ಕೊಚ್ಚಿ-ಬೆಂಗಳೂರು ನಡುವಿನ ಗ್ಯಾಸ್ ಪೈಪ್ಲೈನ್ ಯೋಜನೆ ಶೀಘ್ರದಲ್ಲೇ ಪೂರ್ಣ
ಮುಂಬೈ, ನವೆಂಬರ್ 23: ಕೊಚ್ಚಿ-ಮಂಗಳೂರು ನಡುವಿನ ಗ್ಯಾಸ್ ಪೈಪ್ ಲೈನ್ ಅನ್ನು ದೀರ್ಘ ವಿಳಂಬದ ಬಳಿಕ ಪೂರ್ಣಗೊಳಿಸಿದ್ದ ರಾಷ್ಟ್ರೀಯ ಪ್ರಮುಖ ಅನಿಲ ಸಂಸ್ಥೆ ಗೇಲ್ ಇಂಡಿಯಾ, ಕೊಚ್ಚಿ-ಬೆಂಗಳೂರು ನಡುವಿನ ಮಾರ್ಗದ ಮೊದಲ ಹಂತವನ್ನು ಜನವರಿಯಲ್ಲಿ ಪೂರ್ಣಗೊಳಿಸುವ ಭರವಸೆ ಇದೆ ಎಂದು ಹೇಳಿದೆ.
ಕಳೆದ ವಾರವಷ್ಟೇ ಮಂಗಳೂರು-ಕೊಚ್ಚಿ ಮಾರ್ಗದ ಪೈಪ್ಲೈನ್ ಪೂರ್ಣಗೊಳಿಸಲಾಗಿತ್ತು. 620 ಕಿ.ಮೀ ಉದ್ದದ ಕೊಚ್ಚಿ-ಬೆಂಗಳೂರು ಗ್ಯಾಸ್ ಪೈಪ್ಲೈನ್ ಯೋಜನೆಯನ್ನು ವಲಯಾರ್ಗೆ ವಿಸ್ತರಿಸಲಾಗಿದ್ದು, ಇದರ 95 ಕಿ.ಮೀ ಉದ್ದದ ಪೈಪ್ಲೈನ್ ಯೋಜನೆಯು ಪ್ರಗತಿಯಲ್ಲಿದೆ ಎಂದು ಗೇಲ್ನ ದಕ್ಷಿಣ ಪ್ರಾಂತೀಯ ಉಸ್ತುವಾರಿ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಮುರುಗೇಸನ್ ತಿಳಿಸಿದ್ದಾರೆ.
ಕೊಚ್ಚಿ-ಬೆಂಗಳೂರು ಯೋಜನೆಗೆ ಆರಂಭದಲ್ಲಿ 2,500 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ವಿಳಂಬ ಮತ್ತು ಇತರೆ ಕಾರಣಗಳಿಂದ ವೆಚ್ಚ ದುಪ್ಪಟ್ಟಾಗಿದೆ. ಆದರೆ ಕುಟ್ಟನಾಡ್-ಪಾಲಕ್ಕಾಡ್ ನಡುವಿನ ವಿಸ್ತರಣೆಯು ಈಗಿನಿಂದ ಯಾವಾಗ ಬೇಕಾದರೂ ಪೂರ್ಣಗೊಳ್ಳಲಿದ್ದು, ಜನವರಿ ವೇಳೆಗೆ ವಲಯಾರ್ವರೆಗೆ ಮತ್ತು ಮಾರ್ಚ್ ವೇಳೆಗೆ ಕೊಯಮತ್ತೂರಿನಲ್ಲಿ 280 ಕಿ.ಮೀ. ಉದ್ದದವರೆಗೆ ಪೂರ್ಣಗೊಳ್ಳಲಿದೆ.

ಈ ಮಾರ್ಗವು ತಮಿಳುನಾಡಿನ ಏಳು ಜಿಲ್ಲೆಗಳ ಮೂಲಕ ಹಾದುಹೋಗಲಿದ್ದು, ಕೊಚ್ಚಿಯಿಂದ ಶುರುವಾಗಿ ಕೊಯಮತ್ತೂರು, ಈರೋಡ್, ಸೇಲಂ, ತಿರುಪುರ್, ಕೃಷ್ಣಗಿರಿ, ಧರ್ಮಗಿರಿ ಮತ್ತು ಹೊಸೂರು ಮೂಲಕ ಬೆಂಗಳೂರಿಗೆ ತಲುಪುತ್ತದೆ. ಕೃಷ್ಣಗಿರಿ ವಿಸ್ತರಣೆಯು ಬಹುತೇಕ ಪೂರ್ಣಗೊಂಡಿದ್ದರೆ, ವಲಯಾರ್-ಕೊಯಮತ್ತೂರು ನಡುವೆ ಅಂತಿಮ ಕೆಲಸ ನಡೆಯುತ್ತಿದೆ ಎಂದು ಮುರುಗೇಶನ್ ಹೇಳಿದ್ದಾರೆ.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications