Share Market: ಷೇರುಪೇಟೆ ಅಲ್ಲೋಲ ಕಲ್ಲೋಲ; ಕರಗಿದ ₹38 ಲಕ್ಷ ಕೋಟಿ ಸಂಪತ್ತು
ಲೋಕಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಮಂಗಳವಾರ ಷೇರು ಸೂಚ್ಯಂಕದಲ್ಲಿ ಭಾರಿ ಕುಸಿತ ಕಂಡಿದ್ದು, ಹೂಡಿಕೆದಾರರು ಭಾರಿ ನಷ್ಟ ಅನುಭವಿಸಿದ್ದಾರೆ.
ಇಂಟ್ರಾಡೇ ವಹಿವಾಟಿನಲ್ಲಿ ಬಿಎಸ್ಇನಲ್ಲಿ ಪಟ್ಟಿ ಮಾಡಿದ ಕಂಪನಿಗಳ ಮೌಲ್ಯ ಸರಿಸುಮಾರು ₹38 ಲಕ್ಷ ಕೋಟಿಗಳಷ್ಟು ಸಂಪತ್ತು ಕರಗಿಹೋಗಿದೆ. ಮಂಗಳವಾರ ಮಧ್ಯಾಹ್ನ 12.15ರ ವೇಳೆಗೆ ಮಾರುಕಟ್ಟೆ ಒಟ್ಟಾರೆ ಮೌಲ್ಯ ₹426 ಲಕ್ಷ ಕೋಟಿಯಿಂದ ₹388 ಲಕ್ಷ ಕೋಟಿಗೆ ಕುಸಿದಿದೆ.

ಎಕ್ಸಿಟ್ ಪೋಲ್ನಲ್ಲಿ ಎನ್ಡಿಎಗೆ ಸಂಪೂರ್ಣ ಬಹುಮತ ಬರುತ್ತದೆ ಎಂದು ಹೇಳಿದ ಬಳಿಕ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಏರಿಕೆ ಕಂಡಿತ್ತು. ಆದರೆ ಇಂದು ಫಲಿತಾಂಶ ಎಕ್ಸಿಟ್ ಪೋಲ್ ಅಂಕಿ ಅಂಶಗಳಿಗಿಂತ ಭಿನ್ನವಾಗಿದ್ದು ಷೇರು ಮಾರುಕಟ್ಟೆಯಲ್ಲಿ ಕುಸಿತಕ್ಕೆ ಕಾರಣವಾಯಿತು.
ಸೆನ್ಸೆಕ್ಸ್ ಮತ್ತು ನಿಫ್ಟಿ 50 ಸೂಚ್ಯಂಕಗಳು ತಲಾ 8 ಪ್ರತಿಶತದಷ್ಟು ಬಿರುಕು ಬಿಟ್ಟರೆ, ಬಿಎಸ್ಇ ಮಿಡ್ಕ್ಯಾಪ್ ಸೂಚ್ಯಂಕವು ಶೇಕಡಾ 10 ರಷ್ಟು ಕಡಿಮೆಯಾಗಿದೆ ಮತ್ತು ಬಿಎಸ್ಇ ಸ್ಮಾಲ್ಕ್ಯಾಪ್ ಮಂಗಳವಾರ ಇಂಟ್ರಾಡೇನಲ್ಲಿ ಶೇಕಡಾ 8 ಕ್ಕಿಂತ ಹೆಚ್ಚು ನಷ್ಟವನ್ನು ಅನುಭವಿಸಿತು.
ಎಕ್ಸಿಟ್ ಪೋಲ್ಗಳು ಊಹಿಸಿದಂತೆ ಭಾರತೀಯ ಷೇರು ಮಾರುಕಟ್ಟೆಯು ಈಗಾಗಲೇ ಎನ್ಡಿಎಗೆ ಗಮನಾರ್ಹ ಬಹುಮತಕ್ಕೆ ಕಾರಣವಾಗಿದೆ ಎಂದು ತಜ್ಞರು ಗಮನಸೆಳೆದಿದ್ದಾರೆ. ಆದರೆ, ಆರಂಭಿಕ ಪ್ರವೃತ್ತಿಗಳು ಫಲಿತಾಂಶಗಳು ಮಾರುಕಟ್ಟೆಯ ನಿರೀಕ್ಷೆಗಳೊಂದಿಗೆ ಹೊಂದಿಕೆಯಾಗದ ಕಾರಣ ಮಾರುಕಟ್ಟೆ ಕುಸಿತ ಕಂಡಿದೆ.
ತೀವ್ರ ಕುಸಿತದ ಬಳಿಕ ಚೇತರಿಕೆ
ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವು 76,300.46 ಅಂಕಗಳೊಂದಿಗೆ ಶುರುವಾಗಿದ್ದು 12.30ರ ವೇಳೆಗೆ 70,234.43 ಕ್ಕೆ ಕುಸಿತ ಕಂಡಿತು. ಬಳಿಕ ಮತ್ತೆ ಸುಧಾರಿಸಿಕೊಂಡ ಸೂಚ್ಯಂಕ ಏರಿಕೆ ಕಾಣಲಾರಂಭಿಸಿತು. ಮಧ್ಯಾಹ್ನ 12.55 ರ ವೇಳೆಗೆ 72,458 ಅಂಕಗಳಿಗೆ ಏರಿಕೆ ಕಂಡು ಬಳಿಕ ಮತ್ತೆ ಕುಸಿತ ಕಂಡಿದೆ.












Click it and Unblock the Notifications