ಆರ್ಬಿಐ ಮೀಸಲು ನಿಧಿ 1.96 ಲಕ್ಷ ಕೋಟಿ ರೂಪಾಯಿಗೆ ಕುಸಿತ
ನವದೆಹಲಿ, ಆಗಸ್ಟ್ 30: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) 2019ನೇ ಹಣಕಾಸು ವರ್ಷದ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ತುರ್ತು ಸಂದರ್ಭದಲ್ಲಿ ಬಳಸಲು ಇರಿಸಿರುವ ಮೀಸಲು ನಿಧಿಯ ಪ್ರಮಾಣ 1.96 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ ಎಂದು ತಿಳಿಸಿದೆ.
ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯನ್ನು ನೀಗಿಸಲು ಆರ್ಬಿಐ 1.76 ಲಕ್ಷ ಕೋಟಿ ರೂ. ಮೊತ್ತವನ್ನು ವರ್ಗಾಯಿಸಲು ಒಪ್ಪಿಗೆ ಸೂಚಿಸಿತ್ತು. ಅದರ ಬೆನ್ನಲ್ಲೇ ಜೂನ್ 30ರ ವೇಳೆಗೆ ಆರ್ಬಿಐ ಮೀಸಲು ಇರಿಸಿದ್ದ ನಿಧಿಯ ಮೊತ್ತವು ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ.
2018ರ ಜೂನ್ 30ಕ್ಕೆ ಹೋಲಿಸಿದರೆ 2,32,108 ಕೋಟಿ ರೂಪಾಯಿಯಷ್ಟಿದ್ದ ಮೀಸಲು ನಿಧಿಯ ಪ್ರಮಾಣವು 2019ರ ಜೂನ್ 30ಕ್ಕೆ 1,96,344 ಕೋಟಿ ರೂ.ಗೆ ಇಳಿಕೆಯಾಗಿದೆ ಎಂದು ವಾರ್ಷಿಕ ವರದಿ ಹೇಳಿದೆ.

ವರ್ಗಾವಣೆ ಮೊತ್ತ ಮೂರು ಪಟ್ಟು ಅಧಿಕ
ಕೇಂದ್ರ ಸರ್ಕಾರಕ್ಕೆ ಆರ್ಬಿಐ ವರ್ಗಾವಣೆ ಮಾಡಿದ 1,76,501 ಕೋಟಿ ರೂ.ದಲ್ಲಿ 2018-19ನೇ ಸಾಲಿನ 1,23,414 ಕೋಟಿ ರೂ. ಹೆಚ್ಚುವರಿ ಮೊತ್ತವೂ ಸೇರಿದೆ. ಸೋಮವಾರ ನಡೆದ ಕೇಂದ್ರ ಮಂಡಳಿ ಸಭೆಯಲ್ಲಿ ಪರಿಷ್ಕೃತ ಬಂಡವಾಳ ಚೌಕಟ್ಟನ್ನು (ಇಸಿಎಫ್) ಅಳವಡಿಸಿಕೊಳ್ಳಲಾಗಿದ್ದು, ಇದರಲ್ಲಿ 52,637 ಕೋಟಿ ಹೆಚ್ಚುವರಿ ನಿಯೋಜನೆಯನ್ನು ಗುರುತಿಸಲಾಗಿದೆ. ವರ್ಗಾವಣೆಯಾದ ಮೊತ್ತವು ಐದು ವರ್ಷಗಳ ಸರಾಸರಿಯಾದ 53,000 ಕೋಟಿಗೆ ಮೂರು ಪಟ್ಟು ಅಧಿಕವಾಗಿದೆ.

ವಂಚನೆ ಪ್ರಮಾಣದಲ್ಲಿ ಗಣನೀಯ ಹೆಚ್ಚಳ
ಇದರ ಜತೆಗೆ ಬ್ಯಾಂಕ್ ವಂಚನೆಯ ಪ್ರಮಾಣ ಕೂಡ ಹೆಚ್ಚಳವಾಗಿದೆ ಎಂದು ಆರ್ಬಿಐ ತಿಳಿಸಿದೆ. ಬ್ಯಾಂಕ್ ವಂಚನೆ ಮಾಡುವ ಪ್ರಕರಣಗಳು ಶೇ 15ರಷ್ಟು ಏರಿಕೆಯಾಗಿವೆ. ಈ ವಂಚನೆಯ ಮೊತ್ತದ ಪ್ರಮಾಣ ಶೇ 73.8ರಷ್ಟು ಹೆಚ್ಚಾಗಿವೆ. 2019ರ ಹಣಕಾಸು ವರ್ಷದಲ್ಲಿ 71,542.93 ಕೋಟಿ ರೂ. ವಂಚನೆಯ 6,801 ಪ್ರಕರಣಗಳು ಪತ್ತೆಯಾಗಿವೆ. 2017-2018ರಲ್ಲಿ 5,916 ಪ್ರಕರಣಗಳು ವರದಿಯಾಗಿದ್ದು, 41,167.04 ಕೋಟಿ ರೂ. ಮೊತ್ತದ ಹಣ ವಂಚಿಸಲಾಗಿತ್ತು.

ಸರ್ಕಾರಿ ಬ್ಯಾಂಕುಗಳಲ್ಲಿ ವಂಚನೆ ಹೆಚ್ಚು
2018-19ನೇ ಸಾಲಿನಲ್ಲಿ ವಂಚನೆಯ ಪ್ರಮಾಣ ಹೆಚ್ಚಳವಾಗುವುದಕ್ಕೆ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಹೊಣೆಗಾರರನ್ನಾಗಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ 3,766 ವಂಚನೆ ಪ್ರಕರಣಗಳು ಮತ್ತು 64,509.43 ಕೋಟಿ ರೂ. ಮೊತ್ತದ ವಂಚನೆ ವರದಿಯಾಗಿವೆ. ಕಳೆದ ಸಾಲಿನಲ್ಲಿ 38,260.8 ಕೋಟಿ ಮೊತ್ತ ವಂಚನೆಯ 2,885 ಪ್ರಕರಣಗಳು ದಾಖಲಾಗಿದ್ದವು. ಕುತೂಹಲಕಾರಿ ಅಂಶವೆಂದರೆ ಕಾರ್ಡ್, ಅಂತರ್ಜಾಲ ಮತ್ತು ಠೇವಣಿಗೆ ಸಂಬಂಧಿಸಿದ ಪ್ರಕರಣಗಳು ಕೇವಲ ಶೇ 0.3ರಷ್ಟು ವರದಿಯಾಗಿದೆ. ವಂಚನೆ ಮತ್ತು ನಕಲಿ ದಾಖಲೆಗಳೇ ಪ್ರಮುಖ ಮೋಸದ ಜಾಲಗಳಾಗಿವೆ.

ಆಂತರಿಕ ಮೂಲಗಳ ಆದಾಯ ಏರಿಕೆ
ಆರ್ಬಿಐನ ಆಂತರಿಕ ಮೂಲಗಳ ಆದಾಯದ ಪ್ರಮಾಣವು ಶೇ 132.07ರಷ್ಟು, ಅಂದರೆ 1,18,078 ಕೋಟಿ ರೂ.ಗೆ ಹಿಗ್ಗಿದೆ. ಕಳೆದ ಸಾಲಿನಲ್ಲಿ ಇದು 50,880 ಕೋಟಿ ರೂ.ನಷ್ಟಿತ್ತು.
ಬ್ಯಾಂಕಿಂಗ್ ಮತ್ತು ನಾನ್ ಬ್ಯಾಂಕಿಂಗ್ ಎರಡೂ ವಲಯಗಳನ್ನು ಬಲಪಡಿಸಲು ಆರ್ಬಿಐ ಶಿಫಾರಸು ಮಾಡಿದೆ. ಮೂಲಸೌಕರ್ಯಗಳ ಮೇಲಿನ ವೆಚ್ಚ ಮತ್ತು ಕಾರ್ಮಿಕ ಕಾನೂನು ಹಾಗೂ ತೆರಿಗೆ ಪದ್ಧತಿಯನ್ನು ರಚನಾತ್ಮಕವಾಗಿ ಸುಧಾರಣೆ ಮಾಡಲು ಅದು ಸಲಹೆ ನೀಡಿದೆ. ಆರ್ಬಿಐ ತನ್ನ ಪ್ರಮುಖ ದರಗಳನ್ನು ಶೇ 1.10ರಷ್ಟು ಕಡಿತಗೊಳಿಸಿದೆ. ಇದು ಕಳೆದ ಒಂಬತ್ತು ವರ್ಷಗಳಲ್ಲಿಯೇ ಕಡಿಮೆಯಾಗಿದೆ. ನಾಲ್ಕು ಸತತ ಕಡಿತಗಳಲ್ಲಿ ಶೇ 5.4ರಷ್ಟು ದರ ಕಡಿತ ಮಾಡಲಾಗಿದೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications