರೀಕ್ಷೆ ಇದೆ.
ಬೆಂಗಳೂರಿನಲ್ಲಿ ಇನೊವೇಶನ್ ಹಬ್:
ಹೊಸತನದ ಪ್ರಯೋಗ ಮಾಡಲೆಂದು ಆರ್ಬಿಐ ಸಂಸ್ಥೆ ಬೆಂಗಳೂರಿನಲ್ಲಿ ಇನೋವೇಶನ್ ಹಬ್ ಸ್ಥಾಪಿಸಿದೆ. ಈ ಇನ್ನೋವೇಶನ್ ಹಬ್ನಲ್ಲಿ ಸ್ವತಂತ್ರ ಮಂಡಳಿಯೊಂದು ಇರಲಿದೆ. ಉದ್ಯಮ ಮತ್ತು ಶೈಕ್ಷಣಿಕ ಕ್ಷೇತ್ರಗಳ ಪರಿಣಿತರು ಮತ್ತು ಗಣ್ಯರು ಈ ಮಂಡಳಿಯ ಸದಸ್ಯರಾಗಿರಲಿದ್ದಾರೆ.
(ಒನ್ಇಂಡಿಯಾ ಸುದ್ದಿ)
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications