ಇರಾನ್ನಿಂದ ತೈಲ ಆಮದು ಹೆಚ್ಚಿಸಿದ ಭಾರತ
ನವದೆಹಲಿ, ಸೆಪ್ಟೆಂಬರ್ 3: ಇರಾನ್ ಮೇಲೆ ಅಮೆರಿಕವು ಮತ್ತೆ ಹೇರಿರುವ ದಿಗ್ಬಂಧನವು ನವೆಂಬರ್ನಿಂದ ಜಾರಿಗೆ ಬರಲಿದ್ದು, ಅದರ ನಡುವೆಯೇ ಇರಾನ್ನಿಂದ ತೈಲ ಆಮದು ಮಾಡಿಕೊಳ್ಳಲು ಭಾರತವು ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳಿಗೆ ಅನುಮತಿ ನೀಡಿದೆ.
ಅತ್ತ ಚೀನಾ ಇರಾನ್ನಿಂದ ತೈಲ ಆಮದನ್ನು ಮುಂದುವರಿಸಲು ಪ್ರಯತ್ನ ನಡೆಸಿದ್ದು, ಇರಾನ್ನ ರಾಷ್ಟ್ರೀಯ ಟ್ಯಾಂಕರ್ ಕೋ ಸಂಸ್ಥೆಯ ಹಡಗುಗಳಿಂದ ಭಾರತದತ್ತ ತೈಲವನ್ನು ತರಿಸಿಕೊಳ್ಳಲು ಭಾರತ ಮುಂದಾಗಿದೆ.
ನವೆಂಬರ್ನಿಂದ ಅಮೆರಿಕದ ನಿರ್ಬಂಧ ಜಾರಿಗೆ ಬಂದರೂ, ಜಗತ್ತಿನ ಮಾರುಕಟ್ಟೆಯ ಬೃಹತ್ ತೈಲ ಆಮದು ದೇಶಗಳಾದ ಭಾರತ ಮತ್ತು ಚೀನಾದ ನಡೆಯಿಂದ ಈ ನಿರ್ಬಂಧ ಸಂಪೂರ್ಣವಾಗಿ ಜಾರಿಗೆ ಬರುವುದು ಅನುಮಾನ.

ಇರಾನ್ ಮೇಲೆ ಹೇರಲಾಗಿದ್ದ ಆರ್ಥಿಕ ದಿಗ್ಬಂಧನಗಳನ್ನು 2015ರಲ್ಲಿ ಇರಾನ್ ಮತ್ತು ಜಗತ್ತಿನ ಆರು ಶಕ್ತಿಶಾಲಿ ದೇಶಗಳ ನಡುವಣ ಪರಮಾಣು ಒಪ್ಪಂದದ ಬಳಿಕ ತೆರವುಗೊಳಿಸಲಾಗಿತ್ತು. ಆ ದಿಗ್ಬಂಧನವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಹೇರಿದ್ದಾರೆ. ಇರಾನ್ ಜತೆ ತೈಲ ವ್ಯಾಪಾರ ನಡೆಸುವವರು ಅಮೆರಿಕ ಜತೆ ವ್ಯವಹಾರ ನಡೆಸುವಂತಿಲ್ಲ ಎಂದು ಟ್ರಂಪ್ ಹೇಳಿದ್ದರು.
ಅಮೆರಿಕದ ನಿರ್ಬಂಧವು ಜಾರಿಗೆ ಬರುವ ವೇಳೆಯಲ್ಲಿ ಇರಾನ್ನಿಂದ ಹೆಚ್ಚಿನ ಆಮದುದಾರರು ತಮ್ಮ ಸೇವೆಗಳನ್ನು ಸ್ಥಗಿತಗೊಳಿಸುತ್ತಿರುವ ಬೆನ್ನಲ್ಲೇ ಭಾರತ, ಆಮದು ಹೆಚ್ಚಳಕ್ಕೆ ಸಿದ್ಧತೆ ನಡೆಸಿದೆ.
ಇರಾನ್ ಹೆಚ್ಚೂಕಡಿಮೆ ಉಚಿತ ಶಿಪ್ಪಿಂಗ್ ಮತ್ತು ವಿಸ್ತೃತ ಸಾಲದ ಅವಧಿ ನೀಡುತ್ತಿದ್ದು, ಒಪೆಕ್ನ ಸದಸ್ಯ ದೇಶದಿಂದ ಪೆಟ್ರೋಲಿಯಂ ಖರೀದಿಸುವುದನ್ನು ಭಾರತ ಮುಂದುವರಿಸಿದೆ.
ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಜುಲೈನಲ್ಲಿ ದಿನಕ್ಕೆ 7,68,000 ಬ್ಯಾರೆಲ್ ತೈಲ ಆಮದು ಮಾಡಿಕೊಂಡಿದೆ. 2018-19ರ ಅವಧಿಯಲ್ಲಿ ಇದನ್ನು ದುಪ್ಪಟ್ಟು ಮಾಡುವ ಉದ್ದೇಶ ಹೊಂದಿದೆ.
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ












Click it and Unblock the Notifications