Nokia Layoffs: ಮಾರಾಟದಲ್ಲಿ ಕುಸಿತ- 14,000 ಉದ್ಯೋಗಿಗಳನ್ನು ವಜಾಗೊಳಿಸಿದ ನೋಕಿಯಾ
5G ಸಾಧನಗಳ ಮಾರಾಟದಲ್ಲಿ ಕುಸಿತದಿಂದಾಗಿ 14,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಫಿನ್ನಿಷ್ ಟೆಲಿಕಾಂ ಕಂಪನಿ ನೋಕಿಯಾ(Nokia) ಗುರುವಾರ ತಿಳಿಸಿದೆ. ರಾಯಿಟರ್ಸ್ ವರದಿಯ ಪ್ರಕಾರ, ಮೂರನೇ ತ್ರೈಮಾಸಿಕದಲ್ಲಿ ಮಾರಾಟದಲ್ಲಿ ಶೇಕಡಾ 20 ರಷ್ಟು ಕುಸಿತದ ನಂತರ ಕಂಪನಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ನೋಕಿಯಾ ಬ್ರ್ಯಾಂಡ್ ಗೊತ್ತಿಲ್ಲದವರೇ ಇಲ್ಲ. ಕೆಲವು ವರ್ಷಗಳ ಹಿಂದೆ, ಇದು ಮೊಬೈಲ್ ಮಾರುಕಟ್ಟೆಯಲ್ಲಿ ಅಗ್ರಸ್ತಾನದಲ್ಲಿದ್ದ ಕಂಪನಿಯಾಗಿತ್ತು. ಆದರೆ ಇತ್ತೀಚೆಗೆ ನೋಕಿಯಾ ಕಂಪನಿಗೆ ಮಾರುಕಟ್ಟೆಯಲ್ಲಿ ಬೆಲೆಯೇ ಇಲ್ಲದಂತಾಗಿದೆ. ಎಷ್ಟೇ ಹೊಸ ಫೋನ್ಗಳನ್ನು ಬಿಡುಗಡೆ ಮಾಡಿದ್ರೂ ಕೆಲವು ದಿನಗಳವರೆಗೆ ಮಾತ್ರ ಬೇಡಿಕೆಯಿರುತ್ತದೆ. ಆದರೆ ನಂತರದಲ್ಲಿ ಈ ಕಂಪನಿಯ ಸ್ಮಾರ್ಟ್ಫೋನ್ಗಳಿಗೆ ಬೇಡಿಕೆಯೇ ಇಲ್ಲದಂತಾಗಿದೆ.

ಹೀಗಾಗಿ ನೋಕಿಯಾ ಕಂಪನಿ ಟೆಕ್ ವಲಯದಲ್ಲಿ ವೇಗವಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಪಾರ ನಷ್ಟವನ್ನು ಕಂಪನಿ ಅನುಭವಿಸಿದೆ. ಇದರ ಬೆನ್ನಲ್ಲೇ ಕಂಪನಿ ಸಾವಿರಾರು ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡುತ್ತಿದೆ. ನೋಕಿಯಾ ಯುಎಸ್ನಂತಹ ದೇಶಗಳಲ್ಲಿ 5G ಸಾಧನಗಳ ಮಾರಾಟಕ್ಕಾಗಿ ಹೋರಾಡುತ್ತಿದೆ. ಕಂಪನಿ ಕಡಿಮೆ ಲಾಭದಾಯಕ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವನ್ನು ಹೆಚ್ಚಿಸುವ ಮೂಲಕ ಈ ನಷ್ಟವನ್ನು ಸರಿದೂಗಿಸಲು ಪ್ರಯತ್ನಿಸುತ್ತಿದೆ.
2023 ರ ವೇಳೆಗೆ 800 ಮಿಲಿಯನ್ ಯುರೋಗಳಷ್ಟು ($ 842.5 ಬಿಲಿಯನ್) ಮತ್ತು 2026 ರ ಅಂತ್ಯದ ವೇಳೆಗೆ 1.2 ಬಿಲಿಯನ್ ಯುರೋಗಳ ನಡುವೆ ಒಟ್ಟು ಆಧಾರದ ಮೇಲೆ ಅದರ ವೆಚ್ಚದ ಆಧಾರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಇದು ಪ್ರಸ್ತುತ ಉದ್ಯೋಗಿಗಳನ್ನು 86,000 ರಿಂದ 72,000 ಮತ್ತು 77,000 ರ ನಡುವೆ ಕಡಿಮೆ ಮಾಡುತ್ತದೆ.
Nokia ಮೂರನೇ ತ್ರೈಮಾಸಿಕ ನಿವ್ವಳ ಮಾರಾಟವು ವರ್ಷದಿಂದ ವರ್ಷಕ್ಕೆ 20 ಪ್ರತಿಶತದಷ್ಟು ಕುಸಿದು 4.98 ಶತಕೋಟಿ ಯುರೋಗಳಿಗೆ ಇಳಿದಿದೆ. ನಂತರ ವೆಚ್ಚ ಕಡಿತ ಯೋಜನೆಯ ಭಾಗವಾಗಿ 14,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ Nokia ಗುರುವಾರ ಹೇಳಿದೆ. ಈ ಅವಧಿಯಲ್ಲಿನ ಲಾಭವು ವರ್ಷದಿಂದ ವರ್ಷಕ್ಕೆ 69 ಶೇಕಡಾ 133 ಮಿಲಿಯನ್ ಯುರೋಗಳಿಗೆ ಕುಸಿದಿದೆ.
ಇತ್ತೀಚೆಗಷ್ಟೆ ನೋಕಿಯಾ ಅರವತ್ತು ವರ್ಷಗಳ ಬಳಿಕ ತನ್ನ ಲೋಗೋವನ್ನು ಚೇಂಜ್ ಮಾಡಿತ್ತು. ಆರು ದಶಕಗಳ ಕಾಲ ಒಂದೇ ಲೋಗೋವನ್ನು ಉಳಿಸಿಕೊಂಡು ಬಂದಿದ್ದ ನೋಕಿಯಾ ಹೊಸ ಲೋಗೋದಲ್ಲಿ 'ನೋಕಿಯಾ' ಪದದ ಐದು ಅಕ್ಷರಗಳು ಐದು ವಿಭಿನ್ನ ಶೈಲಿಯಲ್ಲಿತ್ತು. ಈ ಹಿಂದೆ ನೀಲಿ ಬಣ್ಣದಲ್ಲಿದ್ದ ನೋಕಿಯಾ ಅಕ್ಷರಗಳಿಗೆ ಇದೀಗ ಹೊಸ ರೂಪ ನೀಡಲಾಗಿದ್ದು ವಿನೂತನ ಡಿಸೈನ್ನ 5 ಫಾಂಟ್ನಲ್ಲಿ ಬಣ್ಣ ಬಣ್ಣದಲ್ಲಿ ನೋಕಿಯಾ ಪದದ ಅಕ್ಷರಗಳು ಲೋಗೋದಲ್ಲಿ ಕಂಗೊಳಿಸುತ್ತಿವೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications