ಸಾವಿರಾರು ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲಿರುವ ಇಂಟೆಲ್
ಆಲ್ಫಾಬೆಟ್ ಮಾಲೀಕತ್ವದ ಗೂಗಲ್, ಮೈಕ್ರೋಸಾಫ್ಟ್, ವಿಪ್ರೋ, ಇನ್ಫೋಸಿಸ್ ಮತ್ತು ಫೇಸ್ಬುಕ್-ಪೋಷಕ ಮೆಟಾ ಹೀಗೆ ಉದ್ಯೋಗ ಕಡಿತಗೊಳಿಸಿದ ಸಂಸ್ಥೆಗಳ ಸಾಲಿಗೆ ಪ್ರಮುಖ ಕಂಪನಿ ಸೇರ್ಪಡೆಗೊಂಡಿದೆ. ಚಿಪ್ ತಯಾರಕ ಸಂಸ್ಥೆ ಇಂಟೆಲ್ ಕಾರ್ಪ್ ಹೊಸದಾಗಿ ಸೇರಿಕೊಂಡಿದೆ.
ಪರ್ಸನಲ್ ಕಂಪ್ಯೂಟರ್ ಮಾರುಕಟ್ಟೆ ಕುಸಿತ ಕಾಣುತ್ತಿದ್ದು, ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಚಿಪ್ ತಯಾರಕ ಸಂಸ್ಥೆ ಇಂಟೆಲ್ ಕಾರ್ಪ್ ಯೋಜಿಸಿದೆ ಎಂದು ಬ್ಲೂಮ್ಬರ್ಗ್ ನ್ಯೂಸ್ ಮಂಗಳವಾರ ವರದಿ ಮಾಡಿದೆ
ಉದ್ಯೋಗಿಗಳ ಸಂಖ್ಯೆ ಕಡಿತದ ಬಗ್ಗೆ ಇಂಟೆಲ್ ಈ ಮುಂಚೆಯೇ ಸೂಚನೆ ನೀಡಿದ್ದು, ಸೇಲ್ಸ್ ಹಾಗೂ ಮಾರುಕಟ್ಟೆ ವಿಭಾಗದಲ್ಲಿ ಶೇ 20ರಷ್ಟು ಸಿಬ್ಬಂದಿಗಳನ್ನು ಮನೆಗೆ ಕಳಿಸಲು ನಿರ್ಧರಿಸಲಾಗಿದೆ ಎಂಬ ಸುದ್ದಿ ಬಂದಿದೆ. ಲಭ್ಯ ಮಾಹಿತಿ ಪ್ರಕಾರ ಜುಲೈ ಎಣಿಕೆಯಂತೆ 1,13,700 ಉದ್ಯೋಗಿಗಳನ್ನು ಸಂಸ್ಥೆ ಹೊಂದಿದೆ. ಆದರೆ, ಎಷ್ಟು ಮಂದಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಇಂಟೆಲ್ ಸ್ಪಷ್ಟಪಡಿಸಿಲ್ಲ.

ಎರಡನೇ ತ್ರೈಮಾಸಿಕದಲ್ಲಿ ನಿರೀಕ್ಷಿತ ಆದಾಯ, ನಿವ್ವಳ ಲಾಭ ಗಳಿಸಲು ಸಾಧ್ಯವಾಗದ ಕಾರಣ, ವಾರ್ಷಿಕ ಮಾರಾಟ ಮಾರ್ಗದರ್ಶಿಯನ್ನು ಇಂಟೆಲ್ ಪ್ರಕಟಿಸಿರಲಿಲ್ಲ.
ಸಾಂಕ್ರಾಮಿಕ-ಸಂಬಂಧಿತ ಲಾಕ್ಡೌನ್ಗಳ ಸಮಯಕ್ಕೆ ಹೋಲಿಸಿದರೆ ದಶಕಗಳಿಗೂ ಹೆಚ್ಚಿನ ಹಣದುಬ್ಬರ ಎದುರಾಗಿದ್ದು, ಕಚೇರಿಗಳು ಮತ್ತು ಶಾಲೆಗಳ ಪುನರಾರಂಭಗೊಂಡರೂ ಪರ್ಸನಲ್ ಕಂಪ್ಯೂಟರ್ ಖರೀದಿಗೆ ಜನರು ಹೆಚ್ಚಿನ ಉತ್ಸಾಹ ತೋರುತ್ತಿಲ್ಲ ಎಂದು ವಿಶ್ಲೇಷಣೆ ಮಾಡಲಾಗಿದೆ.
ಕೋವಿಡ್ 19 ಸಂದರ್ಭದಲ್ಲಿ ಹೊಡೆತಕ್ಕೆ ಸಿಲುಕಿದ್ದ ಇಂಟೆಲ್ ಪ್ರಸ್ತುತ ಉಕ್ರೇನ್-ರಷ್ಯಾ ಸಂಘರ್ಷದಿಂದ ನಷ್ಟ ಅನುಭವಿಸುತ್ತಿದೆ. ಬೇಡಿಕೆಗೆ ತಕ್ಕ ಪೂರೈಕೆ ಒದಗಿಸಲು ಸಾಧ್ಯವಾಗುತ್ತಿಲ್ಲ.
ಇಂಟೆಲ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ಯಾಟ್ ಗೆಲ್ಸಿಂಗರ್ ಮಂಗಳವಾರ ಕಂಪನಿಯ ಉದ್ಯೋಗಿಗಳಿಗೆ ಜ್ಞಾಪಕ ಪತ್ರ(memo)ವನ್ನು ಬಿಡುಗಡೆ ಮಾಡಿ, ಬಾಹ್ಯ ಗ್ರಾಹಕರು ಮತ್ತು ಕಂಪನಿಯ ಉತ್ಪನ್ನ ಲೈನ್ಗಳಿಗಾಗಿ ಆಂತರಿಕ ಫೌಂಡ್ರಿ ಮಾದರಿಯನ್ನು ರಚಿಸುವ ಯೋಜನೆಗಳನ್ನು ವಿವರಿಸಿದ್ದಾರೆ.
ಫೌಂಡ್ರಿ ವ್ಯವಹಾರವು ಇತರ ಕಂಪನಿಗಳು ವಿನ್ಯಾಸಗೊಳಿಸುವ ಚಿಪ್ಗಳನ್ನು ನಿರ್ಮಿಸುತ್ತದೆ ಮತ್ತು ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕೋ ಆ ಜಾಗದಲ್ಲಿ ಅಗ್ರ ಸಂಸ್ಥೆಗಳಾಗಿದೆ. ಇಂಟೆಲ್ ಮುಖ್ಯವಾಗಿ ಇದುವರೆಗೆ ಸ್ವತಃ ವಿನ್ಯಾಸಗೊಳಿಸಿದ ಚಿಪ್ಗಳನ್ನು ನಿರ್ಮಿಸಿ, ಮಾರಾಟುತ್ತಿದೆ.
ಇತ್ತ ಭಾರತದಲ್ಲಿ ಇನ್ಫೋಸಿಸ್, ವಿಪ್ರೋ ಮತ್ತು ಎಚ್ಸಿಎಲ್ ಕಂಪೆನಿಗಳಲ್ಲಿ ಫ್ರೆಶರ್ಗಳ ನೇಮಕಾತಿ ಕುರಿತಂತೆ ಗೊಂದಲ ಮುಂದುವರೆದಿದೆ. ಬಹುರಾಷ್ಟ್ರೀಯ ಐಟಿ ಕಂಪನಿ ಆಕ್ಸೆಂಚರ್ ಹೊಸ ಉದ್ಯೋಗಿಗಳನ್ನು ಸೇರ್ಪಡೆಗೊಳಿಸುವಲ್ಲಿ ವಿಳಂಬ ಮಾಡುತ್ತಿದೆ ಎಂಬ ಆರೋಪಗಳನ್ನು ಎದುರಿಸುತ್ತಿದೆ.
ಕೆಲಸದ ನಿಯೋಜನೆಯಲ್ಲಿ ವಿಳಂಬ ಮಾತ್ರವಲ್ಲದೆ ಕಂಪನಿಯು ಆಫರ್ ಲೆಟರ್ ನೀಡಿದ ನಂತರ ಸೇರಲು ನಿರಾಕರಿಸುವ ಮೂಲಕ ಫ್ರೆಶರ್ಗಳಿಗೆ ದೊಡ್ಡ ಹೊಡೆತವನ್ನು ನೀಡಿದೆ. ಟೆಕ್ ಕಂಪನಿಗಳ ಈ ಧೋರಣೆಯಿಂದ ಹೊಸ ಉದ್ಯೋಗಿಗಳು ಸಮಸ್ಯೆ ಎದುರಿಸುತ್ತಿದ್ದರೆ, ಇನ್ನೊಂದೆಡೆ ಅವರಲ್ಲಿ ಭವಿಷ್ಯದ ಕಾಳಜಿಯೂ ಹೆಚ್ಚಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications