ಮೈಕ್ರೋಸಾಫ್ಟ್ ನಿಂದ 'ತರಬೇತುದಾರರಿಗೆ ತರಬೇತಿ’ ಕಾರ್ಯಕ್ರಮ
ಬೆಂಗಳೂರು, ಆಗಸ್ಟ್ 24, 2020: ಭಾರತದ ಶೈಕ್ಷಣಿಕ ಸಮುದಾಯದಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್ ಕೌಶಲ್ಯಗಳು ಮತ್ತು ಸಾಮರ್ಥ್ಯಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮೈಕ್ರೋಸಾಫ್ಟ್ ಹೊಸ ಕಾರ್ಯಕ್ರಮವನ್ನು ರೂಪಿಸುತ್ತಿದೆ. ಈ ಉಪಕ್ರಮದ ಭಾಗವಾಗಿ ಮೈಕ್ರೋಸಾಫ್ಟ್ 'ಗೆರೇಜ್ ತರಬೇತುದಾರರಿಗೆ ತರಬೇತಿ' ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
Recommended Video
ಜೈಪುರದ ಮಾಳವೀಯ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ(ಎಂಎನ್ಐಟಿ)ಯಲ್ಲಿನ ಎಲೆಕ್ಟ್ರಾನಿಕ್ಸ್ ಮತ್ತು ಐಸಿಟಿ ಅಕಾಡೆಮಿಗಳು ಹಾಗೂ ಪಾಟ್ನಾದ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಐಐಟಿ ಕಾನ್ಪುರ, ಐಐಟಿ ಗುವಾಹತಿ, ಐಐಟಿ ರೂರ್ಕಿ, ಎಂಎನ್ಐಟಿ ಜೈಪುರ, ಎನ್ಐಟಿ ಪಾಟ್ನಾ, ಐಐಐಟಿ-ಡಿ ಜಬಲ್ಪುರ ಮತ್ತು ಎನ್ಐಟಿ ವಾರಂಗಲ್ ನಂತಹ ಇ&ಐಸಿಟಿ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ 900 ಕ್ಕೂ ಹೆಚ್ಚು ಬೋಧಕ ಸಿಬ್ಬಂದಿಗೆ ಈ ಕಾರ್ಯಕ್ರಮದಲ್ಲಿ ಅವರ ಭವಿಷ್ಯದ ಕ್ವಾಂಟಮ್ ಗೆ ಸಂಬಂಧಿಸಿದಂತೆ ಅಗತ್ಯವಿರುವ ಕೌಶಲ್ಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.

ಕ್ವಾಂಟಮ್ ಕಂಪ್ಯೂಟಿಂಗ್ ಮಾಹಿತಿಗಳನ್ನು ಪ್ರಕ್ರಿಯೆಗೊಳಿಸುವ ನಿಟ್ಟಿನಲ್ಲಿ ಕ್ವಾಂಟಂ ಭೌತಶಾಸ್ತ್ರದ ಗುಣಲಕ್ಷಣಗಳನ್ನು ಅನ್ವಯಿಸುತ್ತದೆ. ಆರೋಗ್ಯ ರಕ್ಷಣೆ, ಇಂಧನ, ಪರಿಸರ ವ್ಯವಸ್ಥೆಗಳು, ಸ್ಮಾರ್ಟ್ ಮಟೀರಿಯಲ್ ಗಳು ಮತ್ತು ಇತ್ಯಾದಿಗಳ ಕ್ಷೇತ್ರಗಳಲ್ಲಿ ಕ್ವಾಂಟಮ್ ಕಂಪ್ಯೂಟರ್ ಗಳು ಹೊಸ ಹೊಸ ಆವಿಷ್ಕಾರಗಳಿಗೆ ಅನುವು ಮಾಡಿಕೊಡುತ್ತವೆ. ಮೈಕ್ರೋಸಾಫ್ಟ್ ಇಂತಹ ಕ್ವಾಂಟಮ್ ಭವಿಷ್ಯಗಳನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯಗಳನ್ನು ನಿರ್ಮಾಣ ಮಾಡುತ್ತಿದೆ.
ಅಂದರೆ, ಅಝ್ಯೂರ್ ಕ್ವಾಂಟಮ್ ನೊಂದಿಗೆ ಕ್ಲೌಡ್ ನಂತಹ ಭವಿಷ್ಯವನ್ನು ರೂಪಿಸಲಿದೆ. ಅಝ್ಯೂರ್ ಕ್ವಾಂಟಮ್ ಒಂದು ಕ್ಲೌಡ್ ಇಕೋಸಿಸ್ಟಂ ಆಗಿದ್ದು, ಮೈಕ್ರೋಸಾಫ್ಟ್ ಮತ್ತು ಅದರ ಪಾಲುದಾರರಿಂದ ವೈವಿಧ್ಯಮಯ ಕ್ವಾಂಟಮ್ ಸಾಫ್ಟ್ ವೇರ್, ಹಾರ್ಡ್ ವೇರ್ ಮತ್ತು ಸಲ್ಯೂಶನ್ ಗಳನ್ನು ಪಡೆದುಕೊಳ್ಳಲು ಡೆವಲಪರ್ ಗಳಿಗೆ ನೆರವಾಗಲಿದೆ. ಇದು ಬಿಲ್ಟ್ ಆನ್ ಅಝ್ಯೂರ್ ಆಗಿದ್ದು, ವಿಶ್ವಾಸಾರ್ಹತೆ, ಸ್ಕೇಲೇಬಲ್ ಮತ್ತು ಸುರಕ್ಷಿತವಾಗಿ ಪ್ಲಾಟ್ ಫಾರ್ಮ್ ಆಗಿದೆ.
ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಐಇಇಇ ಕ್ವಾಂಟಮ್ ಎಸ್ಐಜಿಯ ಅಧ್ಯಕ್ಷೆ ಮತ್ತು ಮೈಕ್ರೋಸಾಫ್ಟ್ ಗೆರೇಜ್ ಇಂಡಿಯಾದ ನಿರ್ದೇಶಕಿ ರೀನಾ ದಯಾಳ್ ಅವರು, ಜಗತ್ತು ಇಂದು ಎದುರಿಸುತ್ತಿರುವ ಹಲವಾರು ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್ ಸಹಕಾರಿಯಾಗುತ್ತದೆ. ಈ ಕಾರ್ಯಕ್ರಮದ ಮೂಲಕ ನಾವು ಭಾರತದಲ್ಲಿನ ಶಿಕ್ಷಣ ಕ್ಷೇತ್ರವನ್ನು ಸಮಗ್ರ ಕ್ವಾಂಟಮ್ ಕಲಿಕೆಗೆ ಅಗತ್ಯವಿರುವ ಜ್ಞಾನಾರ್ಜನೆ ಮಾಡುವ ಸಜ್ಜುಗೊಳಿಸುವ ಉದ್ದೇಶವನ್ನು ಹೊಂದಿದ್ದೇವೆ. ಈ ಮೂಲಕ ಬೋಧಕ ಸಿಬ್ಬಂದಿ ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಕ್ವಾಂಟಮ್ ಕಲಿಕಾ ಕೌಶಲ್ಯಗಳನ್ನು ಹೆಚ್ಚಿಸಬಹುದಾಗಿದೆ ಮತ್ತು ದೇಶದ ಪ್ರಜ್ವಲ ಮನಸುಗಳಲ್ಲಿ ಈ ಕೌಶಲ್ಯಗಳನ್ನು ಕರಗತ ಮಾಡಿಸಲು ನೆರವಾಗಲಿದೆ'' ಎಂದು ತಿಳಿಸಿದರು.
ಈ ತರಬೇತಿ ಕಾರ್ಯಕ್ರಮ ಆಗಸ್ಟ್ 24 ರಂದು ಆರಂಭವಾಗಿದ್ದು, ಆಗಸ್ಟ್ 29 ರವರೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮೈಕ್ರೋಸಾಫ್ಟ್ ಕ್ಯ# ಮತ್ತು ಕ್ವಾಂಟಮ್ ಡೆವಲಪ್ ಮೆಂಟ್ ಕಿಟ್ ಬಳಸಿಕೊಂಡು ಪ್ರಾಯೋಗಿಕ ಕೋಡಿಂಗ್ ತರಬೇತಿಯನ್ನೂ ನೀಡಲಾಗುತ್ತದೆ.
-
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ












Click it and Unblock the Notifications