ಟೆಕ್ ಮಹೀಂದ್ರಾಗೆ ಶುಭ ಸುದ್ದಿ, 'ಇಡಿ' ಜಪ್ತಿಗೆ ಬ್ರೇಕ್ ಹಾಕಿದ ಹೈಕೋರ್ಟ್
ಹೈದರಾಬಾದ್, ಜನವರಿ 01 : ಪ್ರಮುಖ ಐಟಿ ಕಂಪನಿ ಟೆಕ್ ಮಹೀಂದ್ರಾಗೆ ಹೈದರಾಬಾದ್ ಹೈಕೋರ್ಟಿನಿಂದ ಶುಭ ಸುದ್ದಿ ಸಿಕ್ಕಿದೆ. ಸತ್ಯಂ ಕಂಪ್ಯೂಟರ್ ಖರೀದಿಸಿದ್ದ ಟೆಕ್ ಮಹೀಂದ್ರಾಗೆ ಲಭಿಸಿದ್ದ ನಿಶ್ಚಿತ ಠೇವಣಿ(ಸುಮಾರು 822 ಕೋಟಿ ರು) ಯನ್ನು ಜಪ್ತಿ ಮಾಡಲು ಜಾರಿ ನಿರ್ದೇಶನಾಲಯವು ಮುಂದಾಗಿತ್ತು. ಆದರೆ, ಈ ಕ್ರಮಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದ್ದು, ಟೆಕ್ ಮಹೀಂದ್ರಾಕ್ಕೆ ರಿಲೀಫ್ ಸಿಕ್ಕಿದೆ.
ಮನಿಲಾಂಡ್ರಿಂಗ್ ಪ್ರಕರಣದಲ್ಲಿ ಸಿಲುಕಿರುವ ಸತ್ಯಂ ಕಂಪ್ಯೂಟರ್ಸ್(ಈಗ ಟೆಕ್ ಮಹೀಂದ್ರಾದಲ್ಲಿ ವಿಲೀನ)ಗೆ ಸೇರಿದ ಬ್ಯಾಂಕ್ ಠೇವಣಿಯನ್ನು ವಶಕ್ಕೆ ಪಡೆಯಲು 2012 ರಲ್ಲಿ ಜಾರಿ ನಿರ್ದೇಶನಾಲಯವು ಆದೇಶ ನೀಡಿತ್ತು.
ಸತ್ಯಂ ಕಂಪ್ಯೂಟರ್ಸ್ ನಿಂದ ಅಕ್ರಮವಾಗಿ ಗಳಿಸಿದ ಮೊತ್ತವು ಈಗ ಟೆಕ್ ಮಹೀಂದ್ರಾ ಸೇರಿದೆ. ಈ ಮೊತ್ತವು ತನಿಖಾ ಸಂಸ್ಥೆಗೆ ಸೇರಬೇಕಿದೆ ಎಂದು ಜಾರಿ ನಿರ್ದೇಶನಾಲಯವು ವಾದಿಸಿತ್ತು.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ ಟೆಕ್ ಮಹೀಂದ್ರಾ ಪರ ವಕೀಲ್ ವಿವೇಕ್ ರೆಡ್ಡಿ, 2009 ರಲ್ಲಿ ಸತ್ಯಂ ಕಂಪ್ಯೂಟರ್ ಸರ್ವೀಸ್ ಲಿಮಿಟೆಡ್ (ಎಸ್ ಸಿಸಿಎಲ್) ಖರೀದಿಸಿದಾಗ, ಆ ಸಂಸ್ಥೆ ದಿವಾಳಿಯಾಗಿತ್ತು, ಯಾವುದೇ ಬ್ಯಾಂಕ್ ಠೇವಣಿ ಟೆಕ್ ಮಹೀಂದ್ರಾ ಪಾಲಾಗಿರಲಿಲ್ಲ. 2012 ರಲ್ಲಿ ತನಿಖಾ ಸಂಸ್ಥೆ ಜಪ್ತಿ ಆದೇಶ ನೀಡುವ ಸಂದರ್ಭದಲ್ಲಿ ಕಂಡು ಮೊತ್ತ ಠೇವಣಿ ಮೊತ್ತ ಎಲ್ಲವೂ ಟೆಕ್ ಎಂಗೆ ಸೇರಿದ್ದಾಗಿದೆ ಎಂದು ಹೇಳಿದರು.
ಆದರೆ, ಸುಮಾರು 2,171.45 ಕೋಟಿ ರು ಸಾಲದ ಮೊತ್ತವನ್ನು ಸಂಸ್ಥೆಯ ಉದ್ಯೋಗಿಗಳ ಸಂಬಳ ಇನ್ನಿತರ ವಿಷಯಕ್ಕೆ ಬಳಸಲಾಗಿದೆ. ಇದೆಲ್ಲವೂ ರಾಮಲಿಂಗರಾಜು ಅವರಿಗೆ ಸೇರಿದ ಮೊತ್ತವಾಗಿದೆ ಎಂದು ಜಾರಿ ನಿರ್ದೇಶನಾಲಯದ ವಕೀಲ ಪಿವಿ ಸುರೇಶ್ ಕುಮಾರ್ ವಾದಿಸಿದ್ದಾರೆ.
ಹೈದರಾಬಾದ್ ಹೈಕೋರ್ಟಿನ ಆದೇಶವನ್ನು ಪ್ರಶ್ನಿಸಿ, ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications