ಜೀವವಿಮೆ ಕಂತು ಕಟ್ಟುವ ದಿನಾಂಕ ವಿಸ್ತರಣೆ
ನವದೆಹಲಿ, ನವೆಂಬರ್ 27: ಜೀವ ವಿಮಾ ಯೋಜನೆ ಪ್ರೀಮಿಯಂ ಕಟ್ಟುವವರಿಗೆ ಶುಭ ಸುದ್ದಿ ಸಿಕ್ಕಿದೆ. ಪಾಲಿಸಿದಾರರು ತಮ್ಮ ವಿಮೆ ಕಂತನ್ನು ಇನ್ನೂ 30ದಿನ ಬಿಟ್ಟು ಕಟ್ಟಿದರೂ ತೊಂದರೆಯಿಲ್ಲ. ಪ್ರೀಮಿಯಂ ಪೇಮೆಂಟ್ ಕೊನೆ ದಿನಾಂಕವನ್ನು ಎಲ್ ಐಸಿ ವಿಸ್ತರಿಸಿದೆ.
ನವೆಂಬರ್ 8ರಿಂದ 500 ಹಾಗೂ 1000 ರುಪಾಯಿ ನೋಟುಗಳ ಬಳಕೆ ನಿಷೇಧವಾದ ಬಳಿಕ ದೊಡ್ಡ ಮೊತ್ತದ ಪ್ರೀಮಿಯಂ ಪಾವತಿಸಲು ಗ್ರಾಹಕರು ಪರದಾಡುತ್ತಿದ್ದಾರೆ. ಬ್ಯಾಂಕು ಹಾಗೂ ಎಟಿಎಂಗಳಿಂದ ನಗದು ಪಡೆಯಲು ಕೂಡಾ ಆಗುತ್ತಿಲ್ಲ. ಅಲ್ಲದೆ, ವಾರಕ್ಕೆ 24,000 ರುಪಾಯಿ ವಿಥ್ ಡ್ರಾ ಮಿತಿ ನೀಡಲಾಗಿದೆ.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಎಲ್ ಐಸಿ ತನ್ನ ಗ್ರಾಹಕರಿಗೆ ಆದಷ್ಟು ಆನ್ ಲೈನ್ ಮೂಲಕ ವಿಮೆ ಕಂತು ಪಾವತಿಸುವಂತೆ ಸೂಚಿಸಿದೆ. ನಗದುರೂಪದಲ್ಲಿ ಪ್ರೀಮಿಯಂ ಭರಿಸಲು ಬಯಸುವವರಿಗೆ ಇನ್ನೂ ಒಂದು ತಿಂಗಳ ಅವಕಾಶ ನೀಡಲಾಗಿದೆ. ಇದು ನವೆಂಬರ್ 8 ರಿಂದ ಡಿಸೆಂಬರ್ 31, 2016 ರ ಅವಧಿಯಲ್ಲಿ ಪ್ರೀಮಿಯಂ ಕಟ್ಟಬೇಕಾಗಿರುವ ಗ್ರಾಹಕರಿಗೆ ಅನ್ವಯವಾಗಲಿದೆ.
1ಕೋಟಿ ರು ತನಕದ ಮನೆ, ಕಾರು, ತೋಟ ಇನ್ನಿತರ ಸಾಲಗಳ ರೀಪೇಮೆಂಟ್ ದಿನಾಂಕವನ್ನು 60ದಿನಗಳ ಕಾಲ ವಿಸ್ತರಿಸಿ ಆರ್ ಬಿಐ ಪ್ರಕಟಣೆ ಹೊರಡಿಸಿದ ಮೇಲೆ ಎಲ್ ಐಸಿ ಈ ಕ್ರಮ ಕೈಗೊಂಡಿದೆ.(ಪಿಟಿಐ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications