ಭಾರತೀಯ ಟೆಕ್ಕಿಗಳಿಗೆ ಕೈ ತುಂಬಾ ಸಂಬಳ ಸಿಗ್ತಿಲ್ಲವಂತೆ!
ನವದೆಹಲಿ, ಸೆ. 22: ವಿಶ್ವದ ಅತಿ ಕಳಪೆ ಸಂಬಳ ಪಡೆಯುವ ಟಾಪ್ 10 ಪಟ್ಟಿಯಲ್ಲಿ ಭಾರತದ ಐಟಿ ಕಂಪನಿಗಳು ಕಾಣಿಸಿಕೊಂಡಿವೆ. ಸ್ವಿಸ್ ಕಂಪನಿಗಳು ಭಾರತೀಯ ಕಂಪನಿಗಳ ಉದ್ಯೋಗಿಗಳ ಸಂಬಳದ ನಾಲ್ಕು ಪಟ್ಟು ಪಗಾರ ಎಣಿಸುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.
ಮೈಹೈರಿಂಗ್ ಕ್ಲಬ್.ಕಾಂ ಎಂಬ ನೇಮಕಾತಿ ಸಂಸ್ಥೆ ನಡೆಸಿದ ಐಟಿ ಸ್ಯಾಲರಿ 2015 ಸಮೀಕ್ಷೆಯಲ್ಲಿ ಕಡಿಮೆ ಸಂಬಳ ಪಡೆಯುವ ಐಟಿ ಉದ್ಯೋಗಿ(ಮ್ಯಾನೇಜರ್ ಮಟ್ಟ)ಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ 7ನೇ ಸ್ಥಾನ ಪಡೆದುಕೊಂಡಿದೆ.ಕಳೆದ ವರ್ಷಕ್ಕಿಂತ ಒಂದು ಸ್ಥಾನ ಕೆಳಕ್ಕೆ ಕುಸಿದಿದೆ.
ಭಾರತದಲ್ಲಿ ಮಧ್ಯಮ ಶ್ರೇಣಿಯ ಐಟಿ ಮ್ಯಾನೇಜರ್ ವಾರ್ಷಿಕ 41,213 ಯುಎಸ್ ಡಾಲರ್ ಸಂಬಳ ಪಡೆಯುತ್ತಿದ್ದರೆ, ಕನಿಷ್ಠ ಸ್ಥಾನದಲ್ಲಿರುವ ಬಲ್ಗೇರಿಯಾದಲ್ಲಿ 25,680 ಡಾಲರ್ ನೀಡಲಾಗುತ್ತಿದೆ. ವಿಯೇಟ್ನಾಂ (30,938 ಡಾಲರ್) ಮತ್ತು ಥೈಲಂಡ್ (34,423 ಡಾಲರ್) ಅದಕ್ಕಿಂತ ಕೊಂಚ ಉತ್ತಮ ಸ್ಥಿತಿಯಲ್ಲಿರುವ ರಾಷ್ಟ್ರಗಳಾಗಿವೆ.

ನಂತರದ ಸ್ಥಾನಗಳಲ್ಲಿ ಇಂಡೋನೇಷ್ಯ (34,780 ಡಾಲರ್), ಫಿಲಿಪ್ಪೀನ್ಸ್(37,534 ಡಾಲರ್), ಚೀನಾ(42,689 ಡಾಲರ್), ಝೆಕ್ ರಿಪಬ್ಲಿಕ್ (43,219 ಡಾಲರ್) ಮತ್ತು ಅರ್ಜೆಂಟಿನಾ (51,380 ಡಾ.) ಇವೆ. ಇವುಗಳ ನಡುವೆ ಭಾರತ ಏಳನೆಯ ಸ್ಥಾನದಲ್ಲಿದೆ.
ಟೆಕ್ಕಿಗಳಿಗೆ ಅತಿ ಹೆಚ್ಚು ಸಂಬಳ ನೀಡುವ ರಾಷ್ಟ್ರಗಳಲ್ಲಿ ಸ್ವಿಝರ್ಲೆಂಡ್ ಅಗ್ರ ಸ್ಥಾನದಲ್ಲಿದೆ. ಅಲ್ಲಿ ಸರಾಸರಿ ವಾರ್ಷಿಕ 1,71,465 ಡಾ.ವೇತನ ಲಭಿಸುತ್ತಿದ್ದರೆ, 1,52,430 ಡಾಲರ್ ವೇತನದೊಂದಿಗೆ ಬೆಲ್ಜಿಯಂ ಎರಡನೆ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಡೆನ್ಮಾರ್ಕ್(1,38,920 ಡಾ.), ಅಮೆರಿಕ(1,32,877 ಡಾ.) ಮತ್ತು ಬ್ರಿಟನ್(1,29,324 ಡಾ.)ಗಳಿವೆ.
ಕಡಿಮೆ ವೇತನಕ್ಕೆ ಸೇವೆ ಲಭ್ಯವೆಂಬ ಕಾರಣಕ್ಕಾಗಿ ಭಾರತ ಅತ್ಯಂತ ಮೆಚ್ಚುಗೆಯ ಹೊರಗುತ್ತಿಗೆ ತಾಣವಾಗಿದೆ, ಆದರೆ ಭವಿಷ್ಯದಲ್ಲಿ ಈ ಚಿತ್ರಣ ಸಂಪೂರ್ಣ ವಿರುದ್ಧವಾಗಬಹುದು ಎಂದು ಸಮೀಕ್ಷೆಯು ಹೇಳಿದೆ.,ಆಗಸ್ಟ್.1-31, 2015ರ ಅವಧಿಯಲ್ಲಿ 40 ರಾಷ್ಟ್ರಗಳಲ್ಲಿನ ಒಟ್ಟೂ 9,413 ಐಟಿ ಕಂಪೆನಿಗಳನ್ನು ಸಮೀಕ್ಷೆಗೊಳಪಡಿಸಲಾಗಿತ್ತು. (ಪಿಟಿಐ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications