ಹೊಸ ದಾಖಲೆ ಬರೆದ ನಿಫ್ಟಿ, ದಿನಾಂತ್ಯಕ್ಕೆ 10,153.10
ಸೆಪ್ಟೆಂಬರ್ 18, 2017- ನಿಫ್ಟಿ 50ರ ಪಾಲಿಗೆ ಐತಿಹಾಸಿಕ ದಿನ. ಸೋಮವಾರ ಮಾರುಕಟ್ಟೆ ಮುಕ್ತಾಯದ ಹೊತ್ತಿಗೆ ಸಾರ್ವಕಾಲಿಕ ದಾಖಲೆ ಬರೆದ ನಿಫ್ಟಿಗೆ ಜಾಗತಿಕ ಮಾರುಕಟ್ಟೆಯ ಸಕಾರಾತ್ಮಕ ಪರಿಣಾಮ ಕೂಡ ಸಹಾಯಕವಾಯಿತು.
ಇದೀಗ ಮಂಗಳವಾರದಿಂದ ಆರಂಭವಾಗಲಿರುವ ಫೆಡರಲ್ ರಿಸರ್ವ್ ನೀತಿಯ ಸಭೆಯ ಮೇಲೆ ಮಾರುಕಟ್ಟೆ ಕಣ್ಣು ನೆಟ್ಟಿದೆ. ನಿಫ್ಟಿ 50 ಷೇರುಗಳ ಗುಚ್ಛವು 67.70 ಅಂಶದಷ್ಟು ಏರಿಕೆ ಕಂಡು, ಸಾರ್ವಕಾಲಿಕ ದಾಖಲೆಯಾದ 10,153.10 ಅಂಶಗಳನ್ನು ತಲುಪಿತು. ಇನ್ನು 151.15 ಅಂಶಗಳಷ್ಟು ಏರಿಕೆ ಕಂಡ ಸೆನ್ಸೆಕ್ಸ್ 32,423.76ರಲ್ಲಿ ದಿನಾಂತ್ಯಗೊಂಡಿತು.

ಸಾರ್ವಕಾಲಿಕ ದಾಖಲೆಯಾದ 32,686.48 ಅಂಶದಿಂದ ಸೆನ್ಸೆಕ್ಸ್ 263 ಅಂಶಗಳಷ್ಟೇ ಹಿಂದಿದೆ. ಈ ರೀತಿ ಷೇರು ಮಾರುಕಟ್ಟೆ ಏರಿಕೆ ಮುಂದುವರಿಯುವ ಸಾಧ್ಯತೆ ಇದೆ ಎನ್ನುವವರು ಇರುವಂತೆಯೇ ಕಂಪೆನಿಗಳ ಸೆಪ್ಟೆಂಬರ್ ತ್ರೈ ಮಾಸಿಕ ಫಲಿತಾಂಶ ಸರಿಯಾಗಿಲ್ಲ ಅಂದರೆ ದಿಢೀರ್ ಕುಸಿತ ಕಾಣಬಹುದು ಎನ್ನುವವರೂ ಇದ್ದಾರೆ.
ದೇಸಿ ಮಾರುಕಟ್ಟೆಯಲ್ಲಿ ಹಣದ ಹರಿವು ಚೆನ್ನಾಗಿದೆ, ವಿದೇಶಿ ಕರೆನ್ಸಿ ಎದುರು ಭಾರತದ ರುಪಾಯಿ ಮೌಲ್ಯ ಸ್ಥಿರವಾಗಿದೆ, ಜತೆಗೆ ಜಾಗತಿಕ ಮಟ್ಟದಲ್ಲೂ ಉತ್ತಮ ವಾತಾವರಣ ಇರುವುದರಿಂದ ಷೇರು ಮಾರುಕಟ್ಟೆ ಹೊಸ ಎತ್ತರಕ್ಕೆ ಏರಿದೆ.
ಲಾರ್ಸನ್, ಹಿಂದೂಸ್ತಾನ್ ಯುನಿಲಿವರ್, ವೇದಾಂತ, ಇಂಡಸ್ ಇಂಡ್ ಬ್ಯಾಂಕ್, ಬಜಾಜ್ ಆಟೋದಂಥ ಲಾರ್ಜ್ ಕ್ಯಾಪ್ ಷೇರುಗಳು ಉತ್ತಮ ಏರಿಕೆ ಕಂಡವು. ಭಾರತಿ ಇನ್ ಫ್ರಾಟೆಲ್ ಶೇ 4ರಷ್ಟು ಏರಿಕೆ ಕಂಡಿತು. ಎಲ್ಲ ವಲಯದ ಸೂಚ್ಯಂಕವೂ ಸೋಮವಾರ ಏರಿಕೆ ಕಂಡಿವೆ.
ಮಾರುಕಟ್ಟೆಯಲ್ಲಿ ವ್ಯವಹಾರ ಆರಂಭಿಸಿದ ಮೊದಲ ದಿನವೇ ಡಿಕ್ಸನ್ ಟೆಕ್ನಾಲಜೀಸ್ ಷೇರು ಶೇ 64ರಷ್ಟು ಏರಿಕೆ ಕಂಡು ರು.2,891.75 ಕೊನೆಗೊಂಡಿತು. ಆ ಷೇರನ್ನು ರು. 1766ಕ್ಕೆ ಸಾರ್ವಜನಿಕರಿಗೆ ವಿತರಿಸಲಾಗಿತ್ತು.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications